ಕ್ಯಾಪ್ಟನ್ ಮಾತಿಗೆ ನೊಂದು Bigg Boss ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ ಧನರಾಜ್ ಆಚಾರ್

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಕನ್ನಡದ 11 ನೇ ಸೀಸನ್ ನಲ್ಲಿ ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆ ನಿನ್ನೆಯಿಂದ ಆರಂಭವಾಗಿದೆ. ‌ಅದರಲ್ಲಿ ನಿನ್ನೆ ಕ್ಯಾಪ್ಟನ್ ಶಿಶಿರ್ (Shishir Shastri) ಅನುಷಾ ಅವರನ್ನು ನೇರ ನಾಮಿನೇಟ್ ಮಾಡಿದ್ದರು. ಇಂದು ಅವರು ಧನರಾಜ್ ಆಚಾರ್ ಅವರನ್ನು ನೇರವಾಗಿಯೇ ನಾಮಿನೇಟ್ ಮಾಡಿದ್ದಾರೆ.

ಮನೆಯ ಕ್ಯಾಪ್ಟನ್ ಶಿಶಿರ್ (Captain Shishir) ಅವರು ಧನರಾಜ್ ಅವರ ನೇರ ನಾಮಿನೇಷನ್ ಗೆ ಕಾರಣ ಕೊಡುತ್ತಾ, ಧನರಾಜ್ ಮನೆಯಲ್ಲಿ ಅತಿಥಿಯೋ, ಆಟಗಾರನೋ, ಫಲ್ ಕನ್‌ಪ್ಯೂಶನ್ ಇದೆ ಎಂದು ಹೇಳಿದ್ದಾರೆ. ನಾಮಿನೇಷನ್ ನಂತರ ಧನರಾಜ್ ಕಣ್ಣೀರನ್ನು ಹಾಕಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತಿರುವ ಧನರಾಜ್ ಅವರನ್ನು ಮನೆ ಮಂದಿ ಸಮಾಧಾನ ಮಾಡಿದ್ದಾರೆ. ಕ್ಯಾಪ್ಟನ್ ಕೊಟ್ಟ ಕಾರಣ ಧನರಾಜ್ ಅವರಿಗೆ ನೋವನ್ನು ಉಂಟು ಮಾಡಿರುವಂತೆ ಕಂಡಿದೆ. ‌ಧನರಾಜ್ ಮನೆಯಲ್ಲಿ ಏನು? ಈ ಒಂದು ಕನ್ಫ್ಯೂಶನ್‌ ಇದ್ದೇ ಇದೆ. ಈ ಗೊಂದರ ಮನೆ ಮಂದಿಗಲ್ಲ. ಸ್ವತಃ ಧನರಾಜ್‌ಗೆ ಇದೆ ಅನ್ನೋ ರೀತಿಯಲ್ಲಿ ಶಿಶಿರ್ ಹೇಳಿದ್ದಾರೆ.

ಈ ಮಾತುಗಳನ್ನು ಕೇಳಿ ಧನರಾಜ್ (Dhanaraj Achar) ಸಿಕ್ಕಾಪಟ್ಟೆ ಬೇಜಾರಾಗಿ ಕಣ್ಣೀರನ್ನು ಹಾಕಿದ್ದಾರೆ. ನಿನ್ನೆ ಶಿಶಿರ್ ಇಂತದ್ದೇ ಕಾರಣವನ್ನು ಕೊಟ್ಟಿದ್ದರಿಂದ ಅನುಷಾ ಕೂಡಾ ಫೈರ್ ಆಗಿದ್ದರು. ಕ್ಯಾಪ್ಟನ್ ನ ನೇರವಾಗಿ ಪ್ರಶ್ನೆ ಮಾಡಿದ್ದರು. ಅನುಷಾ ಮಾತುಗಳಿಗೆ ನೆಟ್ಟಿಗರ ಮೆಚ್ಚುಗೆ ಸಹಾ ಹರಿದು ಬಂದಿದೆ.

Leave a Comment