Nag Ashwin: ಸಿಟ್ಟು ಯಾಕೆ? ಆಡೋಕೆ ಬುಜ್ಜಿ ಕಾರು ಕಳಿಸ್ತೀನಿ, ಪ್ರಭಾಸ್ ಜೋಕರ್ ಎಂದ ನಟನಿಗೆ ನಾಗ್ ಅಶ್ವಿನ್ ಮಾತು

Written by Soma Shekar

Published on:

---Join Our Channel---

Nag Ashwin: ಬಾಲಿವುಡ್ ನಟ ಅರ್ಷದ್ ವಾರ್ಸಿ (Arshad Warsi) ಕೆಲವೇ ದಿನಹಳ ಹಿಂದೆಯಷ್ಟೇ ಕಲ್ಕಿ ಸಿನಿಮಾದ ಬಗ್ಗೆ ಮಾತಾಡ್ತಾ ತನಗೆ ಇಷ್ಟವಾಗದ ಸಿನಿಮಾ ಎಂದೂ, ಅಮಿತಾಬ್ ನಟನೆ ಚೆನ್ನಾಗಿದೆ ಆದರೆ ಪ್ರಭಾಸ್ ನ ಜೋಕರ್ ತರ ತೋರಿಸಲಾಗಿದೆ ಎಂದು ಹೇಳಿ ದೊಡ್ಡ ವಿ ವಾ ದ ವನ್ನೇ ಸೃಷ್ಟಿಸಿದ್ದಾರೆ. ಪ್ರಭಾಸ್ ಅಭಿಮಾನಿಗಳು ಮಾತ್ರವೇ ಅಲ್ಲದೇ ಟಾಲಿವುಡ್ ಸೆಲೆಬ್ರಿಟಿಗಳು ಅರ್ಷದ್ ಅವರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಈಗ ಕಲ್ಕಿ 2898 AD ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಅರ್ಷದ್ ವಾರ್ಸಿ ಅವರ ಮಾತಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಸ್ಪಲ್ಪ ಸರಿಯಾದ ಪದಗಳನ್ನು ಬಳಬೇಕಾಗಿತ್ತು, ಪರವಾಗಿಲ್ಲ ಎಂದು ಟ್ವೀಟ್ ಮಾಡಿರುವ ನಾಗ್ ಅಶ್ವಿನ್ ಈ ವಿಚಾರವನ್ನು ನಾರ್ತ್ ಮತ್ತು ಸೌತ್ ಎಂದು ವಿಭಜನೆ ಮಾಡಲು ಬಳಸಬಾರದು ಎಂದಿದ್ದಾರೆ.

ನಾವು ಮತ್ತೆ ಹಿಂದಕ್ಕೆ ಹೋಗೋದು ಬೇಡ. ಇನ್ನು ಉತ್ತರ-ದಕ್ಷಿಣ ಅಥವಾ ಬಾಲಿ ವರ್ಸಸ್ ಟಾಲಿ ಅನ್ನೋದು ಬೇಡ. ಬದಲಾಗಿ ದೊಡ್ಡ ಚಿತ್ರದ ಮೇಲೆ ಕಣ್ಣಿಡೋಣ. ಯುನೈಟೆಡ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿ ಎಂದಿರುವ ನಾಗ್ ಅಶ್ವಿನ್ ಅರ್ಷದ್ ಸಾಬ್ ತಮ್ಮ ಮಾತುಗಳು ಸ್ವಲ್ಪ ಸಾಫ್ಟ್ ಆಗಿಸಬಹುದಾಗಿತ್ತು,ಆದರೆ ಪರವಾಗಿಲ್ಲ ಎಂದಿದ್ದಾರೆ.

ಕೆ 2 ಚಿತ್ರದಲ್ಲಿ ಪ್ರಭಾಸ್‌ನ (Prabhas) ಪಾತ್ರ ಎದ್ದು ಕಾಣುವಂತೆ ಮಾಡಲು ಹೆಚ್ಚು ಕೆಲಸ ಮಾಡೋಕೆ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿರುವ ಅವರು ಅರ್ಷದ್ ವಿರುದ್ಧ ಟ್ರೋಲ್ ಮಾಡುತ್ತಿರವವರಿಗೆ ಇಷ್ಟು ದ್ವೇಷ ಯಾಕೆ? ಈಗಾಗಲೇ ಹೆಚ್ಚು ದ್ವೇಷ ಇದೆ. ನಾವು ಅದಕ್ಕೆ ಸೇರೋದು ಬೇಡ ಎಂದು ಅವರು ಹೇಳಿದ್ದಾರೆ. ಸಿಟ್ಟಾಗಬೇಡಿ, ಆಡೋಕೆ ಬುಜ್ಜಿ ಕಾರ್ ಕೊಡ್ತೀನಿ ಎಂದಿದ್ದಾರೆ.

Kannada Serials: ಕಾತರರಾಗಿ ಕಾಯ್ತಿದ್ದ ಪ್ರೇಕ್ಷಕರಿಗೆ ಒಂದೇ ರೀತಿಯ ಶಾಕ್ ಕೊಟ್ಟ ಸೀರಿಯಲ್ ಗಳು; ನಿರೀಕ್ಷೆ ಸುಳ್ಳಾಯ್ತು

Leave a Comment