Bigg Boss ಸ್ವರ್ಗ ವಾಸಿಗಳಿಗೆ ಮೊದಲ ದಿನವೇ ನರಕ ದರ್ಶನ ಮಾಡಿಸಿ ನೇರ ನಾಮಿನೇಟ್ ಆದ ಚೈತ್ರ ಕುಂದಾಪುರ

Written by Soma Shekar

Published on:

---Join Our Channel---

Bigg Boss Kannada 11 ಸ್ವರ್ಗ ನರಕ ಅನ್ನೋ ಕಾನ್ಸೆಪ್ಟ್ ನಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಆರಂಭ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಸಾಕಷ್ಟು ಘಟನೆಗಳು ನಡೆದಿವೆ. ನಾಮಿನೇಷನ್ ಪ್ರಕ್ರಿಯೆ ಸಹಾ ನಡೆದಿದೆ. ಇದೇ ವೇಳೆ ಸ್ವರ್ಗ ವಾಸಿಗಳಲ್ಲಿ ಬಹಳಷ್ಟು ಜನರಿಗೆ ನೇರವಾಗಿ ಟಾರ್ಗೆಟ್ ಆಗಿದ್ದಾರೆ ನರಕ ವಾಸಿ ಚೈತ್ರ ಕುಂದಾಪುರ.

ಚೈತ್ರ ಕುಂದಾಪುರ (Chaitra Kundapura) ಅವರು ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ಅಕ್ಷರಶಃ ನರಕವನ್ನು ತೋರಿಸಿದ್ದಾರೆ. ಚೈತ್ರ ಅವರ ನೇರ ಮಾತುಗಳಿಗೆ ಸ್ವರ್ಗ ವಾಸಿಗಳಿಗೆ ಉತ್ತರ ಕೊಡೋಕೆ ಆಗದೇ ಸುಮ್ಮನಾಗಿದ್ದಾರೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರಲ್ಲಿ ನೇರವಾಗಿ ನಾಮಿನೇಟ್ ಆದ ಮೊದಲ ಸ್ಪರ್ಧಿ ಸಹಾ ಆಗಿದ್ದಾರೆ ಚೈತ್ರ ಕುಂದಾಪುರ.

ಹೊರಗಡೆ ಸೋಶಿಯಲ್ ಮೀಡಿಯಾಗಳಲ್ಲಿ ಬಿಗ್ ಬಾಸ್ ಮನೆಯೊಳಗಿನ ಚೈತ್ರ ಕುಂದಾಪುರ ಅವರ ಆಟಕ್ಕೆ ವೀಕ್ಷಕರಿಂದ ಭಾರೀ ಮೆಚ್ಚುಗೆಗಳು ಹರಿದು ಬರುತ್ತಿವೆ. ಅವರ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಏನೇ ಇದ್ದರೂ ಅವರ ಆಟದ ವೈಖರಿ ಅನೇಕರಿಗೆ ಹಿಡಿಸಿದೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.

ಆರಂಭದಲ್ಲೇ ಚೈತ್ರಾ ಅವರ ಮಾತು, ಗೇಮ್ ಪ್ಲಾನ್‌ ಗೆ ಸ್ವರ್ಗ ವಾಸಿಗಳು ಕಕ್ಕಾಬಿಕ್ಕಿ ಆಗಿರೋದಂತೂ ಸತ್ಯ. ವಿಶೇಷ ಅಂದರೆ ನರಕವಾಸಿಗಳು ಸ್ವರ್ಗವಾಸಿಗಳಿಗಿಂತ ಹೆಚ್ಚಿನ ಖುಷಿ, ಸಂಭ್ರಮದಲ್ಲಿ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದು ಕಡೆ ಸ್ವರ್ಗದಲ್ಲಿದ್ದರೂ ಸ್ವರ್ಗವಾಸಿಗಳು ಮಾತ್ರ ತಲೆನೋವಿನಲ್ಲೇ ದಿನ ದೂಡಿದ್ದಾರೆ.

Leave a Comment