ಕುಸ್ತಿ ಅಖಾಡ ಆದ Bigg Boss Kannada 11, ಮೊದಲ ವಾರದಲ್ಲೇ ಇಬ್ಬರು ಆಸ್ಪತ್ರೆಗೆ; ಏನಿದೆಲ್ಲಾ ಅಂತ ಶಾಕ್ ಆದ ಜನ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ (Bigg Boss Kannada 11) ಮನೇಲಿ ಮೊದಲ ವಾರವೇ ಎಲ್ಲಾ ನಡೀತಾ ಇದೆ. ಜಗಳ, ಮಾತಿನ ಚಕಮಕಿ, ಲವ್ ಆ್ಯಂಗಲ್, ಕಣ್ಣೀರಿನ ಹೊಳೆ, ಆರೋಪ ಪ್ರತ್ಯಾರೋಪ ಹೀಗೆ ಮೊದಲ ವಾರದಲ್ಲೇ ಪ್ರೇಕ್ಷಕರಿಗೆ ಬೇಸರ ಅನಿಸೋಷ್ಟು ಘಟನೆಗಳು ನಡೆಯುವಾಗಲೇ ಈಗ ಬಿಗ್ ಬಾಸ್ ಮನೇಲಿ ಟಾಸ್ಕ್​ ವೇಳೆ ಅವಘಡ ಸಂಭವಿಸಿದೆ.

ಹೌದು, ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ತ್ರಿವಿಕ್ರಮ್ ಗೆ (Trivikram) ಗಾಯ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಟಾಸ್ಕ್ ವೇಳೆ ಆದ ಇಂತಹ ಒಂದು ಅವಘಡದಿಂದ ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ತ್ರಿವಿಕ್ರಮ್ ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಎಲ್ಲರೂ ಹಾರೈಸುತ್ತಿದ್ದಾರೆ.

ಇದೇ ವೇಳೆ ಮತ್ತೊಬ್ಭ ಸ್ಪರ್ಧಿಯಾಗಿರುವ ಗೋಲ್ಡ್ ಸುರೇಶ್​ ಗೂ (Gold Suresh) ಸಹಾ ಪೆಟ್ಟಾಗಿದೆ ಎನ್ನಲಾಗಿದೆ. ಟಾಸ್ಕ್ ನಲ್ಲಿ ಚೆಂಡನ್ನು ಹಿಡಿದು ಓಡುವಾಗ ತ್ರಿವಿಕ್ರಮ್ ಅವರು ಬಿದ್ದಿದ್ದು, ಅವರಿಗೆಗೆ ಪೆಟ್ಟಾಗಿದೆ. ಅವರನ್ನು ಕೂಡಲೇ ಕನ್ಫೆಷನ್​ ರೂಮ್ ಗೆ ಕರೆತರುವಂತೆ ಬಿಗ್ ಬಾಸ್ ಸೂಚನೆ ನೀಡಿದ್ದಾರೆ.

ಅವರನ್ನು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ತ್ರಿವಿಕ್ರಮ್ ಅವರು ಚಿಕಿತ್ಸೆ ಪಡೆದು ದೊಡ್ಮನೆ ಒಳಗೆ ಬಂದಿದ್ದಾರೆಂದು ಹೇಳಲಾಗುತ್ತಿದ್ದು , ಟಾಸ್ಕ್ ವೇಳೆ ಅದೇ ರೀತಿ ಗೋಲ್ಡ್​ ಸುರೇಶ್​ ಅವರಿಗೂ ಸಹಾ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ.

ಸೀರೆಯುಟ್ಟು ಮಿಂಚಿದ Jyothi Rai, ಮೈಮಾಟ ಮತ್ತೇರಿಸುತ್ತಿದೆ ಎಂದ ಫ್ಯಾನ್ಸ್, ಅಂದ ನೋಡಿ ನಿದ್ದೆಗೆಟ್ಟ ಪಡ್ಡೆಗಳು

Leave a Comment