Bigg Boss Kannada 11, ನಮ್ಮನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ? ಲಾಯರ್ ಜಗದೀಶ್ ಮತ್ತೊಂದು ಸವಾಲ್

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಸಹಿತ ಬಿಗ್ ಬಾಸ್ ಮನೇಲಿ ಇರೋರಿಗೂ ವಾರ್ನಿಂಗ್ ಕೊಟ್ಟ ಲಾಯರ್ ಜಗದೀಶ್. ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರ (Bigg Boss Kannada 11) ಮನೆಯಲ್ಲಿ ಜಗದೀಶ್ ಅವರ ಅಸಮಾಧಾನ ಮತ್ತು ಕೋಪ ಎಲ್ಲೆ ಮೀರಿದೆ. ಮೊದಲು ನಿಯಮಗಳನ್ನು ಗಾಳಿಗೆ ತೂರಿ ನರಕ ವಾಸಿಗಳ ಮೆಚ್ಚುಗೆ ಪಡೆದು ಸ್ವರ್ಗದಲ್ಲಿ ಅಶಾಂತಿ ಮೂಡಿಸಿದ್ದರು.

ಆದರೆ ಅನಂತರ ಸ್ವರ್ಗ ನರಕ ಎರಡೂ ಕಡೆ ಸ್ಪರ್ಧಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿರುವ ಅವರು ಈಗ ಏಕಾಏಕೀ ಮನೆ ಮಂದಿಗೆ ಧಮ್ಕಿ ಹಾಕಿದ್ದಾರೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ (Lawyer Jagadish) ಅವರು ಕ್ಯಾಮರಾ ಮುಂದೆ ನಿಂತು ಬಿಗ್ ಬಾಸ್ ಶೋ ನ ಎಕ್ಸ್ ಪೋಸ್ ಮಾಡ್ತೀನಿ, ಡೆಸ್ಟ್ರಾಯ್ ಮಾಡ್ತೀನಿ ಅಂತೆಲ್ಲಾ ಎಚ್ಚರಿಕೆ ಕೊಟ್ಟಿದ್ದಾರೆ.

ಈಗ ಬಿಡುಗಡೆ ಆಗಿರೋ ಹೊಸ ಪ್ರೊಮೋದಲ್ಲಿ ಅವರು ನಾನು ಇಲ್ಲಿ ಇರಲ್ಲ, ಬಿಗ್ ಬಾಸ್ ನ ಕ್ವಿಟ್ ಮಾಡ್ತೀನಿ ಅಂತ ಹೇಳಿದ್ದಾರೆ. ನಾನು ಮನಸ್ಸು ಮಾಡಿದ್ರೆ ಈಗ ಹೆಲಿಕಾಪ್ಟರ್ ಕೂಡಾ ತರಿಸ್ತೀನಿ. ಆ ಕೆಪಾಸಿಟಿ ನನಗೆ ಇದೆ. ಹೊರಗಡೆ ನೀವೆಲ್ಲಾ ಮಾಫಿಯಾಗಳು ನಡೆಸ್ತಾ ಇದ್ರೆ ಎಲ್ಲಾ ಎಕ್ಸ್ ಪೋಸ್ ಆಗುತ್ತೆ ಅಂತ ಮನೆ ಮಂದಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ನಾನು ಸರ್ಕಾರಗಳನ್ನೇ ನಡುಗಿಸ್ತೀನಿ, ಈ ಪ್ರೋಗ್ರಾಂನ ಉಡಾಯಿಸಿ ಬಿಡ್ತೀನಿ. ಪ್ರೋಗ್ರಾಂ ಹಾಳು ಮಾಡ್ದೇ ಇದ್ರೆ ನನ್ನ ಹೆಸರು ಬೇರೆ ಇಡು. ಯಾವೋನು ಬಿಗ್ ಬಾಸ್ ಗೆ ಕಾಲಿಡಬಾರದು. ನಮ್ಮನ್ನ ಎದುರಾಕ್ಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ? ಓಡ್ಸಿ ಅಂತ ಓಪನ್ ಚಾಲೆಂಜ್ ಅನ್ನ ನೀಡಿದ್ದಾರೆ ಲಾಯರ್ ಜಗದೀಶ್.

ಮೊದಲ ವಾರದಲ್ಲೇ ಬಿಗ್ ಬಾಸ್ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿ, ಶೋಗೆ ಸವಾಲು ಎಸೆದು, ಇಡೀ ಶೋನ ಎಕ್ಸ್ ಪೋಸ್ ಮಾಡ್ತೀನಿ, ಹಾಳು ಮಾಡ್ತೀನಿ ಅಂತೆಲ್ಲಾ ಹೇಳಿರೋ ಜಗದೀಶ್ ಅವರಿಗೆ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಹೇಗೆ ಕ್ಲಾಸ್ ತಗೊಳ್ತಾರೆ ಅನ್ನೋದೇ ಈಗ ಎಲ್ಲರ ಕುತೂಹಲವಾಗಿದೆ.

Leave a Comment