Bigg Boss Kannada 11 ಹೈಡ್ರಾಮಾ ನಂತರ ಈಗ ನೋ ಎಲಿಮಿನೇಷನ್; ಈ ವಾರ ಯಾರೂ ದೊಡ್ಮನೆಯಿಂದ ಹೊರ ಬರ್ತಿಲ್ಲ

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಎರಡನೇ ವೀಕೆಂಡ್ ಬಂದಿದೆ. ವಾರಾಂತ್ಯಕ್ಕಾಗಿ ಪ್ರೇಕ್ಷಕರು ಕಾಯುವಾಗಲೇ ನಿನ್ನೆಯ ಎಪಿಸೋಡ್ ನಲ್ಲಿ ಸ್ವರ್ಗ ಮತ್ತು ನರಕ ಎರಡನ್ನೂ ಒಂದು ಮಾಡಲಾಗಿದೆ. ನರಕದ ಭಾಗವನ್ನು ಬಿಗ್ ಬಾಸ್ ಟೀಮ್ ಧ್ವಂಸ ಮಾಡಿದೆ. ಇನ್ಮುಂದೆ ಮನೆ ಒಂದಾಗಲಿದೆ ಎನ್ನುವ ಘೋಷಣೆಯನ್ನು ಸಹಾ ಮಾಡಲಾಗಿದೆ.

ಇನ್ನು ಈ ವಾರ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ ಶಿಶಿರ್ ಶಾಸ್ತ್ರಿ (Shishir Shastri). ನರಕವಾಸಿಯಾಗಿರುವಾಗಲೇ ಅವರು ಕ್ಯಾಪ್ಟನ್ ಆಗಿದ್ದು ವಿಶೇಷವಾಗಿದೆ. ಇನ್ನು ಈ ವಾರ ಮನೆಯಿಂದ ಹೊರಗೆ ಹೋಗೋದಕ್ಕೆ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್​, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್, ಅನುಷಾ ರೈ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ.

ಆದರೆ ಈಗ ಹೊಸ ಸುದ್ದಿಗಳ ಪ್ರಕಾರ ಈ ವಾರ ನೋ ಎಲಿಮಿನೇಷನ್ ಎನ್ನಲಾಗಿದೆ. ಏಕೆಂದರೆ ಈ ವಾರ ಓಟಿಂಗ್ ಲೈನ್ ಓಪನ್ ಇಲ್ಲ. ಅದೇ ಸಮಯದಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ಹಬ್ಬದ ಖುಷಿಯ ನಡುವೆ ಎಲಿಮಿನೇಷನ್ ಏಕೆ ಎನ್ನುವ ಕಾರಣಕ್ಕೂ ಎಲಿಮಿನೇಷನ್ ಮಾಡದೇ ಇರುವ ಸಾಧ್ಯತೆಗಳು ಇವೆ.

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ನರಕದಲ್ಲಿ ಇದ್ದವರು ಈಗ ಸ್ವರ್ಗಕ್ಕೆ ಎಂಟ್ರಿ ನೀಡಿದ್ದಾರೆ. ಅಸಲಿ ಆಟ ಇನ್ಮುಂದೆ ಶುರುವಾಗಲಿದೆಯಾ ಅನ್ನೋದನ್ನ ಸಹಾ ಕಾದು ನೋಡಬೇಕಾಗಿದೆ. ಇನ್ನು ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಯಾವುದೆಲ್ಲಾ ವಿಚಾರಗಳನ್ನ ಚರ್ಚೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆಗಳು ಸಹಾ ಇದೆ.

Rajamouli : ತೆಲುಗಿನ ಟಾಪ್ ಹೀರೋಗಳ ಹೆಸರು ಬಹಿರಂಗ ಮಾಡಿದ ರಾಜಮೌಳಿ: ಇಷ್ಟಕ್ಕೂ ಯಾರು ಆ ನಟರು

Leave a Comment