Bigg Boss Kannada ಜಗದೀಶ್ ಮೇಲೆ ರೊಚ್ಚಿಗೆದ್ದ ಮನೆ ಮಂದಿ, ತಾಳ್ಮೆ ಕಳೆದುಕೊಂಡು ಬಿಗ್ ಬಾಸ್ ವಾರ್ನಿಂಗ್

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ (Bigg Boss Kannada) ಮನೆಯ ವಾತಾವರಣ ಮೂರನೇ ವಾರದ ಆರಂಭದಿಂದಲೂ ಗದ್ದಲ, ಗಲಾಟೆಯಲ್ಲೇ ಕಳೆದಿದೆ. ಈಗಂತೂ ಮನೆಯ ವಾತಾವರಣ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಬಿಗ್ ಬಾಸ್ ತಾಳ್ಮೆಯನ್ನು ಕಳೆದುಕೊಂಡು ಮನೆ ಮಂದಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಮತ್ತು ಶಾಂತವಾಗಿರುವಂತೆ ಆದೇಶಿಸಿದ್ದಾರೆ.

ದೊಡ್ಮನೆ ರಣಾಂಗಣವಾಗಿ ಬದಲಾಗಿದೆ. ಲಾಯರ್ ಜಗದೀಶ್ (Lawyer Jagadish) ಅವರ ಮಾತುಗಳಿಂದ ತೊಂದರೆ ಆಗುತ್ತಿದೆ ಎಂದು ಮನೆ ಮಂದಿ ಸಿಟ್ಟಾಗುತ್ತಿದ್ದಾರೆ. ಇದರಿಂದಾಗಿ ಎಲ್ಲರೂ ಜಗಳ ಮಾಡುವ ಮೂಡನಲ್ಲೇ ಇದ್ದಾರೆ. ಇವರ ನಡುವಿನ ಈ ಮಾತಿನ ಚಕಮಕಿಗೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ.

ಬಿಗ್ ಬಾಸ್ ಮನೆಯವರಿಗೆ, ಎಲ್ಲರೂ ಸುಮ್ನೆ ಇರಬೇಕು.. ಎಲ್ಲರೂ ಸೋಪಾದಲ್ಲಿ ಕುಳಿತುಕೊಳ್ಳಿ, ಯಾರೂ ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ ಎಂದು ಕೋಪದಿಂದಲೇ ಹೇಳಿದ್ದಾರೆ. ಬಿಗ್ ಬಾಸ್ ಆದೇಶದ ನಂತರ ಮನೆಯಲ್ಲಿ ನಿಶ್ಯಬ್ದ ವಾತಾವರಣ ಮೂಡಿದೆ. ಆದರೆ ಈ ಜಗಳ ಮಾತ್ರ ಎಲ್ಲೆ ಮೀರಿತ್ತು ಅನ್ನೋದು ನಿಜ.

ನಾಮಿನೇಷನ್ ವಿಚಾರದಲ್ಲಿ ಜಗದೀಶ್ ಕ್ಯಾಪ್ಟನ್ ಶಿಶಿರ್ (Shishir) ಅವರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾನಸ ಆವಾಜ್ ಹಾಕಿದ್ರು, ಎಲ್ಲದಕ್ಕೂ ನಡುವೆ ಬರ್ತಿಯಲ್ಲ ಅಂತ ಜಗಳಕ್ಕೆ ಮುಂದಾದ್ರು. ನಂತರ ಮನೆ ಮಂದಿ ಒಂದಾಗಿ ಜಗಳಕ್ಕೆ ಸೇರಿಕೊಂಡ್ರು, ತ್ರಿವಿಕ್ರಮ್ ಅಂತೂ ಹೋಗಲೆ ಅನ್ನೋ ಮಟ್ಟಕ್ಕೆ ಹೋದ್ರೆ, ಉಗ್ರಂ ಮಂಜು ಮುಖದ ಮುಂದೆ ಜಗಳಕ್ಕೆ ನಿಂತರು.

Leave a Comment