Bigg Boss 11 ಐಶ್ವರ್ಯ ಸ್ವರ್ಗದಿಂದ ನರಕಕ್ಕೆ ಶಿಫ್ಟ್; ಖುಷಿಯಿಂದ ಕುಣಿದು, ಕುಪ್ಪಳಿಸಿ, ಸಂಭ್ರಮಿಸಿದ ಜಗದೀಶ್

Written by Soma Shekar

Published on:

---Join Our Channel---

Bigg Boss 11 : ಬಿಗ್ ಬಾಸ್‌ ಸೀಸನ್‌ 11ರಲ್ಲಿ (Bigg Boss 11) ಜಗದೀಶ್‌ ಅವರ ಆಟ, ತುಂಟಾಟ ಸಿಕ್ಕಾಪಟ್ಟೆ ಸದ್ದನ್ನು ಮಾಡ್ತಿದೆ. ಈಗ ಮನೆಯಲ್ಲಿ ಟಾಸ್ಕ್ ಗಳ ಅಬ್ಬರದ ನಡುವೆಯೇ ಸ್ಪರ್ಧಿಗಳು ಸ್ವರ್ಗದಿಂದ ನರಕಕ್ಕೆ ಹೋಗುವ ಟ್ವಿಸ್ಟ್ ಸಹಾ ನೋಡಬಹುದಾಗಿದೆ. ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೋದಲ್ಲಿ ಇದನ್ನ ನಾವು ನೋಡಬಹುದಾಗಿದೆ‌. ಕ್ಯಾಪ್ಟನ್ ಹಂಸ ತಪ್ಪು ಮಾಡಿದ್ದು ತಾನು ಎಂದಿದ್ದಾರೆ.

ಐಶ್ವರ್ಯ (Aishwarya) ನರಕಕ್ಕೆ ಹೋಗೋದು ಬೇಡ, ನನ್ನ ಕಳಿಸಿ ಎಂದಿದ್ದಾರೆ. ಇದಕ್ಕೆ ಜಗದೀಶ್ ಅವರು ಬರ್ತಾರೆ ಬೇಕಾದ್ರೆ ಅವರ ಜೊತೆ ನೀವು ಬನ್ನಿ ಅಂದಿದ್ದಾರೆ. ಅಲ್ಲದೇ ಐಶ್ವರ್ಯ ನರಕಕ್ಕೆ ಬರ್ತಾ ಇರೋದು ಜಗದೀಶ್ ಅವರಿಗೆ ‌ಬಹಳ ಖುಷಿಯನ್ನು ನೀಡಿದೆ ಅನ್ನೋದು ಅವರ ಮಾತಿನಲ್ಲಿ ಗೊತ್ತಾಗಿದೆ.

ಐಶ್ವರ್ಯ ನರಕಕ್ಕೆ ಬರೋದು ಗ್ಯಾರಂಟಿ ಆದ ಮೇಲೆ ಜಗದೀಶ್ (Jagadish) ಅವರು ಖುಷಿಯಿಂದ ಕುಣಿದಿದ್ದಾರೆ. ಒಂದು ಕಡೆ ಖುಷಿಯಿಂದ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಜಗದೀಶ್ ಅವರು ಈ ವಾರದ ಆರಂಭದಿಂದಲೂ ಎಲ್ಲದರಲ್ಲೂ ಹೈಲೈಟ್ ಆಗ್ತಿದ್ದು, ಈಗ ಹೊಸ ಪ್ರೊಮೊದಲ್ಲೂ ಅವರ ಖುಷಿ ಕಂಡಿದೆ.

ಬಿಗ್ ಬಾಸ್ ಈ ವಾರ ಮನೆ ಮಂದಿಗೆ ಶಿಕ್ಷೆಯಾಗಿ ಎಲ್ಲರನ್ನೂ ನಾಮಿನೇಟ್ ಮಾಡಿದ್ದರು. ಅದರಲ್ಲಿ ಈಗ ಟಾಸ್ಕ್ ಗಳ ನಂತರ ನಾಮಿನೇಷನ್ ನಿಂದ ಉಳಿಯುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದು, ಟಾಸ್ಕ್ ಗಳ ವಿಚಾರದಲ್ಲೂ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆಯುತ್ತಲೇ ಇದೆ.

Tripti Dimri ಆ ನೋವು ತಡೆಯಲಾಗದೆ ಮೂರು ದಿನ ಕಣ್ಣೀರು ಹಾಕಿದ್ದೆ, ಅನಿಮಲ್ ನಟಿಯ ಶಾಕಿಂಗ್ ಹೇಳಿಕೆ

Leave a Comment