BBK 11 : ಮೊದಲ ದಿನವೇ ರಣರಂಗ ಆದ ಬಿಗ್ ಬಾಸ್ ‌ಮನೆ, ಮಾತಿನ ಚಕಮಕಿ, ರೂಲ್ಸ್ ಬ್ರೇಕ್ ಅಂತ ಅರಚಾಟ

Written by Soma Shekar

Published on:

---Join Our Channel---

BBK 11: ಬಿಗ್‌ ಬಾಸ್‌ ಸೀಸನ್‌ 11 (BBK11) ಅದ್ಧೂರಿಯಾಗಿ ಆರಂಭವಾಗಿದೆ. ಈಗಾಗಲೇ ಮನೆಯಲ್ಲಿರುವ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿದೆ. ಇಲ್ಲಿ ಕಿತ್ತಾಟ ಅನ್ನೋದು ಯಾವಾಗ ಬೇಕಾದ್ರು ಶುರುವಾಗಬಹುದು. ಇದೀಗ ಸ್ಪರ್ಧಿಗಳು ಮನೆಗೆ ಎಂಟ್ರಿ ನೀಡಿದ ಒಂದೇ ದಿನದಲ್ಲೇ ಕಿತ್ತಾಡಿಕೊಂಡು ಮನೆಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ನರಕದಲ್ಲಿ ಇದ್ದವರು ಸ್ವರ್ಗದಲ್ಲಿರುವ ಸ್ಪರ್ಧಿಗಳ ಹತ್ತಿರ ನೀರು ಕೇಳಿದ್ದು, ಸ್ವರ್ಗದಲ್ಲಿ ಇರೋರು ನೀರನ್ನು ಕೊಟ್ಟಿಲ್ಲ. ಇದರಿಂದಾಗಿ ನರಕದಲ್ಲಿರೋ ಗೋಲ್ಡ್‌ ಸುರೇಶ್‌ (Gold Suresh) ಹಾಗೂ ಸ್ವರ್ಗದಲ್ಲಿರೋ ಉಗ್ರಂ ಮಂಜು ಮಾತಿನ ಚಕಮಕಿ ನಡೆದಿದೆ. ಬೇಕಾದ್ರೆ ಬಿಗ್‌ ಬಾಸ್‌ ನಿಮಗೆ ಬಿಸಿ ನೀರು ಕೊಡ್ತಾರೆ.

ನಾವು ಕೊಡೋ ಹಾಗಿಲ್ಲ, ರೂಲ್ಸ್ ಸರಿಯಾಗಿ ನೋಡಿ ಅಂತ ಉಗ್ರಂ ಮಂಜು (Ugram Manju) ಗರಂ ಆಗಿದ್ದಾರೆ. ಗೋಲ್ಡ್‌ ಸುರೇಶ್‌ ವಾಂತಿ ಬರೋ ತರಾ ಆಗಿ ನೀರನ್ನ ಕೇಳಿದ್ದಾರೆ. ಅಲ್ಲದೇ ಸುರೇಶ್‌ ಅವರು ಬಿಗ್ ಬಾಸ್‌ಗೆ ನಾವು ಬಿಸಿ ನೀರು ಕೇಳೋದ್ರಲ್ಲಿ ತಪ್ಪು ಏನಿದೆ? ಅಂತ ಕೂಗಿದ್ದು, ಉಗ್ರಂ ಮಂಜು ಅವರು ಈ ಒಂದೇ ದಿನಕ್ಕೆ ಹೀಗಾದ್ರೆ ಇನ್ನೂ 100 ದಿನ ಇರಬೇಕು ಅಂತ ತಿರುಗೇಟು ಕೊಟ್ಟಿದ್ದಾರೆ.

ನರಕದಲ್ಲಿರೋ ಸ್ಪರ್ಧಿಗಳಿಗೆ ಸ್ವರ್ಗದ ಕ್ಲೀನಿಂಗ್ ಕೆಲಸ ನೀಡಲಾಗಿತ್ತು ಆಗ ಚೈತ್ರ ಕುಂದಾಪುರ ಅವರಿಗೆ ಮನೆ ಕೆಲಸದ ಜವಾಬ್ದಾರಿ ನೀಡಲಾಗಿತ್ತು. ಈ ವೇಳೆ ಉಗ್ರಂ ವಿಲನ್ ಮಂಜು ಜೊತೆ ಚೈತ್ರಾ (Chaitra Kundapura) ಕಿರಿಕ್ ಮಾಡಿಕೊಂಡಿದ್ದಾರೆ, ಸ್ವರ್ಗದಲ್ಲಿರೋ ಮಂಜು ಅವರು ಹಣ್ಣನ್ನು ತೊಳೆದು ಕಟ್ ಮಾಡಿಕೊಡುವಂತೆ ಚೈತ್ರಾಗೆ ಕೇಳಿದ್ರು.

ಆದ್ರೆ ಚೈತ್ರಾ ಹಣ್ಣು ಕಿತ್ತುಕೊಂಡು ತಿಂದಿದ್ದಾರೆ. ಓಡುತ್ತಾ ಹಣ್ಣನ್ನು ನರಕದೊಳಕ್ಕೆ ಎಸೆದಿದ್ದಾರೆ. ಈ ವೇಳೆ ಹಣ್ಣು ತಿನ್ನುವಂತಿಲ್ಲ ಎಂದು ಮಂಜು ಕೇಳಿದಾಗ ನೀವ್ಯಾಕೆ ಪ್ರೊವೋಕ್ ಮಾಡಿದ್ರಿ ಎಂದು ಜಗಳ ತೆಗೆದಿದ್ದಾರೆ ಚೈತ್ರ ಕುಂದಾಪುರ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು ಮನೆಯಲ್ಲೊಂದು ಅಶಾಂತಿಯ ವಾತಾವರಣ ಮೂಡಿದೆ.

Bigg Boss Kannada 11 ಮೊದಲ ದಿನವೇ ಮೈಮೇಲಿದ್ದ ಒಡವೆಗಳನ್ನು ಕಳಚಿಟ್ಟ ಗೋಲ್ಡ್ ಸುರೇಶ್

Leave a Comment