Bhagyalakshmi: ಶ್ರೇಷ್ಠಾ ಬಂದ್ಲು ಮಂತ್ರವಾದಿ ಹತ್ರ; ಇದೆಂತಾ ಹುಚ್ಚರ ಸಂತೆ ಅಂತ ಸಿಟ್ಟಾದ್ರು ಪ್ರೇಕ್ಷಕರು

Written by Soma Shekar

Published on:

---Join Our Channel---

Bhagyalakshmi: ಭಾಗ್ಯಲಕ್ಷ್ಮಿ (Bhagyalakshmi) ಸೀರಿಯಲ್ ನಲ್ಲಿ ಭಾಗ್ಯಾಗೆ ಕೆಲಸ ಸಿಕ್ಕಿ ಸ್ವಾವಲಂಬಿ ಆಗೋ ಕಡೆಗೆ ಹೆಜ್ಜೆ ಹಾಕಿದ್ದಾಳೆ. ಕೆಲಸ ಸಿಕ್ಕ ಮೇಲೆ ಭಾಗ್ಯ ಗಂಡನ ಎದುರು ನಿಂತು ಮಾತಿಗೆ ಉತ್ತರ ಕೊಡುವ ಹಾಗೂ ಪ್ರಶ್ನೆ ಮಾಡುವ ಧೈರ್ಯವನ್ನ ತೋರಿಸಿದ್ದಾಳೆ. ಇದೇ ವೇಳೆ ಇನ್ನೊಂದು ಕಡೆ ಶ್ರೇಷ್ಠ ವಿಷಯವನ್ನ ಭಾಗ್ಯಾಗೆ ತಿಳಿಸೋಕೆ ಪೂಜಾ, ಹಿತಾ ಮತ್ತು ಸುಂದರಿ ತಮ್ಮ ಪ್ಲಾನ್ ಗಳನ್ನು ಮಾಡ್ತಾ ಇದ್ದಾರೆ.

ಪೂಜಾ, ಸುಂದರಿ ಮತ್ತು ಹಿತಾ ಈಗ ಮಂತ್ರವಾದಿಯ ಪ್ಲಾನ್ ಮಾಡಿದ್ದು ಭಾಗ್ಯ ಮತ್ತು ಶ್ರೇಷ್ಠ ಇಬ್ಬರೂ ಸಹಾ ಒಂದು ಕಡೆ ಬರೋ ಹಾಗೆ ಮಾಡಿದ್ದಾರೆ. ಆದರೆ ಈ ಪ್ಲಾನ್ ಬಗ್ಗೆ ಪ್ರೊಮೋ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನು ಹೊರ ಹಾಕಲು ಆರಂಭ ಮಾಡಿದ್ದಾರೆ.

ಹೌದು, ಪ್ರೊಮೊ ಕೆಳಗೆ ಕಾಮೆಂಟ್ ಗಳನ್ನು ಮಾಡಿರುವ ನೆಟ್ಟಿಗರು ಇದೆಲ್ಲಾ ಅವಶ್ಯಕತೆ ಇದ್ಯಾ? ಎಂದು ಪ್ರಶ್ನೆ ಮಾಡಿದ್ದಾರೆ.‌ ವಿಷಯ ಯಾವಾಗ್ಲಾದ್ರೂ ಗೊತ್ತಾಗಲೇ ಬೇಕು ಆದ್ರೆ ಸೀರಿಯಲ್ ನ ಎಳೆಯೋದಕ್ಕೆ ಇಂತಹ ಅನಾವಶ್ಯಕ ದೃಶ್ಯಗಳನ್ನು ತೋರಿಸ್ತಾ ಇದ್ದಾರೆ ಅನ್ನೋದು ಕೆಲವರ ಅಭಿಪ್ರಾಯಗಳಾಗಿದೆ.

ಕೆಲವರು ಕಾಮೆಂಟ್ ಮಾಡಿ ಹುಚ್ಚರ‌ ಸಂತೆ ಎಂದಿದ್ದಾರೆ. ಡೈರೆಕ್ಟರ್ ಬಹುಶ ನೋಡೋರನ್ನ ಬೇವಕೂಫ್ ಗಳು ಅನ್ಕೊಂಡಿದ್ದಾರೆ ಅಂತ ಒಬ್ರು ಕಾಮೆಂಟ್ ಮಾಡಿದ್ದಾರೆ. ಮೂರು ದಿನದಿಂದ ಇದೇ ಆಯ್ತು ಅಂತ, ಇದು ಅತಿ ಆಯ್ತು ಎಂದೆಲ್ಲಾ ಕಾಮೆಂಟ್ ಗಳನ್ನ ಮಾಡಿ ಅನೇಕರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

Urvashi Rautela: ಆ ವಿಡಿಯೋದಲ್ಲಿ ಇರೋದು ನಾನೇ; ಲೀಕ್ ವೀಡಿಯೋ ಬಗ್ಗೆ ಶಾಕಿಂಗ್ ರಿಪ್ಲೈ ಕೊಟ್ಟ ನಟಿ ಊರ್ವಶಿ

Leave a Comment