ಕಣ್ಣೀರಿನಲ್ಲಿ ಮುಳುಗಿದ Bigg Boss ಮನೆ, ರಂಜಿತ್ ಗಾಗಿ ಅತ್ತು ಸುರಿದು ಭಾವುಕರಾದ ಮನೆ ಮಂದಿ ಹೇಳಿದ್ದೇನು

Written by Soma Shekar

Published on:

---Join Our Channel---

Bigg Boss ಬಿಗ್ ಬಾಸ್‌ (Bigg Boss) ಕನ್ನಡ ಸೀಸನ್ 11ರಲ್ಲಿ ಮನೆ ರಣಾಂಗಣವಾಗಿದ್ದು, ಎಲ್ಲೆಡೆ ಇದು ಚರ್ಚೆಗಳಿಗೆ ಕಾರಣವಾಗಿದೆ. ಜಗದೀಶ್ (Jagadish) ಮತ್ತು ರಂಜಿತ್ (Ranjith) ಬಿಗ್ ಮನೆಯಲ್ಲಿ ಹೊಡೆದಾಡಿಕೊಂಡ ಕಾರಣ ಇಬ್ಬರನ್ನೂ ದೊಡ್ಮನೆಯಿಂದ ಹೊರಗೆ ಹಾಕಲಾಗಿದೆ ಎನ್ನಲಾಗಿತ್ತು. ಇಂದಿನ ಹೊಸ ಪ್ರೊಮೊದಲ್ಲಿ ಅದು ಎಲ್ಲರ ಮುಂದೆ ಬಂದಿದೆ.

ಬಿಡುಗಡೆ ಆಗಿರುವ ಪ್ರೊಮೊದಲ್ಲಿ ಜಗದೀಶ್ ಮತ್ತು ರಂಜಿತ್‌ ಅವ್ರನ್ನು ಮುಖ್ಯದ್ವಾರದಿಂದ ಹೊರಗೆ ಬನ್ನಿರೆಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ಮೂಲಕ ಡಬಲ್ ಎಲಿಮಿನೇಷನ್ ನಡೆದಿದೆ. ರಂಜಿತ್ ಅವರನ್ನ ಎಲಿಮಿನೇಟ್ ಮಾಡ್ತಿರೋ ವಿಚಾರ ಮನೆ ಮಂದಿಗೆ ನೋವನ್ನು ಉಂಟು ಮಾಡಿದೆ.

ರಂಜಿತ್ ಎಲಿಮಿನೇಷನ್ ವಿಚಾರ ಕೇಳಿ ಉಗ್ರಂ ಮಂಜು (Ugram Manju), ಭವ್ಯಾ ಗೌಡ (Bhvya Gowda), ಮಾನಸಾ ಇನ್ನಿತರರು ಕಣ್ಣೀರು ಹಾಕಿದ್ದಾರೆ. ರಂಜಿತ್ ಅವರು ಇದನ್ನ ಬೇಕು ಅಂತ ಮಾಡಿಲ್ಲ, ತಪ್ಪಾಗಿದೆ. ಆದರೆ ದಯವಿಟ್ಟು ಕ್ಷಮಿಸಿ, ದಯವಿಟ್ಟು ಅವರಿಗೆ ಇನ್ನೊಂದು ಅವಕಾಶ ನೀಡಿ ಅಂತ ಮನೆ ಮಂದಿ ಬಿಗ್ ಬಾಸ್ ಗೆ ಮನವಿ ಮಾಡಿಕೊಂಡಿದ್ದಾರೆ.

ಇವೆಲ್ಲವುಗಳ ನಡುವೆಯೇ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ತೆರೆದುಕೊಂಡಿದೆ. ಇದನ್ನ ನೋಡಿದ ಮೇಲೆ ರಂಜಿತ್ ಹೊರಗೆ ಹೋಗ್ತಾರೆ ಅನ್ನೋದಂತೂ ಖಚಿತವಾಗಿದೆ. ಇನ್ನು ನಾಳೆಯ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿ ಏನೆಲ್ಲಾ ನಡೆಯಲಿದೆ ಅನ್ನೋದಕ್ಕೆ ಪ್ರೇಕ್ಷಕರು ಕಾಯ್ತಾ ಇದ್ದಾರೆ.

Bigg Boss Kannada ನೀನು ಲಾಯರ್ ಅಲ್ಲ, ರೋಲ್ ಕಾಲ್ ಅಂತ ಜಗದೀಶ್ ನ ಗುಮ್ಮಿದ ಚೈತ್ರ ಕುಂದಾಪುರ

Leave a Comment