Bigg Boss Kannada : ಜಗದೀಶ್ ಮಾತಾಡಿದ್ದೆಲ್ಲಾ ಟೆಲಿಕಾಸ್ಟ್ ಆಗಿಲ್ವಾ? ರಂಜಿತ್ ಜಗದೀಶ್ ಸಿಂಹ ಅಲ್ಲ ಇಲಿ ಅಂದಿದ್ಯಾಕೆ

Written by Soma Shekar

Published on:

---Join Our Channel---

Bigg Boss Kannada : ಬಿಗ್‌ ಬಾಸ್‌ ಕನ್ನಡ (Bigg Boss Kannada) ದಲ್ಲಿ ವಾರದ ಮಧ್ಯೆಯೇ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ. ರಂಜಿತ್ (Ranjith) ಮನೆಯ ನಿಯಮ ಉಲ್ಲಂಘನೆ ಮಾಡಿದರೆ, ಜಗದೀಶ್ (Jagadish) ಅವರು ಆಡಿದ ಮಾತಿನಿಂದ ಮನೆಯಿಂದ ಹೊರಗೆ ಬಂದಿದ್ದಾರೆ.

ಮನೆಯಿಂದ ಹೊರ ಬಂದ ಮೇಲೆ ಮಾದ್ಯಮದ ಜೊತೆ ಮಾತನಾಡಿರುವ ರಂಜಿತ್, ಜಗದೀಶ್ ಹೆಣ್ಮಕ್ಕಳ ಸ್ನಾನ ಮಾಡುವ ಬ್ರಷ್‌ ಅನ್ನ ತಗೊಂಡು ಟಾಯ್ಲೆಟ್‌ ಯೂಸ್‌ ಮಾಡೋದು. ಹಲ್ಲುಜ್ಜುವ ಬ್ರಷ್‌ ತಗೊಂಡು ಹೋಗಿ ಯೂಸ್‌ ಮಾಡೋದನ್ನ ನಾವು ನೋಡಿದ್ದೇವೆ.

ಅವರ ವರ್ತನೆಯಿಂದಾಗಿ ಹೆಣ್ಮಕ್ಕಳು ಎಷ್ಟು ಅಸಹ್ಯಪಡ್ತಿದ್ದರು ಅನ್ನೋದನ್ನ ನಾವು ನೋಡಿದ್ದೇವೆ ಅನ್ನೋ ಮಾತನ್ನ ಹೇಳಿದ್ದಾರೆ. ಮಾತಾಡೋವಾಗ ಸೊಂಟದ ಕೆಳಗಿನ ಭಾಷೆಯನ್ನೇ ಅವರು ಮಾತನಾಡುತ್ತಿದ್ದುದ್ದನ್ನ ನಾವು ನೋಡಿದ್ದೇವೆ.

ಈ ಶೋಗೆ ಒಂದು ಗೌರವವಿದೆ. ಈ ಹೊಸ ಅಧ್ಯಾಯದಲ್ಲಿ ಇಂತಹ ವ್ಯಕ್ತಿ ಬಂದು ಇಡೀ ಶೋನ ಹಾಳು ಮಾಡಿದ್ದಾರೆ ಎಂದಿರುವ ರಂಜಿತ್ ಇದನ್ನು ನೋಡಿ ನಾವು ಎಷ್ಟು ಆಗುತ್ತೋ ಅಷ್ಟು ಕಂಟ್ರೋಲ್‌ ಮಾಡಿದ್ದೇವೆ. ಇದು ಎಲ್ಲೆ ಮೀರಿದ ಮೇಲೆಯೇ ಈ ರೀತಿ ಆಗಿರುವುದು ಎಂದು ಸಮರ್ಥನೆ ನೀಡಿದ್ದಾರೆ.

ಆ ವ್ಯಕ್ತಿ ಮನೆಯಲ್ಲಿ ಮಾಡಿರೋದನ್ನ ಟೆಲಿಕಾಸ್ಟ್ ಮಾಡಿ ಅಂತ ತುಂಬಾ ಸಲ ಕೇಳಿದ್ದೀವಿ. ತೋರಿಸೋಕೆ ಆಗದೇ ಇರುವಂತದ್ದು ಮಾತನಾಡಿದ್ದಾರೆ. ಮೂರು ವಾರ ಯಾವ ರೀತಿ ಇದ್ದ ಅನ್ನೋದನ್ನ ತೋರಿಸೋಕೆ ಆಗದೇ ಇರುವಂತದ್ದು ಎಂದು ಸಹಾ ರಂಜಿತ್ ಹೇಳಿದ್ದಾರೆ.

Bigg Boss Kannada 11 ಕ್ಕೆ ಹನುಮಂತ ಗೆಸ್ಟಾ ಅಥವಾ ಕಂಟೆಸ್ಟಂಟಾ? ವೈಲ್ಡ್ ಕಾರ್ಡ್ ಎಂಟ್ರಿ ಗುಟ್ಟೇನು

Leave a Comment