Allu Arjun: ಆಪ್ತ ಜಾನಿ ಮಾಸ್ಟರ್ ವಿರುದ್ಧ ಹೆಜ್ಜೆ ಇಟ್ಟ ಅಲ್ಲು ಅರ್ಜುನ್; ಸಂತ್ರಸ್ತೆಗಾಗಿ ಮಹತ್ವದ ಶಪಥ ಮಾಡಿದ ನಟ

Written by Soma Shekar

Published on:

---Join Our Channel---

Allu Arjun : ಸೌತ್ ಸಿನಿಮಾಗಳ ಸ್ಟಾರ್ ಕೊರಿಯೋಗ್ರಫರ್ ಜಾನಿ ಮಾಸ್ಟರ್ (Jani Master Case) ಮೇಲೆ ಯುವತಿಯೊಬ್ಬಳು ಲೈಂ ಗಿ ಕ ದೌರ್ಜನ್ಯದ ಆರೋಪ ಮಾಡಿರುವ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಟಾಲಿವುಡ್ ನಲ್ಲಿ ಈ ವಿಚಾರ ಸಂಚಲನವನ್ನು ಸೃಷ್ಟಿಸಿದ್ದು, ಈ ವಿಚಾರವಾಗಿ ಒಂದಷ್ಟು ಶಾಕಿಂಗ್ ವಿಚಾರಗಳು ಹೊರ ಬೀಳುವಾಗಲೇ ಜಾನಿ ಮಾಸ್ಟರ್ ಗೆ ಆಪ್ತನಾದ ನಟ ಅಲ್ಲು ಅರ್ಜುನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಎಲ್ಲೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯ ಕೇಳಿ ಬರುವಾಗಲೇ ನಟ ಅಲ್ಲು ಅರ್ಜುನ್ (Allu Arjun) ಅವರು ಸಂತ್ರಸ್ತೆಯ ನೆರವಿಗೆ ಧಾವಿಸಿದ್ದು, ತಮ್ಮ ಹೋಂ ಬ್ಯಾನರ್ ಅಡಿಯಲ್ಲಿ ಬರುವ ಎಲ್ಲಾ ಸಿನಿಮಾಗಳಲ್ಲಿ ಸಂತ್ರಸ್ತೆಗೆ ಇನ್ನು ಮುಂದೆ ಅವಕಾಶವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.‌

21 ವರ್ಷದ ಯುವತಿಯನ್ನು ಜಾನಿ ಮಾಸ್ಟರ್ ಅ ತ್ಯಾ ಚಾ ರ ಮಾಡಿರುವ ವಿಚಾರ ಕೇಳಿ ಅನೇಕರು ಜಾನಿ ಮಾಸ್ಟರ್ ಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. ಜಾನಿ ಮಾಸ್ಟರ್ ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹ ಕೂಡಾ ಇದೆ ಎನ್ನುವುದು ಸತ್ಯ.

ಸ್ನೇಹವಿದೆ ಎಂದ ಮಾತ್ರಕ್ಕೆ ನಟ ಅಲ್ಲು ಅರ್ಜುನ್ ಮೌನವಾಗಿರದೇ ಸಂತ್ರಸ್ತೆಗೆ ನೆರವನ್ನು ನೀಡಲು ಮುಂದಾಗಿದ್ದಾರೆ. ಸಂತ್ರಸ್ತ ಯುವತಿ ಜಾನಿ ಮಾಸ್ಟರ್ ಅವರ ಸಹಾಯಕಿಯಾಗಿದ್ದು, ಅಲ್ಲು ಅರ್ಜುನ್ ಅವರಿಗೆ ಸಹಾ ಪರಿಚಯವಿದ್ದ ಕಾರಣ ನಟ ಈಗ ಸಂತ್ರಸ್ತ ಯುವತಿಗೆ ನೆರವು ನೀಡಲು ಮುಂದಾಗಿದ್ದಾರೆ.

Lakshmi Nivasa: ಕೂಡು ಕುಟುಂಬಕ್ಕೆ ಬೇಕು ಇಂತಾ ಸೊಸೆ, ಲಕ್ಷ್ಮೀನಿವಾಸ ವೀಣಾ ಪಾತ್ರಕ್ಕೆ ಭಾರೀ ಮೆಚ್ಚುಗೆ

Leave a Comment