Kantara 24 ವರ್ಷಗಳ ಕಾಯುವಿಕೆ ಮುಗಿದ ಕ್ಷಣ, ಫೋಟೋ ಶೇರ್ ಮಾಡಿ ಖುಷಿಯ ವಿಚಾರ ಹಂಚಿಕೊಂಡ ರಿಷಬ್ ಶೆಟ್ಟಿ

Written by Soma Shekar

Published on:

---Join Our Channel---

Rishab Shetty: ಸ್ಯಾಂಡಲ್ವುಡ್ ನ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ತಮಿಳು ಸಿನಿಮಾ ರಂಗದ ದಿಗ್ಗಜ ನಟ, ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyan Vikram) ಅವರನ್ನು ಭೇಟಿ‌‌ ಮಾಡಿದ್ದಾರೆ. ನಟ ಚಿಯಾನ್ ವಿಕ್ರಂ ಅವರು ತಮ್ಮ ಬಹುನಿರೀಕ್ಷಿತ ಸಿನಿಮಾ, ಇದೇ ಆ.15ರಂದು ತೆರೆ ಕಾಣಲಿರುವ ‘ತಂಗಾಲನ್’ ನ (Tangalan) ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು.

ಈ ವೇಳೆ ರಿಷಭ್ ಶೆಟ್ಟಿ ಅವರು ತಮ್ಮ ಅಚ್ಚುಮೆಚ್ಚಿನ ನಟನನ್ನ ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ರಿಷಬ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಶೇರ್ ಮಾಡಿ ಹಂಚಿಕೊಂಡಿದ್ದು, ಅದರ ಜೊತೆಗೆ ಕೆಲವು ಸಾಲುಗಳನ್ನು ಸಹಾ ಬರೆದುಕೊಂಡಿದ್ದಾರೆ. ‌

ರಿಷಬ್ ಶೆಟ್ಟಿ ತಮ್ಮ ಪೋಸ್ಟ್ ನಲ್ಲಿ, ಅಮೂಲ್ಯ ಸಮಯವನ್ನು ಕಳೆದಿದ್ದರಿಂದ ತುಂಬಾ ಸಂತೋಷವಾಯಿತು’ ಎಂದು ಕೆಲವು ಕ್ಯಾಂಡಿಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದೇ ವೇಳೆ ಅವರು, ”ನಟನಾಗುವ ನನ್ನ ಪಯಣದಲ್ಲಿ ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನನ್ನ ಆರಾಧ್ಯ ಮೂರ್ತಿ ಯನ್ನು ಭೇಟಿಯಾದ ಕ್ಷಣ.

ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ಎಂದು ಬರೆದುಕೊಂಡಿದ್ದು, ವಿಕ್ರಮ್ ಅವರ ಮುಂದಿನ ಸಿನಿಮಾ  ತಂಗಲನ್‌ ನ ಯಶಸ್ಸಿಗಾಗಿ ಶುಭ ಹಾರೈಸಿದ್ದಾರೆ. ರಿಷಬ್ ಶೆಟ್ಟಿ ಅವರು ಪ್ರಸ್ತುತ ಕಾಂತಾರ 1 ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Salman Khan: ಸಲ್ಮಾನ್ ಸೆ * ಇಲ್ಲದೇ ಒಂದು ತಿಂಗಳು ಇರಲ್ಲ: ಸಲ್ಮಾನ್ ಖಾನ್ ಸೋದರನ ಶಾಕಿಂಗ್ ಮಾತು

Leave a Comment