Entertainment

Vijaya Devarakonda; ಹೊಸ ನಿರ್ದೇಶಕರ ಜೊತೆ ಸಿನಿಮಾ ಮಾಡಲ್ಲ; ವಿಜಯ ದೇವರಕೊಂಡ ಶಾಕಿಂಗ್ ನಿರ್ಧಾರಕ್ಕೆ ಇದೇ ಕಾರಣ

Vijaya Devarakonda: ಟಾಲಿವುಡ್ ನಲ್ಲಿ (Tollywood) ಯುವ ಸ್ಟಾರ್ ನಟರಲ್ಲಿ ನಟ ವಿಜಯ ದೇವರಕೊಂಡ (Vijaya Devarakonda) ಸಹಾ ಒಬ್ಬರಾಗಿದ್ದಾರೆ. ವಿಶೇಷ ಏನಂದ್ರೆ ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟರಾಗಿ ಮೆರೆಯುತ್ತಿರುವ ಯುವ ನಟರಲ್ಲಿ ಬಹುತೇಕ ಎಲ್ಲರೂ ಸಹಾ ಸಿನಿಮಾ ಬ್ಯಾಕ್ ಗ್ರೌಂಡ್ ಪ್ರಬಲವಾಗಿರುವ ಮನೆತನಗಳಿಂದ ಬಂದಿರುವವರಾಗಿದ್ದು, ಅವರ ನಡುವೆ ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಟಾಲಿವುಡ್ ಗೆ ಎಂಟ್ರಿ ಕೊಟ್ಟು ಇಂದು ಸ್ಟಾರ್ ನಟನಾಗಿ ವಿಜಯ ದೇವರಕೊಂಡ ತನಗಾಗಿ ಒಂದು ಸ್ಥಾನವನ್ನು ಮತ್ತು ಅಭಿಮಾನಿಗಳ ಬಳಗವನ್ನು ನಟ ಪಡೆದುಕೊಂಡಿದ್ದಾರೆ.

ಸಿನಿಮಾ ರಂಗದಲ್ಲಿ ಏಳು ಬೀಳುಗಳನ್ನು ಕಂಡು ಇಂದು ಸ್ಟಾರ್ ಆಗಿರುವ ವಿಜಯ ದೇವರಕೊಂಡ ತಮ್ಮ ಆಟಿಟ್ಯೂಡ್ ನಿಂದಾಗಿ ರೌಡಿ ಹೀರೋ ಅಂತ ಕರೆಸಿಕೊಂಡಿದ್ದಾರೆ. ಕೆಲವೊಮ್ಮೆ ನಟ ಆಡುವ ಮಾತುಗಳಿಂದಾಗಿ ಅವರನ್ನು ಟ್ರೋಲ್ ಮಾಡಲಾಗುತ್ತದೆ. ಲೈಗರ್ (Liger) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಏನೂ ಆದ್ರೂ ಆ ಸಿನಿಮಾ ಹೀನಾಯ ಸೋಲನ್ನು ಕಂಡು, ಇದರ ಪರಿಣಾಮವಾಗಿ ನಟನ ಒಂದು ಸಿನಿಮಾ ನಿಂತು ಹೋಗಿದೆ.

ಲೈಗರ್ ನಂತರ ಸಮಂತಾ (Samantha) ಜೊತೆಗೆ ನಟ ಖುಷಿ (Khushi) ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸಾಧಾರಣ ಗೆಲುವನ್ನು ಪಡೆಯಿತೇ ಹೊರತು ಸೂಪರ್ ಹಿಟ್ ಆಗಿಲ್ಲ. ಈಗ ನಟನ ಫ್ಯಾಮಿಲಿ ಸ್ಟಾರ್ (Family Star) ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಆಗಿದ್ದು, ಈ ಸಿನಿಮಾ ನಟನ ಕೈ ಹಿಡಿಯಲಿದೆಯಾ? ಅನ್ನೋದನ್ನ ಕಾದು ನೋಡಬೇಕಾಗಿದೆ. ಇವೆಲ್ಲವುಗಳ ನಡುವೆ ವಿಜಯ ದೇವರಕೊಂಡ ನೀಡಿದ ಹೇಳಿಕೆಯೊಂದು ಸುದ್ದಿಯಾಗಿ, ಚರ್ಚೆಗೆ ಕಾರಣವಾಗಿದೆ.‌

ನಟ ವಿಜಯ ದೇವರಕೊಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೊಸ ನಿರ್ದೇಶಕರುಗಳನ್ನು ನಾನೇ ಬ್ಲಾಕ್ ಮಾಡಿಕೊಂಡರೆ, ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹಿರೋಗಳ ಜೊತೆಗೆ ಯಾರು ಸಿನಿಮಾವನ್ನು ಮಾಡ್ತಾರೆ? ಅದಕ್ಕೆ ನಾನು ಹೊಸ ನಿರ್ದೇಶಕರ ಜೊತೆಗೆ ಕೆಲಸವನ್ನು ಮಾಡುವುದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದು, ಈ ಮಾತುಗಳು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ನೆಟ್ಟಿಗರಿಂದು ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರ್ತಿದೆ. ಒಂದಷ್ಟು ಜನ ನಿಮ್ಮ ಮಾತು ಸರಿಯಾಗಿಯೇ ಇದೆ ಅಂತ ಹೇಳಿದ್ರೆ ಇನ್ನೂ ಕೆಲವರು ಹಾಗಾದ್ರೆ ಇನ್ಮುಂದೆ ನಿಜವಾಗಿಯೂ ನೀವು ಹೊಸ ನಿರ್ದೇಶಕರ ಜೊತೆ ಕೆಲಸ ಮಾಡೋದಿಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ನೀವೇನು ಈಗಾಗಲೇ ಐವತ್ತು ಸಿನಿಮಾ ಮಾಡಿದ್ದೀರಾ? ಹೇಗೆ ಅಂತ ಕಾಲೆಳೆದಿದ್ದಾರೆ.‌

Soma Shekar

Recent Posts

Shanti Williams: ಗರ್ಭಿಣಿ ಆಗಿದ್ರೂ ಹಣ ಕೊಟ್ಟಿದ್ದೆ: ನಟ ಮೋಹನ್ ಲಾಲ್ ಇನ್ನೊಂದು ಮುಖ ತೋರಿಸಿದ ಹಿರಿಯ ನಟಿ

Shanti Williams: ಮಲೆಯಾಳಂ ಸಿನಿಮಾ ರಂಗದ ಹಿರಿಯ ನಟಿ, ಪ್ರಸ್ತುತ ಸಿನಿಮಾ ರಂಗದಿಂದ ದೂರವೇ ಉಳಿದಿರುವ ನಟಿ ಶಾಂತಿ ವಿಲಿಯಮ್ಸ್…

18 mins ago

Amruthadhaare: ಮಲ್ಲಿಗೆ ಸ್ಕೆಚ್ ಹಾಕಿದ ಜೈದೇವ್, ಆದ್ರೆ ಆಗಿದ್ದು ಮಾತ್ರ ಬೇರೆ, ಮಹಿಮಾ ಎಂಟ್ರಿ ಶಕುಂತಲಾ ಶಾಕ್

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಮಲ್ಲಿಯನ್ನು ಮುಗಿಸಲು ಜೈದೇವ್…

2 hours ago

Kiara Advani: ಕಾನ್ ಸಿನಿಮೋತ್ಸವದಲ್ಲಿ ಅಂದದ ಕಿಚ್ಚು ಹೊತ್ತಿಸಿದ ಕಿಯಾರಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Kiara Advani: ಕಾನ್ (Cannes 2024) ಸಿನಿಮಾ ಉತ್ಸವ ಬಂತೆಂದರೆ ಅಲ್ಲಿ ವಿಶ್ವದ ಸಿನಿಮಾ ತಾರೆಯರ ಚಿತ್ರ ವಿಚಿತ್ರ ಹಾಗೂ…

16 hours ago

Pavithra Jayram: ಪವಿತ್ರ ಕರೀತಿದ್ದಾಳೆ ಅಂತ ಹೆಂಡ್ತಿ ಮಕ್ಕಳನ್ನ ಮರೆತು ಸಾವಿಗೆ ಶರಣಾದ ಚಂದು

Pavithra Jayaram: ತ್ರಿನಯನಿ (Trinayani) ತೆಲುಗು ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram)…

18 hours ago

Brundavana Serial: ಬೃಂದಾವನ ಸೀರಿಯಲ್ ಪ್ರೇಕ್ಷಕರಿಗೆ ಬ್ಯಾಡ್ ನ್ಯೂಸ್; ಇದನ್ನ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ

Brundavana Serial: ಕನ್ನಡ ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ (Brundavana Serial) ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡು ಜನಪ್ರಿಯತೆಯನ್ನು ಪಡೆದುಕೊಂಡಿದೆ.…

24 hours ago

Sai Pallavi: ಮಾಡಲ್ಲ, ಮಾಡಲ್ಲ ಅಂತಾನೇ ಗ್ರೀನ್ ಸಿಗ್ನಲ್ ಕೊಟ್ಟಿದ್ಯಾಕೆ? ಶಾಕ್ ನಲ್ಲಿ ಸಾಯಿಪಲ್ಲವಿ ಫ್ಯಾನ್ಸ್

Sai Pallavi: ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಈಗ ಪ್ಯಾನ್ ಇಂಡಿಯಾ ಸ್ಟಾರ್…

1 day ago

This website uses cookies.