Bigg Boss Kannada ಟಾರ್ಗೆಟ್ ಮಾಡಿದ್ರೆ ಬೀಳಿಸೋಕೆ ಎರಡು ನಿಮಿಷ ಸಾಕು; ಬಿಗ್ ಬಾಸ್ ಮನೇಲಿ ವಾಕ್ಸಮರ

Written by Soma Shekar

Published on:

---Join Our Channel---

Bigg Boss Kannada ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಖಂಡಿತ ಪ್ರೇಕ್ಷಕರ ನಿರೀಕ್ಷೆಯಂತೆ ಸಾಗುತ್ತಿಲ್ಲ ಅನ್ನೋದು ಈಗಾಗಲೇ ಪ್ರೇಕ್ಷಕರಿಗೆ ಅರ್ಥವಾಗಿದೆ. ಮೂರನೇ ವಾರದಲ್ಲಿ ನಿಯಮ ಉಲ್ಲಂಘನೆ ಹಾಗೂ ಅಪ ಶಬ್ಧ ಪ್ರಯೋಗ ಎನ್ನುವ ಕಾರಣಕ್ಕೆ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಲಾಯರ್ ಜಗದೀಶ್ ಮತ್ತು ರಂಜಿತ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಸ್ಪರ್ಧಿಗಳಾಗಿದ್ದಾರೆ.

ಲಾಯರ್ ಜಗದೀಶ್ (Lawyer Jagadish) ಅವರು ಹೊರ ಬಂದ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಗಾಯನ ಹನುಮಂತನನ್ನ ಮನೆಯೊಳಗೆ ಕಳಿಸಲಾಗಿದೆ. ಆದರೆ ಹನುಮಂತ ಮೊದಲ ದಿನವೇ ತನ್ನನ್ನು ವಾಪಸ್ ಕಳಿಸಿ ಬಿಡಿ ಎಂದು ಸಹಾ ಕೇಳಿದ್ದಾನೆ. ಇವೆಲ್ಲವುಗಳ ನಡುವೆ ಹೊಸ ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್ ನಡೆದಿದ್ದು, ಈ ವೇಳೆ ಮತ್ತೆ ಜಗಳ ನಡೆದಿದೆ.‌

ಗಡಿಯಾರದ ಮುಳ್ಳಿನಂತಹ ಆಕೃತಿಯನ್ನು ಹಿಡಿದು ಹಲಗೆಯ ಮೇಲೆ ಇಬ್ಬರು ಹದಿನೇಳು ನಿಮಿಷ ನಡೆಯುವ ಟಾಸ್ಕ್ ಆಗಿದ್ದು, ಹಲಗೆ ಮೇಲಿರುವವರನ್ನು ಬೀಳಿಸುವುದು, ತಡೆಯುವುದು ಎದುರಾಳಿಗಳಿಗೆ ಕಷ್ಟವಾಗಿದೆ. ಈ ವೇಳೆ ಭವ್ಯ (Bhavya) ಮತ್ತು ತ್ರಿವಿಕ್ರಮ್ (Trivikram) ನಡುವೆ ಮಾತಿನ ಚಕಮಕಿ ನಡೆದಿದ್ದು, ಭವ್ಯ ಒಬ್ಬರನ್ನೇ ಟಾರ್ಗೆಟ್ ಮಾಡಬೇಡಿ ಎಂದು ಅರಚಿದ್ದಾರೆ.

ಅದಕ್ಕೆ ಉತ್ತರ ಕೊಟ್ಟ ತ್ರಿವಿಕ್ರಮ್ ಹೇಗೆ ಆಡಬೇಕು ಅನ್ನೋ ಕಾಮನ್ ಸೆನ್ಸ್ ನಮಗೂ ಇದೆ. ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡ್ತಿಲ್ಲ. ಹಾಗೆ ಟಾರ್ಗೆಟ್ ಮಾಡೋದೇ ಆದ್ರೆ ಕೆಳಗೆ ಬೀಳಿಸೋದಕ್ಕೆ ನಮಗೆ ಕೇವಲ ಎರಡು ನಿಮಿಷ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.‌ ಪ್ರೊಮೊ ವೈರಲ್ ಆಗಿದೆ, ಮುಂದೇನಾಯ್ತು ಅನ್ನೋದನ್ನ ಇಂದಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ. ‌

Leave a Comment