Bigg Boss Kannada: ಆ ವ್ಯಕ್ತಿಗೆ ಕ್ಲೀನ್ ಚಿಟ್ ಕೊಡೋ ಹಾಗಿತ್ತು; ಕಿಚ್ಚನ ಪಂಚಾಯ್ತಿ ಬಗ್ಗೆ ಚೈತ್ರಾ ಟೀಕೆ, ಬೇಸರ

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ಮೂರನೇ ವಾರದ ಕಿಚ್ಚನ ಪಂಚಾಯ್ತಿಗೆ ನಿನ್ನೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಮನೆಯಿಂದ ಹೊರಗೆ ಹೋದವರು ಮಾತ್ರವೇ ತಪ್ಪು ಮಾಡಿಲ್ಲ, ಒಳಗೆ ಇರುವವರು ಏನೆಲ್ಲಾ ತಪ್ಪನ್ನ ಮಾಡಿದ್ದಾರೆನ್ನುವುದನ್ನು ಸೂಕ್ಷ್ಮವಾಗಿ ವಿವರಿಸಿ ಹೇಳಿದ್ದಾರೆ.

ಕಿಚ್ಚ ಸುದೀಪ್ ಅವರು ಒಬ್ಬೊಬ್ಬರ ತಪ್ಪನ್ನು ಸಹಾ ವಿವರಿಸಿ ಹೇಳಿದ್ದಾರೆ. ಈ ವೇಳೆ ಚೈತ್ರ ಕುಂದಾಪುರ (Chaithra Kundapura) ಅವರಿಗೆ ನೀವು ಆಡಿದ ಮಾತು ಹೆಣ್ಣನ್ನು ನಿಂದನೆ ಮಾಡುವ ಹಾಗಿತ್ತು. ಹೇಗೆ ಆ ರೀತಿ ಹೇಳಿದ್ರಿ? ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಅನ್ನೋ ನೀವು ಹೇಗೆ ಆ ಮಾತನ್ನ ಹೇಳಿದಿರೆಂದು ಪ್ರಶ್ನೆ ಮಾಡಿದ್ದರು.

ನಾನಾಡಿದ ಮಾತು ತಪ್ಪೆಂದು ಕ್ಷಮೆ ಕೇಳಿದ ಚೈತ್ರಾ ಕುಂದಾಪುರ ಅವರು ವೀಕೆಂಡ್ ಪಂಚಾಯ್ತಿ ಮುಗಿದ ಮೇಲೆ ಅನುಷಾ ಮತ್ತು ಮಾನಸ ಜೊತೆ ವೀಕೆಂಡ್ ಎಪಿಸೋಡ್ ಬಗ್ಗೆಯೇ ಟೀಕೆ ಮಾಡುವಂತೆ ಮಾತನಾಡಿದ್ದಾರೆ. ವೀಕೆಂಡ್ ಎಪಿಸೋಡ್ ಜಗದೀಶ್ ಅವರಿಗೆ ಕ್ಲೀನ್ ಚಿಟ್ ಕೊಡೋ ಹಾಗಿತ್ತು ಎಂದಿದ್ದಾರೆ.

ವೀಕೆಂಡ್ ಎಪಿಸೋಡ್ ಜನರ ಮುಂದೆ ಮನೆಯಲ್ಲಿ ಇರೋರನ್ನ ವಿಲನ್ ಗಳಂತ ತೋರಿಸಿದೆ ಎಂದಿದ್ದಾರೆ. ಅಲ್ಲದೇ ಜನ ಸುದೀಪ್ ಅವರು ಹೇಳಿದ ಬೇರೆ ವಿಚಾರಗಳನ್ನು ನೆನಪಿಟ್ಟುಕೊಳ್ಳಲ್ಲ, ನಮ್ಮ ಬಗ್ಗೆ ಹೇಳಿದ ವಿಚಾಎ ಮಾತ್ರ ನೆನಪಿಟ್ಟುಕೊಳ್ತಾರೆ ಎಂದು ಹೇಳಿದ್ದಾರೆ. ವೀಕೆಂಡ್ ಬಗ್ಗೆ ಮಾತಾಡಿದ ಚೈತ್ರಾ ಮಾತುಗಳ ಬಗ್ಗೆ ಮುಂದಿನ ವಾರ ಮತ್ತೆ ಚರ್ಚೆಯಾಗುತ್ತಾ ಕಾದು ನೋಡಬೇಕಾಗಿದೆ.

Pawan Kalyan: ಕಿಚ್ಚ ಸುದೀಪ್ ಅವ್ರ ತಾಯಿ ನಿಧನ, ಕನ್ನಡದಲ್ಲೇ ಕಿಚ್ಚನಿಗೆ ಧೈರ್ಯ ಹೇಳಿದ ಪವನ್ ಕಲ್ಯಾಣ್

Leave a Comment