Pawan Kalyan: ಕಿಚ್ಚ ಸುದೀಪ್ ಅವ್ರ ತಾಯಿ ನಿಧನ, ಕನ್ನಡದಲ್ಲೇ ಕಿಚ್ಚನಿಗೆ ಧೈರ್ಯ ಹೇಳಿದ ಪವನ್ ಕಲ್ಯಾಣ್

Written by Soma Shekar

Published on:

---Join Our Channel---

Pawan Kalyan : ಕನ್ನಡದ ನಟ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿಯವರಾದ ಸರೋಜಾ ಅವರು ನಿಧನರಾಗಿದ್ದು, ಸ್ಯಾಂಡಲ್ವುಡ್ ನ (Sandalwood) ಹಲವು ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ ಹಾಗೂ ಅಂತಿಮ ದರ್ಶನಕ್ಕೂ ಹಾಜರಾಗಿದ್ದಾರೆ.

ಈ ವೇಳೆ ಆಂಧ್ರ ಪ್ರದೇಶ ಡಿಸಿಎಂ(Andra DCM) ಹಾಗೂ ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಅವರು ಸುದೀಪ್ ತಾಯಿ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.‌ ಪವನ್ ಕಲ್ಯಾಣ್ ಅವರು ಒಂದು ಟ್ವೀಟ್ ಮೂಲಕ ಸಂತಾನವನ್ನು ಸೂಚಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಟ್ವೀಟ್ ನಲ್ಲಿ, ‘ಖ್ಯಾತ ನಟ ಕಿಚ್ಚ ಸುದೀಪ್ ತಾಯಿ ಸರೋಜ ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಶ್ರೀಮತಿ ಸರೋಜ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಹಾಗೂ ಪ್ರೋತ್ಸಾಹವಿದೆ ಎಂದು ಸುದೀಪ್ ಹೇಳಿದ್ರು.

ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಬೇಕು. ಶ್ರೀಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು’ ಎಂದು ಪವನ್​ ಕಲ್ಯಾಣ್ ಬರೆದು ತಮ್ಮ ಸಂತಾನವನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Bigg Boss Kannada : ಜಗದೀಶ್ ಮಾತಾಡಿದ್ದೆಲ್ಲಾ ಟೆಲಿಕಾಸ್ಟ್ ಆಗಿಲ್ವಾ? ರಂಜಿತ್ ಜಗದೀಶ್ ಸಿಂಹ ಅಲ್ಲ ಇಲಿ ಅಂದಿದ್ಯಾಕೆ

Leave a Comment