Bigg Boss Kannada ಇದು ಶೋ ಅಷ್ಟೇ, ತಾಳಿ ತೋರಿಸೋ ಅವಶ್ಯಕತೆ ಇಲ್ಲ ಅಂತ ಮಾನಸ ಮೇಲೆ ಸಿಟ್ಟಾದ ಜನ

Written by Soma Shekar

Published on:

---Join Our Channel---

Bigg Boss Kannada : ಬಿಗ್‌ ಬಾಸ್‌ ಸೀಸನ್‌ (Bigg Boss Kannada) 11ರ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗಿದೆ. ಮೊದಲ ಎಲಿಮಿನೇಷನ್ ನಂತರ ಹದಿನಾರು ಮಂದಿ ಇದ್ದ ಮನೆಯಲ್ಲಿ ಈಗ ಜಗದೀಶ್‌ ಹಾಗೂ ರಂಜಿತ್‌ ಮನೆಯಿಂದ ಔಟ್‌ ಆದ ಮೇಲೆ 14 ಕ್ಕೆ ಇಳಿಕೆಯಾಗಿದೆ. ಮನೆಯಲ್ಲಿ ಜಗಳಗಳು ಅನ್ನೋದು ಜಗದೀಶ್ ಅವರಿಂದಲೇ ಆರಂಭ ಆಗೋದು ಅನ್ನೋ ಮಾತೊಂದಿತ್ತು.

ಆದರೆ ಈಗ ಜಗದೀಶ್ (Lawyer Jagadish) ಅವರ ನಿರ್ಗಮನದ ನಂತರವೂ ಮನೆಯಲ್ಲಿ ಸ್ಪರ್ಧಿಗಳ ನಡುವೆ ವಾಕ್ಸಮರ ನಡೆದಿದೆ. ಅದರಲ್ಲೂ ಮನೆಯಲ್ಲಿ ಕೂಗಾಟ ನಡೆದಿರುವುದು ಮಾನಸ ಮತ್ತು ಚೈತ್ರ ಕುಂದಾಪುರ ನಡುವೆ. ಬಿಗ್ ಬಾಸ್ ನೀಡಿದ್ದ ಒಂದು ಟಾಸ್ಕ್ ನಿಂದಾಗಿ ಅವರ ನಡುವೆ ಇಂತಹುದೊಂದು ಜಗಳಕ್ಕೆ ಕಾರಣವಾಯಿತು. ‌

ಕೂಗಾಟ ಆಗಿದ್ದು ಮಾನಸ (Manasa) ಹಾಗೂ ಚೈತ್ರಾ (Chaithra Kundapura) ನಡುವೆ. ಬಿಗ್‌ ಬಾಸ್‌ ಒಂದು ಟಾಸ್ಕ್‌ವನ್ನು ಸ್ಪರ್ಧಿಗಳಿಗೆ ನೀಡಿದ್ದರು. ಅದುವೇ ಅಪ್ರಮಾಣಿಕ ಹಾಗೂ ಕುಂತಂತ್ರಿ ಯಾರು ಎಂದು ಹಣೆಪಟ್ಟಿ ಕೊಡೋದು. ಇದ್ರಲ್ಲಿ ಅತಿ ಹೆಚ್ಚು ಹಣೆಪಟ್ಟಿಯನ್ನು ಪಡೆದವರು ಚೈತ್ರ ಕುಂದಾಪುರ ಅವರು.‌ ಮಾನಸ ಚೈತ್ರ ಅವರಿಗೆ ಕುತಂತ್ರಿ ಪಟ್ಟವನ್ನು ನೀಡಿದರು.

ಅತಿ ಹೆಚ್ಚು ಹಣೆ ಪಟ್ಟಿ ಪಡೆದು ಚೈತ್ರ ಜೈಲು ಸೇರಿದರು. ಅಲ್ಲಿಗೆ ಹೋದ ನಂತರ ಮಾನಸ ಮತ್ತು ಚೈತ್ರ ನಡುವೆ ಜಗಳ ಆಗಿದೆ. ಈ ವೇಳೆ ಜಗಳ ಅತಿರೇಕಕ್ಕೆ ಹೋದಾಗ ಮಾನಸ ತಮ್ಮ ತಾಳಿಯನ್ನು ಕೈಯಲ್ಲಿ ಹಿಡಿದು ಆಣೆ ಮಾಡಿ ತಾನು ಹಾಗೆ ಹೇಳಲಿಲ್ಲ ಎಂದಿದ್ದಾರೆ. ಆದರೂ ಈ ಘಟನೆ ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ.

ಮಾನಸ ಅವರ ಈ ವರ್ತನೆಗೆ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ.‌ ಅದೊಂದು ಶೋ ಅಷ್ಟೇ, ಅಲ್ಲಿ ತಾಳಿ ಹಿಡಿದುಕೊಂಡು ಆಣೆ , ಪ್ರಮಾಣ ಮಾಡೋ ಅವಶ್ಯಕತೆ ಏನಿದೆ ಎಂದು ಅನೇಕರು ಸಿಟ್ಟನ್ನು ಹೊರಹಾಕಿದ್ದಾರೆ. ಇನ್ನೂ ಕೆಲವರು ಮಾನಸ ಹೋಗಿರೋದೇ ಜಗಳ ಮಾಡೋಕಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

Bigg Boss : ಬೆಚ್ಚನೆಯ ಬಿಸಿ ಅಪ್ಪುಗೆಯಲ್ಲಿ ಶಿಶಿರ್, ಐಶ್ವರ್ಯ; ಸಿಹಿ ಮುತ್ತಿಗೆ ನಾಚಿ ನೀರಾದ ಐಶ್ವರ್ಯ

Leave a Comment