Bigg Boss Kannada ನೀನು ಲಾಯರ್ ಅಲ್ಲ, ರೋಲ್ ಕಾಲ್ ಅಂತ ಜಗದೀಶ್ ನ ಗುಮ್ಮಿದ ಚೈತ್ರ ಕುಂದಾಪುರ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಮನೆಯಲ್ಲಿದ್ದ (Bigg Boss Kannada) ಜಗದೀಶ್ (Jagadish) ಅವರು ವಕೀಲರೇ ಅಲ್ಲ ಎನ್ನುವಂತಹ ಒಂದು ವಿಚಾರ ಹೊರಗೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ‌ಅವರು ತಮ್ಮ ವಿದ್ಯಾರ್ಹತೆ ವಿಚಾರದಲ್ಲಿ ನಕಲಿ ಪ್ರಮಾಣಪತ್ರ ನೀಡಿ, ವಕೀಲಗಿರಿ ಪಡೆದಿದ್ದರೆಂದು ಅವರ ಲೈಸೆನ್ಸ್​ ಕ್ಯಾನ್ಸಲ್ ಆಗಿದೆ ಎಂದು ಆರೋಪ ಮಾಡಲಾಗಿದೆ. ಆದರೆ ಇದನ್ನ ಅವರ ಆಪ್ತರು ಸುಳ್ಳು ಎಂದಿದ್ದಾರೆ.

ಈಗ ಇದೇ ವಿಚಾರ ದೊಡ್ಮನೆ ಒಳಗೂ ಸಹಾ ಚರ್ಚೆಗೆ ಬಂದಿದೆ. ಚೈತ್ರಾ ಕುಂದಾಪುರ (Chaithra Kundapura) ಅವರು ಜಗದೀಶ್ ವಿರುದ್ಧ ಸಿಡಿದೆದ್ದು ರೋಲ್ ಕಾಲ್ ಲಾಯರ್ ಎಂದಿದ್ದಾರೆ. ಹಂಸ ಅವರ ವಿರುದ್ಧ ಜಗದೀಶ್ ಅಡಿದ ಕೆಟ್ಟ ಮಾತಿನ ಕಾರಣವಾಗಿ ಮನೆಯಲ್ಲಿ ದೊಡ್ಡ ಜಗಳವೇ ನಡೆದಿದೆ. ಈ ವೇಳೆ ಚೈತ್ರ ಕುಂದಾಪುರ ಅವರ ಬಗ್ಗೆ ಜಗದೀಶ್ ಮಾತನಾಡಿದ್ದಾರೆ.‌

ಹಂಸ ವಿಚಾರದಲ್ಲಿ ಚೈತ್ರಾ ಅವರು ಜಗದೀಶ್ ಅವರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದು ಜಗದೀಶ್ ಅವರಿಗೆ ಸಿಟ್ಟು ತರಿಸಿತ್ತು. ಆಗ ಅವರು ಕೋಪದಿಂದ ಐದು ಕೋಟಿ ರೂಪಾಯಿ ತಂಗೊಂಡಿದೀಯಾ ಅನ್ನೋ ಆರೋಪ ಮಾಡಿದ್ದಾರೆ. ಆಗ ಪ್ರತ್ಯುತ್ತರವಾಗಿ ಚೈತ್ರಾ ಸಾಕ್ಷಿ ಎಲ್ಲಿದೆ ಎಂದಾಗ, ಜಗದೀಶ್ ಅವರು ಹೋಗಿ ಚಾರ್ಜ್​ಶೀಟ್​ನಲ್ಲಿ ನೋಡಿಕೋ ಕಾಣುತ್ತೆ ಅಂತ ಹೊರಗಿನ ವಿಚಾರ ಎತ್ತಿದ್ದಾರೆ.

ಯಾವಾಗ ಜಗದೀಶ್ ಚೈತ್ರ ಅವರ ಖಾಸಗಿ ವಿಚಾರ ಮಾತನಾಡಿದ್ರೋ ಆಗ ಚೈತ್ರ ಕೂಡಾ ರೊಚ್ಚಿಗೆದ್ದಿದ್ದಾರೆ. ನೀನು ರೋಲ್ ಕಾಲ್ ಮಾಡ್ತೀಯಾ, ಅದನ್ನ ಹೇಳಬೇಕಾ. ನೀನು ಲಾಯರ್ ಗಿರಿಗೆ ಅರ್ಹನೇ ಅಲ್ಲ. ನೀನು ವಕೀಲನೇ ಅಲ್ಲ ಎಂದು ಚೈತ್ರ ಜಗದೀಶ್ ಮೇಲೆ ಸಿಟ್ಟಾಗಿದ್ದಾರೆ.

Leave a Comment