Bigg Boss ಉಗ್ರಂ ಮಂಜು ನೇತೃತ್ವದಲ್ಲಿ ಗುಂಪುಗಾರಿಕೆ? ನಾಮಿನೇಷನ್ ನಿಂದ ಸೇವ್ ಆಗೋಕೆ ಈ ಪ್ಲಾನ್

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಮನೆಯಲ್ಲಿ ಮೂರನೇ ವಾರದ ಆಟ ಮತ್ತೊಂದು ರೂಪ ಪಡೆದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಇನ್ನು ಈಗ ಬಿಗ್ ಬಾಸ್‌ ಸೀಸನ್‌ 11ರ (Bigg Boss Kannada 11) ಮೂರನೇ ವಾರದ ನಾಮಿನೇಷನ್‌ ವಿಚಾರವಾಗಿ ಮನೆ ಮಂದಿಯ ನಡುವೆ ಮಾತು ಶುರುವಾಗಿದೆ. ಗುಂಪುಗಾರಿಕೆ ಸಹಾ ಆರಂಭವಾಗಿದೆ ಎನ್ನುವುದು ಹೊಸ ಪ್ರೊಮೊದಲ್ಲಿ ಕಂಡಿದೆ.

ಈ ವಾರ ಮನೆಯಲ್ಲಿನ ಬೆಳವಣಿಗೆಗಳನ್ನು ನೀಡಿದಾಗ ಉಗ್ರಂ ಮಂಜು (Ugram Manju) ಸ್ಪರ್ಧಿಗಳ ನಡುವೆ ಹೆಚ್ಚು ಮೂಗು ತೂರಿಸುವಂತೆ ಕಾಣ್ತಿದೆ. ಈಗ ವಾಹಿನಿ ಶೇರ್ ಮಾಡಿರೋ ಹೊಸ ಪ್ರೊಮೊದಲ್ಲಿ ನೋಡಿದಾಗ ಮಂಜು, ಮೋಕ್ಷಿತಾ, ಗೌತಮಿ ಗುಂಪು ಒಂದು ಕಡೆ, ರಂಜಿತ್‌, ತ್ರಿವಿಕ್ರಮ್‌ ಗುಂಪು ಇನ್ನೊಂದು ಕಡೆ ಕಾಣಿಸಿದೆ.

ಮತ್ತೊಂದು ಟೀಮ್ ಎನ್ನುವ ಹಾಗೆ ಸುರೇಶ್‌ ಧನರಾಜ್‌‌‌ ಇಬ್ಬರ ಒಂದು ಟೀಮ್ ಅನ್ನು ಮಾಡಿಕೊಂಡಿರುವಂತೆ ಕಂಡಿದೆ. ಉಗ್ರಂ ಮಂಜು ಗೌತಮಿ ಮತ್ತು ಮೋಕ್ಷಿತಾ ಜೊತೆ ಮಾತಾಡ್ತಾ, ಮೊದಲಿಗೆ ಚೈತ್ರಾ ಸೇಫ್‌ ಆದ್ರು. ಈ ರೌಂಡ್‌ನಲ್ಲಿ ಮಾನಸ ಸೇವ್‌ ಆದ್ರು. ನಾನು ವೈಯಕ್ತಿಕವಾಗಿ ಆಡಿಲ್ಲ ಅಂದ್ರೆ ಪ್ರತಿ ಸಲ ನಾನು ಹೋಗಿಲ್ಲ ಅಂದ್ರೆ ಕೇಳು ಅಂದಿದ್ದಾರೆ.‌

ಉಗ್ರಂ ಮಂಜು ಅವರು ತಮ್ಮ ಸ್ಟ್ರಾಟಜಿ ಬಗ್ಗೆ ಮಾತನಾಡಿರೋದು ಕಂಡಿದೆ. ಬೇರೆ ತಂಡದವರು ಮಾತಾಡಿರೋದು ಪ್ರೊಮೊದಲ್ಲಿ ಕಂಡಿಲ್ಲ. ಇದಕ್ಕೂ ಮುನ್ನ ಜಗದೀಶ್ (Jagadish) ಅವರು ನಾಮಿನೇಷನ್ ಬಗ್ಗೆ ಸಿಟ್ಟಾಗಿ, ಇದ್ರಲ್ಲೂ ಗ್ರೂಪಿಸಂ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

Bigg Boss ಮನೆಗೆ ಜಗದೀಶ್ ರೀ ಎಂಟ್ರಿ ? ಜಗದೀಶ್ ಅವರ ಪತ್ನಿ ಹೇಳಿದ್ದೇನು, ಜಗದೀಶ್ ನಿಜವಾಗ್ಲೂ ಹೊರಗೆ ಬಂದ್ರಾ

Leave a Comment