Bigg Boss Kannada 11 ಜಗದೀಶ್ ಚೈತ್ರ ನಡುವೆ ಕಾಳಗ, ಅಪ್ಪಂಗೆ ಹುಟ್ಟಿದ್ರೆ ಮಾತಾಡ್ಲಿ ಅಂತ ಸವಾಲು ಹಾಕಿದ ಚೈತ್ರ

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ (Bigg Boss Kannada 11) ಸೀಸನ್ 11 ರ ಮೂರನೇ ವಾರದಲ್ಲಿ ಶುರುವಾಗಿದೆ ಯುದ್ಧ. ಈ ಬಾರಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬಂದಿದ್ದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿತ್ತು. ಆದ್ರೆ ಮನೆಯಲ್ಲಿ ಅವರು ಕೊಂಚ ಸೈಲೆಂಟಾಗೇ ಇದ್ರು. ಆದ್ರೆ ಇದೀಗ ಅವರು ಮತ್ತು ಜಗದೀಶ್ ಅವರ ನಡುವೆ ನಡೆದಿರೋ ವಾಕ್ಸಮರದಲ್ಲಿ ಚೈತ್ರ ಸಿಕ್ಕಾಪಟ್ಟೆ ವೈಲೆಂಟ್ ಆಗಿದ್ದಾರೆ.

ಆರಂಭದಲ್ಲಿ ಚೈತ್ರ (Chaithra Kundapura) ಅವರನ್ನ ಹೈಲೈಟ್ ಮಾಡಿದ್ದ ಜಗದೀಶ್ ಅವರೇ ಈಗ ಯಾವುದೋ ವಿಚಾರಕ್ಕೆ ಚೈತ್ರ ಎದುರು ಮಾತಿನ ಕಾಳಗ ನಡೆಸಿದ್ದಾರೆ. ಚೈತ್ರ ನಾನು ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಅಂತ ಸುಮ್ಮನೆ ಇರೋದಾಗಿ ಹೇಳಿದ್ದಾರೆ. ಜಗದೀಶ್ ಅವರು ಆಕೆಗೇನು ಫಾಲೋಯರ್ಸ್ ಇರೋದು ನನಗೂ ಇದ್ದಾರೆ ಅಂತ ತಿರುಗೇಟು ನೀಡಿದ್ದಾರೆ.

ನಂತರ ಜಗದೀಶ್ (Lawyer Jagadish) ಅವರು ಆಕೆ ಮೇಲೆ ಒಂದು ಇಪ್ಪತ್ತೆಂಟು ಕೇಸ್ ಗಳಿದೆ ಎಂದಿದ್ದು ಈ ಮಾತಿಗೆ ಚೈತ್ರ ಫೈರ್ ಆಗಿದ್ದಾರೆ.‌ ನನ್ನ ಕೇಸ್ ಬಗ್ಗೆ ಮಾತಾಡೋಕೆ ಯಾವನಿಗೂ ಯೋಗ್ಯತೆ ಇಲ್ಲ, ಐವತ್ತಲ್ಲ ನೂರು ಕೇಸ್ ಗಳನ್ನ ಹಾಕಿಸಿಕೊಳ್ತೀನಿ, ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ ಎಂದಿದ್ದಾರೆ.

ಅಲ್ಲದೇ ಯಾವನಾದ್ರು ಅಪ್ಪಂಗೆ ಹುಟ್ಟಿದ್ರೆ ನನ್ನ ಕಣ್ಣೆದುರು ಬಂದು ನನ್ನ ಕೇಸ್ ಬಗ್ಗೆ ಮಾತನಾಡ್ಲಿ ಅಂತ ಓಪನ್ ಚಾಲೆಂಜ್ ಹಾಕಿದ್ದಾರೆ ಚೈತ್ರಾ. ಇದಾದ ಮೇಲೆ ಚೈತ್ರ ಮತ್ತು ಜಗದೀಶ್ ಅವರು ಒಬ್ಬರ ಮುಂದೆ ಮತ್ತೊಬ್ಬರು ನಿಂತು ಕೋಪದಿಂದ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಾರೆ. ಮುಂದೆ ಏನಾಯ್ತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

ಡೈರೆಕ್ಟರ್ ಟ್ಯಾಲೆಂಟೆಡ್ ಅಂತ ಹೇಳಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ Kichcha Sudeep ಕೊಟ್ರು ಕ್ಲಾರಿಟಿ

Leave a Comment