Bigg Boss Kannada 11 ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಮನೆ ಮಂದಿಗೆ ಶಾಕ್; ಒಂದು ಫೋನ್ ಕರೆ ಆತಂಕ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್‌ ಬಾಸ್‌ ಕನ್ನಡ (Bigg Boss Kannada-11) ಯಶಸ್ವಿ ಮೂರನೇ ವಾರಕ್ಕೆ ಎಂಟ್ರಿಯನ್ನು ನೀಡಿದೆ. ನಿನ್ನೆ ವೀಕೆಂಡ್ ನಲ್ಲಿ ಸುದೀಪ್ ಅವರು ಸಹಾ ಹೊಸ ಅಧ್ಯಾಯದಲ್ಲಿ ಅನಿರೀಕ್ಷಿತಗಳು ಎದುರಾಗುಲಿದೆ ಅನ್ನೋ ಮಾತನ್ನ ಸಹಾ ಹೇಳಿದ್ದರು. ಅದರಂತೆ ಮೂರನೇ ವಾರದ ಆರಂಭದಲ್ಲೇ ಮನೆ ಮಂದಿಗೆ ಶಾಕ್ ನೀಡಿದ್ದಾರೆ ಬಿಗ್ ಬಾಸ್.

ಎರಡನೇ ವೀಕೆಂಡ್ ನಲ್ಲಿ ಯಾರೂ ಎಲಿಮಿನೇಟ್ ಆಗಿಲ್ಲ. ಆದರೆ ಈ ವಾರ ಖಂಡಿತ ಎಲಿಮಿನೇಷನ್ ನಡೆಯುತ್ತೆ. ಸ್ವರ್ಗ ನರಕ ಕಾನ್ಸೆಪ್ಟ್ ಹೋಗಿ ಈಗ ಎಲ್ಲರೂ ಒಂದೇ ಮನೆಯಲ್ಲಿ ಇದ್ದಾರೆ. ಆಗಾಗ ಅವರ ನಡುವೆ ಬೇರೆ ಬೇರೆ ವಿಚಾರಗಳಿಗೆ ಮಾತಿನ‌ ಚಕಮಕಿ ಕೂಡಾ ನಡೆಯುತ್ತಿದೆ.

ಬೆಳ್ಳಂಬೆಳಗ್ಗೆ ಬಿಗ್‌ ಬಾಸ್‌ ಮನೆಯಲ್ಲಿ ಇಟ್ಟಿರುವ ಪೋನ್ ಬೂತ್ ನಲ್ಲಿ ಫೋನ್ ರಿಂಗ್ ಆಗಿದೆ. ಶಿಶಿರ್ ಕರೆ ಸ್ವೀಕರಿಸಿದ್ದು, ಇದು ಬಿಗ್‌ ಬಾಸ್‌ ನಿಮ್ಮೆಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿಮಚ್.‌ ಉಡಾಫೆತನ, ಅಪ್ರಾಮಾಣಿಕತನ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್ ಬಾಸ್‌ ಈ ಮನೆಯಲ್ಲಿ ಇರಲ್ಲ.

ನಾನು ಬ್ರೇಕ್‌ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಬಿಗ್‌ ಬಾಸ್‌ ಕಾಲ್‌ ಮಾಡಿ ಹೀಗೆ ಹೇಳಿರೋದನ್ನ ಪ್ರೊಮೊದಲ್ಲಿ ತೋರಿಸಲಾಗಿದೆ. ಬಿಗ್ ಬಾಸ್ (Bigg Boss) ಈ ಕರೆಯಿಂದ ಮನೆ ಮಂದಿ ಶಾಕ್ ಆಗಿದ್ದಾರೆ. ಇದೇನಾದರೂ ಈ ವಾರದ ಮೊದಲ ಟಾಸ್ಕ್ ಇರಬಹುದಾ? ಅಂತ ಪ್ರೇಕ್ಷಕರು ಅನುಮಾನ ಪಡುವಂತಾಗಿದೆ.

Leave a Comment