Bigg Boss Kannada ಪ್ರಾಯಶ್ಚಿತ್ತ ಆಗಲೇ ಬೇಕು, ವೀಕೆಂಡ್ ನಲ್ಲಿ ಕಿಚ್ಚ ಸೈಲೆಂಟಾಗೇ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ

Written by Soma Shekar

Published on:

---Join Our Channel---

Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ಎರಡನೇ ವೀಕೆಂಡ್ ಬಂದಿದೆ. ಈ ವೀಕೆಂಡ್ ನಲ್ಲಿ ಕಿಚ್ಚ (Kichhcha Sudeep) ನಗುನಗುತ್ತಲೇ ಮನೆಯಲ್ಲಿ ತಪ್ಪು ಮಾಡಿದವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಹೊಸ ಪ್ರೊಮೊ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಾಮಿನೇಷನ್ ವಿಚಾರದಲ್ಲಿ ಗೌತಮಿ ಅವರು ನೇರ ನಾಮಿ ನೇಷನ್ ಮಾಡುವಾಗ ಕೆಲವರ ಬಳಿ ವಿಷಯವೊಂದರ ಕ್ಲಾರಿಟಿ ತಗೊಂಡು ಅನುಷಾ ಅವರ ಹೆಸರನ್ನು ಹೇಳಿದ್ದರು.

ಟಾಸ್ಕ್ ಗೂ ಮೊದಲು ಪರದೆಗಳನ್ನು ಬಿಟ್ಟಿದ್ದ ವೇಳೆ ಅದರ ಹೊರಗೆ ಹೋಗಿ ನರಕವಾಸಿಗಳು ನೋಡಿ ಬಂದಿದ್ದರು. ಇದರಿಂದಾಗಿ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದರು ಬಿಗ್ ಬಾಸ್. ಅನಂತರ ಟಾಸ್ಕ್ ಗಳ ಮೂಲಕ ನಾಮಿನೇಷನ್ ನಿಂದ ಸೇವ್ ಆಗುವ, ಬೇರೆ ಅವರನ್ನ ನಾಮಿನೇಟ್ ಮಾಡುವ ಅವಕಾಶ ಇತ್ತು.

ಈ ವೇಳೆ ಗೌತಮಿ (Gauthami Jadav) ಅವರು ಟಾಸ್ಕ್ ವಿಚಾರವಾಗಿ ಪರದೆ ಹಿಂದೆ ಮೊದಲು ಹೋಗಿದ್ದು ಅನುಷಾ‌ (Anusha) ಎಂದು ನರಕವಾಸಿಗಳಲ್ಲಿ ಕೆಲವರು ಹೇಳಿದ್ದರು. ಆದರೆ ಅನುಷಾ ನಾನು ಮೊದಲು ಹೋಗಿದ್ದಲ್ಲ ಎಂದು ಪದೇ ಪದೇ ಹೇಳಿದ್ದರು. ಈಗ ಪ್ರೊಮೊದಲ್ಲಿ ಕಿಚ್ಚ ಪ್ರಾಮಾಣಿಕತೆ ಇಲ್ಲ ಅಂದರೆ ಪ್ರಾಯಶ್ಚಿತ ಇದ್ದೇ ಇರತ್ತೆ ಎಂದು ಹೇಳಿದ್ದಾರೆ.

ಅಂದರೆ ಕಿಚ್ಚ ಸುದೀಪ್ ಅವರು ನಾಮಿನೇಷನ್ ವಿಚಾರದಲ್ಲಿ ಆದ ಗೊಂದಲಕ್ಕೆ ಗೌತಮಿಗೆ ಕ್ಲಾರಿಟಿ ಕೊಡೊ ಜೊತೆಗೆ ತಪ್ಪು ಮಾಡಿದವರಿಗೆ ಕ್ಲಾಸ್ ಕೂಡಾ ಮಾಡ್ತಾರೆ ಅನ್ನೋದಂತೂ ನಿಜ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅನುಷಾಗೆ ನ್ಯಾಯ ಸಿಗಬೇಕೆಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಕಿಪಿ ಕೀರ್ತಿಗಾಗಿ ದನಿ ಎತ್ತಿದ Anchor Anushree, ಕೆಟ್ಟ ಕಾಮೆಂಟ್ ಮಾಡೋರಿಗೆ ಕೊಟ್ರು ವಾರ್ನಿಂಗ್

Leave a Comment