Bigg Boss Kannada ಮನೆಯಲ್ಲಿ ನರಕ ಧ್ವಂಸ ಮಾಡಿದ್ದೇಕೆ, ಹೊರ ಬಿತ್ತು ಅಸಲಿ ಕಾರಣ, 5 ದಿನಗಳ ಡೆಡ್ ಲೈನ್

Written by Soma Shekar

Published on:

---Join Our Channel---

Bigg Boss Kannada : ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್ 11 (Bigg Boss Kannada) ಎರಡನೇ ವಾರಾಂತ್ಯಕ್ಕೆ ಕಾಲಿಟ್ಟಿದೆ. ಇದೇ ವೇಳೆ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹೆ ಮಾಡಿರದ ಘಟನೆಯೊಂದು ನಡೆದಿದೆ. ಈ ಸಲ ಬಿಗ್ ಬಾಸ್ ಆರಂಭವಾದಾಗ ದೊಡ್ಮನೆಯಲ್ಲಿ ಸ್ವರ್ಗ ಮತ್ತು ನರಕ ಎನ್ನುವ ಕಾನ್ಸೆಪ್ಟ್ ಇತ್ತು. ಸ್ವರ್ಗದಲ್ಲಿ ಹತ್ತು ಜನ, ನರಕದಲ್ಲಿ ಏಳು ಜನ ಸ್ಪರ್ಧಿಗಳು ಇದ್ದರು.

ದಿನದಿಂದ ದಿನಕ್ಕೆ ಮನೆಯ ವಾರಾವರಣದಲ್ಲಿ ಏರಿಳಿತಗಳು ಕಂಡು ಬರುತ್ತಿದೆ. ಕೆಲವರು ಸ್ವರ್ಗದಿಂದ ನರಕಕ್ಕೆ ಶಿಫ್ಟ್ ಆಗಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಈಗ ಬಿಗ್ ಬಾಸ್ ತಂಡ ನರಕದ ಭಾಗವನ್ನು ಒಡೆದು ಹಾಕಿದೆ. ಇದ್ದಕ್ಕಿದ್ದ ಹಾಗೆ ನರಕವನ್ನು ಒಡೆದಿದ್ದು ಯಾಕೆ ಅನ್ನೋದಕ್ಕೆ ಇಲ್ಲಿದೆ ಕಾರಣ.

ಬಿಗ್ ಬಾಸ್ ಮನೆಗೆ ಮಹಿಳಾ‌‌ ಆಯೋಗ (Women’s Commission) ಎಂಟ್ರಿ ಬೆನ್ನಲ್ಲೇ ನರಕವನ್ನು ಡೆಮಾಲಿಷ್​ ಮಾಡಲಾಗಿದೆ ಎನ್ನುವ ಮಾತೊಂದು ಈಗ ಕೇಳಿ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎನ್ನುವುದಾಗಿ ಬಿಗ್​ಬಾಸ್​ ಕಾರ್ಯಕ್ರಮದ ವಿರುದ್ಧ ದೂರನ್ನು ನೀಡಲಾಗಿತ್ತು.

ಆದ ಕಾರಣ ಮಹಿಳಾ ಆಯೋಗವು 5 ದಿನದ ಡೆಡ್ ಲೈನ್ ಕೊಟ್ಟಿತ್ತು ಎನ್ನಲಾಗಿದೆ. ಅದೇ ಕಾರಣಕ್ಕೆ ಈಗ ಬಿಗ್​ ಬಾಸ್​ ತಂಡ ದೊಡ್ಮನೆ ಪ್ರವೇಶ ಮಾಡಿ ನರಕದ ಬೇಲಿಯನ್ನು ತೆಗೆದು ಹಾಕಿದೆ. ಇನ್ನು ಮುಂದೆ ಬಿಗ್ ಬಾಸ್ ನಲ್ಲಿ ಸ್ವರ್ಗ ನರಕ ಎನ್ನುವುದು ಇರಲ್ಲ ಅಂತ ಕೇಳಲಾಗುತ್ತಿದೆ.

Puttakkana Makkalu ಅಸಲಿ ಅತ್ತೆಯನ್ನ ಪತ್ತೆ ಹಚ್ಚಿದ ಸ್ನೇಹ, ನಾವು ಇದನ್ನ ನಂಬಲ್ಲ ಎಂದು ರೊಚ್ಚಿಗೆದ್ದ ನೆಟ್ಟಿಗರು

Leave a Comment