Bigg Boss Kannada 11 ಎರಡನೇ ವಾರಕ್ಕೆ ನರಕದ ಮನೆ ಆಯ್ತು ಧ್ವಂಸ; ನರಕದ ಕತೆ ಮುಗಿದಿದ್ದು ಯಾಕೆ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) ಆಟ ಎರಡನೇ ವಾರದ ಅಂತ್ಯದ ಕಡೆಗೆ ಅಡಿಯಿಟ್ಟಿದೆ. ನಾಳೆ ಎರಡನೇ ವೀಕೆಂಡ್ ಪಂಚಾಯ್ತಿಗಾಗಿ ಪ್ರೇಕ್ಷಕರು ಕಾಯ್ತಿದ್ದಾರೆ. ಈ ವಾರ ನಾಮಿನೇಟ್ ಆಗಿರೋರು ಟಾಸ್ಕ್ ಗಳ ಮೂಲಕ ತಮ್ಮನ್ನ ತಾವು ಸೇವ್ ಮಾಡಿಕೊಳ್ಳೋದಕ್ಕೆ ಅಂತ ಸಾಕಷ್ಟು ಪ್ರಯತ್ನ ಗಳನ್ನು ಮಾಡಿದ್ದಾರೆ. ಒಂದಷ್ಟು ಜನ ಸೇವ್ ಸಹಾ ಆಗಿದ್ದಾರೆ.

ಇವೆಲ್ಲವುಗಳ ನಡುವೆ ಈಗ ಬಿಗ್ ಬಾಸ್ ಮನೆ (Bigg Boss House) ಮಂದಿಗೆ ದೊಡ್ಡ ಶಾಕ್ ಅನ್ನು ನೀಡಿದ್ದಾರೆ. ಆಟ ಶುರುವಾದಾಗ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಮತ್ತು ನರಕ ಎನ್ನುವ ಎರಡು ಭಾಗಗಳಿದ್ದವು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ಮುಗಿಯುವ ಮೊದಲೇ ನರಕದ ಕಥೆಗೆ ಬಿಗ್ ಬಾಸ್ ಪೂರ್ಣ ವಿರಾಮ ಹಾಕ್ತಾ ಇದ್ದಾರೆ.

ಹೊಸ ಪ್ರೊಮೊದಲ್ಲಿ ನೋಡಿದಾಗ ಎಮೆರ್ಜೆನ್ಸಿ ಸೈರನ್ ಮೊಳಗಿದೆ. ನಂತರ ಮುಸುಕುಧಾರಿಗಳು ಮನೆಯೊಳಗೆ ಬಂದು ನರಕದ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾರೆ. ಸ್ವರ್ಗ ಮತ್ತು ನರಕದ ನಡುವೆ ಇದ್ದ ಅಡ್ಡ ಗೋಡೆಯಂತಹ ಮರದ ರಚನೆಯನ್ನು ಸಹಾ ಧ್ವಂಸ ಮಾಡಲಾಗಿದೆ.

ಇದ್ದಕ್ಕಿದ್ದಂತೆ ಆದ ಇಂತಹ ಬದಲಾವಣೆ ನೋಡಿ ಮನೆ ಮಂದಿ ವಿಶೇಷವಾಗಿ ನರಕವಾಸಿಗಳು ಶಾಕ್ ಆಗಿದ್ದಾರೆ. ಪ್ರೊಮೊದಲ್ಲಿ ಬಿಗ್ ಬಾಸ್ ದನಿಯು ಎರಡು ವಾರ ಇಲ್ಲಿ ಜೀವಿಸಿದ್ದೀರಿ, ಇಲ್ಲಿನ ಪ್ರತಿ ಕ್ಷಣವನ್ನು ಅನುಭವಿಸಿದ್ದೀರಿ ಎಂದು ಹೇಳಿರುವುದು ಕಂಡಿದೆ. ಅಂದ ಮೇಲೆ ನರಕದ ಕಾನ್ಸೆಪ್ಟ್ ಇಲ್ಲಿಗೆ ಮುಕ್ತಾಯ ಆದಂತೆ ಕಂಡಿದೆ.

Leave a Comment