Bigg Boss Kannada 11 ಮನೆಗೆ ಮಹಿಳಾ ಆಯೋಗ? ಶೀಘ್ರದಲ್ಲೇ ಬಿಗ್ ಬಾಸ್ ನಲ್ಲಿ ಮಹತ್ವದ ಬದಲಾವಣೆ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್​ ಬಾಸ್​ ಕನ್ನಡದ 11 ನೇ (Bigg Boss Kannada 11) ಸೀಸನ್ ನ  ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಎರಡು ಭಾಗಗಳಿದ್ದು, ಸ್ಪರ್ಧಿಗಳು ಸಹಾ ಸ್ವರ್ಗ ಮತ್ತು ನರಕ ಎಂದು ಸ್ಪರ್ಧಿಗಳನ್ನು ವಿಂಗಡಿಸಿ ಇಡಲಾಗಿದೆ. ಈ ಪರಿಕಲ್ಪನೆ ಹೊಸದಾಗಿ ಕಂಡರೂ ಸಹಾ ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ ಎನ್ನುವುದು ಸಹಾ ಸತ್ಯವಾಗಿದೆ.‌

ಅದರಲ್ಲೂ ನರಕ ನಿವಾಸಿಗಳನ್ನು ಒಂದು ಪ್ರತ್ಯೇಕ್ ಬ್ಯಾರಕ್​​​​​ ನಲ್ಲಿ ಇರಿಸಲಾಗಿದ್ದು, ಇದರಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳು ಸಿಗುತ್ತಿಲ್ಲ ಹಾಗೂ ಅವರಿಗೆ ಶೌಚಾಲಯ ವಿಚಾರದಲ್ಲೂ ಸಹಾ ತಾರತಮ್ಯ ನಡೆಯುತ್ತಿದೆ ಎನ್ನುವ ವಿಚಾರವಾಗಿ ಕೆಲವೇ ದಿನಗಳ ಹಿಂದೆ ಮಹಿಳಾ ಆಯೋಗಕ್ಕೆ ದೂರು ಬಂದಿತ್ತು.

ದೂರಿನ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು (Women’s Commission) ಬಿಗ್​ ಬಾಸ್ ಮನೆಗೆ ಹೋಗಿ, ಅಲ್ಲಿ ಪರಿಸ್ಥಿತಿಗಳ ವಾಸ್ತವತೆ ತಿಳಿಯಲು ಮುಂದಾಗಿದೆ ಎಂದು ಸುದ್ದಿಯಾಗಿದೆ. ಆದರೆ ಆಯೋಗದ ಅಧ್ಯಕ್ಷೆ ಆಗಿರುವ ನಾಗಲಕ್ಷ್ಮಿ ಚೌಧರಿ ಅವರು ಬಿಗ್​​​​​ ಬಾಸ್​​​ ಮನೆಗೆ ಭೇಟಿ ನೀಡುವುದು ಬೇಡ.

ಬದಲಾಗಿದೆ ನಾವೇ ಖುದ್ದಾಗಿ ಬಂದು ಉತ್ತರ ನೀಡುತ್ತೇವೆ ಎಂದು ಶೋನ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಮಾತ್ರವೇ ಅಲ್ಲದೇ ಶೀಘ್ರದಲ್ಲೇ ಸ್ವರ್ಗ ಹಾಗೂ ನರಕ ನಿವಾಸಿಗಳು ಎಂಬ ಕಾನ್ಸೆಪ್ಟ್​​ ಕೂಡ ಸದ್ಯದಲ್ಲೇ ಬದಲಾವಣೆ ಮಾಡುತ್ತೇವೆಂದು ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Bigg Boss 11 ಕ್ಯಾಪ್ಟನ್ ಹಂಸಗೆ ನರಕ ತೋರಿಸುತ್ತಿರುವ ನರಕ ವಾಸಿಗಳ ವರ್ತನೆ ಕಂಡು ಸಿಟ್ಟಾದ ನೆಟ್ಟಿಗರು ಹೇಳಿದ್ದೇನು

Leave a Comment