Bigg Boss Kannada 11 ರೊಚ್ಚಿಗೆದ್ದ ಚೈತ್ರ, ಕಣ್ಣೀರು ಹಾಕಿದ ಭವ್ಯ, ಎರಡನೇ ವಾರದ ಮೊದಲಲ್ಲೇ ಕದನ ರಂಗವಾದ ಬಿಗ್ ಬಾಸ್ ಮನೆ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎರಡನೇ ವಾರಕ್ಕೆ ಕಾಲಿಟ್ಟಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅವರು ಹೇಳಿದಂತಹ ಮಾತುಗಳಿಂದ ಆರಂಭದಲ್ಲಿ ಸೌಂಡ್ ಮಾಡಿ ಸೈಲೆಂಟ್ ಮೋಡ್ ಗೆ ಹೋಗಿದ್ದವರು ಈಗ ಮತ್ತೆ ಫಾರ್ಮ್ ಗೆ ಬಂದಿದ್ದಾರೆ. ಸ್ವರ್ಗ ನರಕ ಅನ್ನೋದಕ್ಕಿಂತ ಸ್ಪರ್ಧಿಗಳು ಎನ್ನುವ ಭಾವನೆ ಮನೆಯಲ್ಲಿ ಮೂಡಿದ ಹಾಗೆ ಕಾಣ್ತಿದೆ. ಈಗ ಈ ವಾರದ ಮೊದಲ ಪ್ರೊಮೊ ಎಲ್ಲರ ಗಮನ ಸೆಳೆದಿದೆ.

ದೊಡ್ಮನೆಯಲ್ಲಿ ಅನರ್ಹರ ಟಾಸ್ಕ್ ನಡೆದಿದೆ. ಈ ವೇಳೆ ಮನೆಯಲ್ಲಿರಲು ಯಾರು ಅನರ್ಹರು ಎಂದು ಮನೆ ಮಂದಿ ಹೇಳಬೇಕಾಗಿದೆ. ಈ ಟಾಸ್ಕ್ ನಲ್ಲಿ ಮಾತಿನ ಚಕಮಕಿ ನಡೆದಿದೆ. ಚೈತ್ರಾ ಕುಂದಾಪುರ (Chaithra Kundapura) ಅವರು ಸಿಟ್ಟಾಗಿದ್ದಾರೆ ಹಾಗೂ ಅನ್ಯ ಸದಸ್ಯರ ಮೇಲೆ ಫುಲ್ ಸೌಂಡ್ ನಲ್ಲಿ ಕೂಗಾಡಿದ್ದಾರೆ.

ಐಶ್ವರ್ಯ ಮತ್ತು ಉಗ್ರಂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯ ಗೌಡ ಕಣ್ಣೀರು ಹಾಕಿದ್ದಾರೆ. ಭವ್ಯ ಗೌಡ (Bhavya Gowda) ಕಣ್ಣೀರು ಹಾಕಿದ್ದಾರೆ. ಉಗ್ರಂ ಮಂಜು ಭವ್ಯ ಗೌಡ ಅವರಿಗೆ “ನೀವು ಎಮೋಷನ್ಸ್ ತೋರ್ತಿರೋದು ಆಟಕೋಸ್ಕರವೇ? ಇಲ್ಲಿ ನಿಜವಾಗಲೂ ನೀವು ಎಮೋಷನಲ್ ಆಗಿದ್ದೀರಾ” ಅಂತಾ ಪ್ರಶ್ನೆಯನ್ನು ಕೇಳಿದ್ದಾರೆ.

ಚೈತ್ರ ಕುಂದಾಪುರ ಆರಂಭದಲ್ಲಿ ಸದ್ದು ಮಾಡಿ ಅನಂತರ ಮೌನವಾಗಿ ಇದ್ದರು. ಆದರೆ ಈಗ ವೀಕೆಂಡ್ ನಲ್ಲಿ ಕಿಚ್ಚನ ಮಾತುಗಳನ್ನ ಕೇಳಿದ ನಂತರ ಅವರಲ್ಲಿ ಹೊಸ ಜೋಶ್ ಬಂದ ಹಾಗೆ ಕಾಣ್ತಿದೆ. ಈ ವಾರ ಚೈತ್ರ ಕುಂದಾಪುರ ಆಟ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Comment