Amruthadhaare ಜೈದೇವ್ ಪಾಪದ ಕೊಡ ತುಂಬಾಯ್ತು, ಸಾಕ್ಷಿ ಸಮೇತ ಮುಖವಾಡ ತೆಗೆಯಲು ಸಜ್ಜಾದ ಭೂಮಿಕಾ

Written by Soma Shekar

Published on:

---Join Our Channel---

Amruthdhaare : ಅಮೃತಧಾರೆ (Amruthadhaare) ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಸದ್ಯಕ್ಕಂತೂ ಸೀರಿಯಲ್ ನ ಕಥೆಯಲ್ಲಿನ ರೋಚಕ ತಿರುವು ಪ್ರೇಕ್ಷಕರಲ್ಲಿ ಭರ್ಜರಿ ಕುತೂಹಲವನ್ನು ಮೂಡಿಸಿದೆ. ಕಥೆಯಲ್ಲಿ ಜೈದೇವ್ ನ (Jaidev) ಅಮಾಯಕತನದ ಮುಖವಾಡವನ್ನ ಕಳಚುವ ಸಮಯ ಹತ್ತಿರವಾಗಿದೆ.

ಮಲ್ಲಿ ಗಂಡನ ಬಗ್ಗೆ ಸತ್ಯ ತಿಳಿದು, ಮಗುವನ್ನು ಕಳ್ಕೊಂಡ ಮೇಲೆ ಗಂಡನ ಮೇಲೆ ಆಕ್ರೋಶ ಹೊರ ಹಾಕಿದ್ದಾಳೆ. ಅಲ್ಲದೇ ಗೌತಮ್ ಹತ್ರ ಸತ್ಯವನ್ನ ಹೇಳೋ ಪ್ರಯತ್ನ ಮಾಡಿದ್ದಾಳೆ. ಆ ವೇಳೆಗೆ ಜೈದೇವ್ ಮಲ್ಲಿ ಅವರ ತಾತನ ಪ್ರಾಣದ ಭಯ ಹುಟ್ಟಿಸಿ ಮಲ್ಲಿಯನ್ನ ಸೈಲೆಂಟ್ ಮಾಡಿದ್ದಾನೆ.

ಆದರೆ ಮತ್ತೊಂದು ಕಡೆ ಭೂಮಿಕಾ (Bhumika) ಮತ್ತು ಆನಂದ್ ಇಬ್ಬರೂ ಸಹಾ ಜೈದೇವ್ ಮಾಡಿರೋ ಕೆಲಸಗಳ ಬಗ್ಗೆ ಅಗತ್ಯ ಇರೋ ಸಾಕ್ಷಿಗಳನ್ನು ಕಲೆಕ್ಟ್ ಮಾಡಿದ್ದಾರೆ.‌ ಆ ಸಾಕ್ಷಿಗಳನ್ನು ಗೌತಮ್ ಮುಂದೆ ಇಟ್ಟು ಜೈದೇವ್ ನಾಟಕವನ್ನು ಬಯಲು ಮಾಡೋಕೆ ಮುಂದಾಗಿದ್ದಾರೆ.‌

ಆನಂದ್, ಆತನ ಪತ್ನಿ ಮತ್ತು ಭೂಮಿಕಾ ಮೂವರು ಬಂದು ಗೌತಮ್ ಗೆ ಸತ್ಯ ಹೇಳಿದ್ದಾರೆ. ಮಲ್ಲಿಯನ್ನು ಆಸ್ಪತ್ರೆಯಲ್ಲಿ ಕೊಲ್ಲೋದಕ್ಕೆ, ಭೂಮಿಕಾನ ಕಿಡ್ನಾಪ್ ಮಾಡಿಸೋದಕ್ಕೆ, ಆಫೀಸಿನಲ್ಲಿ ನಡೆದಿರೋ ಗೋಲ್ ಮಾಲ್ ಹಾಗೂ ಟೆಂಡರ್ ಸಿಗದೇ ಇರೋಕ್ಕೆ ಅವನು ಪ್ರಯತ್ನ ಮಾಡಿರೋ ಎಲ್ಲಾ ವಿಚಾರ ತಿಳಿಸಿದ್ದಾರೆ.

ಸಾಕ್ಷಿ ಸಮೇತ ಭೂಮಿಕಾ ಮತ್ತು ಆನಂದ್ ಗೌತಮ್ (Gowtham) ಮುಂದೆ ಜೈದೇವ್ ನ ಮುಖವಾಡ ಕಳಚಿದ ಮೇಲೆ ಗೌತಮ್ ಮುಂದೆ ಏನು ಮಾಡಲಿದ್ದಾನೆ ಅನ್ನೋದು ಈಗ ನಿರೀಕ್ಷೆ ಆದ್ರೆ ಮತ್ತೊಂದು ಕಡೆ ಪ್ರೇಕ್ಷಕರು ಇದು ಕನಸಾಗದೇ ಇದ್ರೆ ಸಾಕು ಅಂತ ಕಾಮೆಂಟ್ ಮಾಡ್ತಿದ್ದಾರೆ.

Bigg Boss Kannada 11 ಶಾಕಿಂಗ್ ಎಲಿಮಿನೇಷನ್, ಮೊದಲ ವಾರವೇ ಪ್ರಬಲ ಸ್ಪರ್ಧಿ ಮನೆಯಿಂದ ಹೊರಕ್ಕೆ

Leave a Comment