BBK 11 ಇವ್ರನ್ನ ಸುದೀಪ್ ಸರ್ ಒದ್ದು ಹೊರಗೆ ಹಾಕ್ತಾರೆ, ಒಂದೇ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಆಗೋಯ್ತು

Written by Soma Shekar

Published on:

---Join Our Channel---

BBK 11: ಬಿಗ್​ ಬಾಸ್ ಕನ್ನಡ ಸೀಸನ್ 11 ರಲ್ಲಿ (BBK11) ಇಂದು ಮೊದಲ ವೀಕೆಂಡ್ ಗಾಗಿ ಕಾಯುತ್ತಿದ್ದಾರೆ ಪ್ರೇಕ್ಷಕರು. ಸೀಸನ್ ಆರಂಭವಾದ ಮೊದಲ ದಿನದಿಂದಲೇ ಸ್ವರ್ಗ ಮತ್ತು ನರಕದಲ್ಲಿರುವ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್​ ನಿಂದಾಗಿ ಮನೆ ಎರಡು ಭಾಗಗಳಾಗಿ ಒಡೆದಿದ್ದು, ಮನೆ ಮಂದಿಯ ನಡುವೆ ಸಾಕಷ್ಟು ಮೈಮನಸ್ಸು ಮೂಡಿದೆ.‌

ನಿನ್ನೆಯ ಎಪಿಸೋಡ್​ ನಲ್ಲಿ ಜಗದೀಶ್​ (Jagadish) ಅವರು ಉಗ್ರಂ ಮಂಜು ಮೇಲೆ ಸಿಟ್ಟಾಗಿ ಅರಚಾಡಿದ್ದರು. ಅನಂತರ ಅವರು ಕನ್ಫೆಷನ್ ರೂಂ ಬಾಗಿಲನ್ನು ಬಡಿದು, ಅದನ್ನು ಮುರಿದು ಹಾಕಿದ್ದು ಮಾತ್ರವೇ ಅಲ್ಲದೇ ಮನೆಯಲ್ಲಿರೋ ಸ್ಪರ್ಧಿಗಳ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಅನಂತರ ಅವರು ಸಮಾಧಾನಗೊಂಡು ಕ್ಷಮೆ ಕೇಳಿದ್ದಾರೆ.

ಜಗದೀಶ್​ ಅವರು ಹೀಗೆ ಮಾತಾಡೋದು ಅನಂತರ ಬಂದು ಕ್ಷಮೆ ಕೇಳೋದು ಸಾಮಾನ್ಯ ಆಗೋಗಿದೆ. ಈ ಬಾರಿ ಸಹಾ ಅವರು ಕ್ಷಮೆ ಕೇಳುವ ಸಂದರ್ಭದಲ್ಲಿ ಭವ್ಯಾ ಗೌಡ (Bhavya Gowda) ಅವರು ಇವರು ಹೀಗೆಲ್ಲಾ ಮಾಡ್ತಿರೋದನ್ನ ಸುದೀಪ್ ಅವರು ನೋಸಿ, ಇವರನ್ನ ಒದ್ದು ಹೊರಗಡೆ ಹಾಕ್ತಾರೆ ಅನ್ನೋ ಮಾತನ್ನ ಹೇಳಿದ್ದಾರೆ.

ಜಗದೀಶ್ ಅವರು ಪ್ರತಿದಿನ ಒಂದಲ್ಲಾ ಒಂದು ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಮಾಡ್ತಿದ್ದಾರೆ. ಬಿಗ್ ಬಾಸ್ ಶೊ ಗೆ ಅವರು ಚಾಲೆಂಜ್ ಮಾಡಿ ಅನಂತರ ಕ್ಷಮೆ ಕೇಳಿದ್ರು. ಈಗಂತೂ ಕೋಪದ ಭರದಲ್ಲಿ ಮಹಿಳೆಯರ ಒಳ ಉಡುಪಿನ ಬಗ್ಗೆ ಸಹಾ ಮಾತನಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

Leave a Comment