Bigg Boss ಚೈತ್ರ ಕುಂದಾಪುರ ಅವರ ಆ ವಿಷಯದ ಬಗ್ಗೆ ಮಾನಸ ಮಾತು; ಇಬ್ಬರ ನಡುವೆ ಹೊತ್ತಿಕೊಂಡ ಕಿಚ್ಚು

Written by Soma Shekar

Published on:

---Join Our Channel---

Bigg Boss Kannada 11 : ಈ ಬಾರಿ ಬಿಗ್ ಬಾಸ್ ಕನ್ನಡ 11 (Bigg Boss Kannada 11) ಮನೆಯ ವಾತಾವರಣ ಮೊದಲ ದಿನದಿಂದಲೇ ರಣರಂಗ ಆಗಿ ಬದಲಾಗಿದೆ. ನಿನ್ನೆ ಎಲ್ಲಾ ಸ್ವರ್ಗದಲ್ಲಿ ಮಾತಿನ ಚಕಮಕಿ ನಡೆದಿತ್ತು. ನರಕ ವಾಸಿಗಳು ಆರಾಮಾಗಿ ಇದ್ದರು. ಆದರೆ ಇಂದು ನರಕದಲ್ಲಿ ಪರಿಸ್ಥಿತಿ ಬದಲಾಗಿದೆ. ತುಕಾಲಿ ಸಂತೋಷ್ ಪತ್ನಿ ಮಾನಸ (Manasa) ಮತ್ತು ಚೈತ್ರ ಕುಂದಾಪುರ ನಡುವೆ ಜೋರು ದನಿಯಲ್ಲಿ ಮಾತಿನ ಚಕಮಕಿ ನಡೆದಿದೆ.

ಮಾನಸ ತಮ್ಮ ಜೊತೆಯಲ್ಲಿ ಇರುವವರೊಡನೆ ಮಾತನಾಡ್ತಾ ನನಗೆ ಧ್ಯಾನ ಮಾಡೋರ ಮೇಲೆ ಸ್ವಲ್ಪ ಅನುಮಾನ, ಅವರು ನಿದ್ದೆ ಮಾಡ್ತಾ ಇರ್ತಾರಾ ಅನ್ನೋ ಮಾತನ್ನು ಹೇಳೋ ಮೂಲಕ ಪರೋಕ್ಷವಾಗಿ ಚೈತ್ರ ಕುಂದಾಪುರ ಅವರ ಬಗ್ಗೆ ಕಾಮೆಂಟ್ ಪಾಸ್ ಮಾಡಿದ್ದು, ಇದು ಇಬ್ಬರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಚೈತ್ರ (chaithra Kundapura) ಅವರು ಮಾನಸಾಗೆ ಗೊತ್ತಿಲ್ಲದೇ ಇರೋ ವಿಷಯ ಮಾತನಾಡಬಾರದು, ನನ್ನ ಬಗ್ಗೆ ಮಾತಾಡೋಕೆ ಇವರಾರು ಎಂದೆಲ್ಲಾ ಹೇಳಿದ್ದಾರೆ‌. ಮಾನಸ ಅದಕ್ಕೆ ಎಲ್ರೂ ಒಂದೇ ತರ ಯೋಚನೆ ಮಾಡಲ್ಲ ನಾನು ಅಲ್ಪ ಜ್ಞಾನಿ ಎಂದು ಉತ್ತರವನ್ನು ಕೊಟ್ಟಿದ್ದಾರೆ.

ಜ್ಞಾನ ಇಲ್ಲ ಅಂದ್ಮೇಲೆ ಮಾತನಾಡಬಾರದು ಅಂತ ಚೈತ್ರ ಮಾನಸಾಗೆ ಜೋರಾಗಿಯೇ ಹೇಳಿದ್ದಾರೆ. ಮಾನಸ ಮತ್ತು ಚೈತ್ರ ಅವರನ್ನು ಸಮಾಧಾನ ಮಾಡಲು ನರಕ ವಾಸಿಗಳು ಪ್ರಯತ್ನ ಪಟ್ಟರೂ ಕೂಡಾ ಅದು ಸಾಧ್ಯವಾಗಿಲ್ಲ. ಇವರ ಜಗಳ ಎಲ್ಲಿವರೆಗೆ ಹೋಯ್ತು ಅನ್ನೋದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

ತಮ್ಮ ಮಗಳಿಗೆ ಮದುವೆ, ಬೇರೆ ಅವ್ರ ಮಕ್ಕಳಿಗೆ ಸನ್ಯಾಸ್ಯತ್ವಕ್ಕೆ ಪ್ರೋತ್ಸಾಹ ಯಾಕೆ? ಸದ್ಗುರುಗಳನ್ನ ಪ್ರಶ್ನಿಸಿದ Madras High Court

Leave a Comment