Venu Swamy: ವೇಣು ಸ್ವಾಮಿಗೆ ಶುರುವಾಯ್ತು ಸಂಕಷ್ಟ, ಸಮನ್ಸ್ ಜಾರಿ ಮಾಡಿದ ಮಹಿಳಾ ಕಮೀಷನ್

Written by Soma Shekar

Published on:

---Join Our Channel---

Venu Swamy: ವೇಣು ಸ್ವಾಮಿ (Venu Swamy) ಈ ಹೆಸರಿಗೆ ತೆಲುಗು ರಾಜ್ಯಗಳಲ್ಲಿ ಖಂಡಿತ ಪರಿಚಯದ ಅಗತ್ಯವಿಲ್ಲ. ಸೆಲೆಬ್ರಿಟಿಗಳ ಭವಿಷ್ಯ ನುಡಿಯುವ ಮೂಲಕವೇ ಸದ್ದು, ಸುದ್ದಿಯಾಗಿರುವ ಈ ಜ್ಯೋತಿಷಿ ಟ್ರೋಲ್ ಗೆ ಗುರಿಯಾಗುವುದು ಸಹಾ ಸತ್ಯ. ಆಗಾಗ ವಿವಾದಾತ್ಮಕ ಜ್ಯೋತಿಷ್ಯ ನುಡಿದು ಚರ್ಚೆಗಳಿಗೆ ಕಾರಣವಾಗುವುದು ಉಂಟು. ನಾಗಚೈತನ್ಯ ಮತ್ತು ಸಮಂತಾ ವಿಚ್ಚೇದನದ (Nagachaitanya Samantha Divorce) ಭವಿಷ್ಯ ಹೇಳಿ ಇದ್ದಕ್ಕಿದ್ದ ಹಾಗೆ ವೇಣು ಸ್ವಾಮಿ ಜನಪ್ರಿಯತೆ ಪಡೆದಿದ್ದರು.

ಇದಾದ ನಂತರ ರಶ್ಮಿಕಾ ಮಂದಣ್ಣ, ರಾಮ್ ಚರಣ್ ಅವರ ಮಗುವಿನ ಭವಿಷ್ಯ ಹೇಳಿದ್ದರು. ಅಲ್ಲದೇ ಆಂಧ್ರಪ್ರದೇಶದ ಚುನಾವಣಾ ಫಲಿತಾಂಶ ಮತ್ತು ಪ್ರಭಾಸ್ ಬಗ್ಗೆ ನುಡಿದ ಭವಿಷ್ಯ ವಾಣಿಗಳು ಸುಳ್ಳಾದ ಬೆನ್ನಲ್ಲೆ ತೀವ್ರ ಟೀಕೆಗಳು ಕೇಳಿ ಬಂದಾಗ ಇನ್ಮುಂದೆ ನಾನು ಸೆಲೆಬ್ರಿಟಿಗಳ ಭವಿಷ್ಯ ಹೇಳುವುದಿಲ್ಲ ಎನ್ನುವುದಾಗಿ ಹೇಳಿದ್ದರು.

ಆದರೆ ಇತ್ತೀಚಿಗೆ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಳ ಅವರ ನಿಶ್ಚಿತಾರ್ಥದ (Nagachaitanya Shobhita Dhulipala Engagement) ಬೆನ್ನಲ್ಲೇ ವೇಣುಸ್ವಾಮಿ ಅವರ ನಿಶ್ಚಿತಾರ್ಥ ಆದ ಸಮಯ ಸರಿಯಿಲ್ಲ, 2027 ರಲ್ಲಿ ಅವರು ಬೇರೆ ಆಗ್ತಾರೆ, ನಾಗಚೈತನ್ಯ ಜೀವನದಲ್ಲಿ ಮತ್ತೊಬ್ಬ ಹೆಣ್ಣು ಬರುವ ಸಾಧ್ಯತೆ ಇದೆ ಎಂದೆಲ್ಲಾ ಹೇಳಿ ಅನೇಕರ ಕೆಂಗಣ್ಣಿಗೆ ವೇಣುಸ್ವಾಮಿ ಗುರಿಯಾಗಿದ್ದರು.

ಸೋಶಿಯಲ್ ಮೀಡಿಯಾಗಳಲ್ಲಿ ವೇಣುಸ್ವಾಮಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈಗ ಅದರ ಬೆನ್ನಲ್ಲೇ ತೆಲುಗು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಮತ್ತ ಮಹಿಳಾ ಕಮೀಷನ್ ಚೇರ್ ಪರ್ಸನ್ ನೇರಳ್ಳ ಶಾರದಾ ಅವರ ಕಡೆಯಿಂದ ವೇಣುಸ್ವಾಮಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದ್ದು ವಿಚಾರಣೆಗೆ ಸ್ವಯಂ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಈ ವಿಷಯ ಹೊರ ಬರುತ್ತಿದ್ದ ಹಾಗೆ ಅನೇಕರು ಕಡೆಗೂ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲು ಅಂತಹವರಿಗೆ ಕಾನೂನಿನ ಮೂಲಕ ಸರಿಯಾದ ಶಿಕ್ಷೆಯಾಗಬೇಕು ಎಂಬುದಾಗಿ ಕಾಮೆಂಟ್ ಗಳನ್ನು ಮಾಡಿ ವೇಣು ಸ್ವಾಮಿಗೆ ಈಗಲಾದರೂ ಬುದ್ಧಿ ಬರಲಿ ಎಂದು ಹೇಳುತ್ತಿದ್ದಾರೆ.

Vicky Kaushal : ರಶ್ಮಿಕಾ ಅದ್ಭುತ ವ್ಯಕ್ತಿ ಎಂದು ಹಾಡಿ ಹೊಗಳಿ ಒಂದಷ್ಟು ಆಸಕ್ತಿಕರ ವಿಚಾರ ತಿಳಿಸಿದ ವಿಕ್ಕಿ ಕೌಶಲ್

Leave a Comment