Sathya Serial : ಮುಖ್ಯವಾದ ಪ್ರಶ್ನೆಗಳಿಗೆ ಉತ್ತರ ಕೊಡದೇ ಕಿರುತೆರೆಗೆ ಟಾ ಟಾ ಹೇಳಿದ ಸತ್ಯ, ಪ್ರೇಕ್ಷಕರ ಅಸಮಾಧಾನ

Written by Soma Shekar

Published on:

---Join Our Channel---

Sathya Serial: ಜೀ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಯಶಸ್ವಿ ಧಾರಾವಾಹಿಗಳಲ್ಲಿ ‘ಸತ್ಯ’ (Sathya Serial) ಕೂಡ ಒಂದು. ಗೌತಮಿ ಜಾಧವ್ (Gowthami Jadhav) ಪ್ರಮುಖ ಪಾತ್ರದಲ್ಲಿದ್ದ ಸತ್ಯ ಸೀರಿಯಲ್ ಅನ್ನು ಸಪ್ನಾ ಕೃಷ್ಣ ನಿರ್ದೇಶನ ಮಾಡುತ್ತಿದ್ದರು. ಸತ್ಯ ಪ್ರಸಾರ ಆರಂಭಿಸಿ ನಾಲ್ಕು ವರ್ಷಗಳಾಗಿತ್ತು, ಈಗ ತನ್ನ ಸುದೀರ್ಘ ಪಯಣದ ನಂತರ ಸತ್ಯ ತನ್ನ ಪ್ರಸಾರ ನಿಲ್ಲಿಸಿದೆ.

ಸತ್ಯ ಸೀರಿಯಲ್ ನ ಇಷ್ಟ ಪಟ್ಟು ನೋಡ್ತಿದ್ದ ಪ್ರೇಕ್ಷಕರಿಗೆ ಇದು ಬೇಸರವನ್ನು ತಂದಿದೆ. ಇದೇ ವೇಳೆ ಸತ್ಯ ಸೀರಿಯಲ್ ಬಗ್ಗೆ ಅನೇಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೀಗೆ ಅರ್ಥ ಇಲ್ಲದ ಹಾಗೆ ಮುಗಿಸೋ ಹಾಗಿದ್ರೆ ಇಂತಹ ಕಥೆಗಳನ್ನ ಸೀರಿಯಲ್ ಮಾಡಬೇಡಿ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ‌ಹಾಗಾದ್ರೆ ಇಷ್ಟಕ್ಕೂ ಈ ಅಸಮಾಧಾನ ಯಾಕೆ ? ಇಲ್ಲಿದೆ ಉತ್ತರ.

ಸತ್ಯ ಜೀವನದಲ್ಲಿ ಅವರಪ್ಪನ ಪಾತ್ರ ಬಹಳ ಮುಖ್ಯ. ಅವರಪ್ಪನೇ ಸತ್ಯಳಿಗೆ ಸ್ಪೂರ್ತಿ. ಆದರೆ ಸತ್ಯಳ ಅಪ್ಪ ಕೊಲೆಯಾಗಿರ್ತಾನೆ, ಆ ಕೊಲೆಯ ಹಿಂದೆ ಚಿದಗ್ನಿ ಬಾಯಿ, ದೊಡ್ಡೋರು ಅನ್ನೋ ಒಬ್ಬ ರಹಸ್ಯ ಡಾನ್ ಇರ್ತಾನೆ ಅನ್ನೋದು ಕಥೆಯ ಒಂದು ಭಾಗವಾಗಿತ್ತು. ಆದರೆ ಚಿದಗ್ನಿ ಬಾಯಿ ಸತ್ತ ನಂತರ ಆ ರಹಸ್ಯವನ್ನು ನಿರ್ದೇಶಕರು ಮರೆತು ಹಾಗೆ ಇದೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇದನ್ನೇ ಪ್ರಶ್ನೆ ಮಾಡಿದ್ದಾರೆ. ಆ ದೊಡ್ಡವರು ಅಂದ್ರೆ ಯಾರು? ಇಷ್ಟಕ್ಕೂ ಸತ್ಯ ಅವರ ಅಪ್ಪನ ಕೊಲೆ ಆಗಿದ್ದಾದ್ರು ಯಾಕೆ? ಇದೆಲ್ಲದಕ್ಕೂ ಉತ್ತರವನ್ನೇ ಕೊಡದೇ ಸೀರಿಯಲ್ ನ ಹೀಗೆ ಮುಗಿಸಿದ್ದು ಯಾಕೆ? ಅಥವಾ ಇದಕ್ಕೆ ಉತ್ತರಾನೇ ಇಲ್ವಾ ಎಂದು ಸಹಾ ಕೇಳಿದ್ದಾರೆ. ಒಟ್ನಲ್ಲಿ ಸತ್ಯ ಸೀರಿಯಲ್ ನ ಆತುರವಾಗಿ ಮುಗಿಸಿದ ಹಾಗೆ ಕಂಡಿದೆ.

Viral News: ಭಾರತದ ಈ ಪ್ರದೇಶದ ರಸ್ತೆಯಲ್ಲಿ ಬೆಳ್ಳಿ ಹರಳುಗಳ ಸುರಿಮಳೆ; ಆರಿಸಿಕೊಳ್ಳಲು ಮುಗಿ ಬಿದ್ದ ಜನ

Leave a Comment