Samantha : ಸಮಂತಾ ರುತ್ ಪ್ರಭು (Samantha) ಸದ್ಯಕ್ಕೆ ದಕ್ಷಿಣ ಸಿನಿಮಾ ರಂಗದಲ್ಲಿ ಸಖತ್ ಸುದ್ದಿಯಾಗುವ ನಟಿ ಎಂದರೆ ಸುಳ್ಳಲ್ಲ. ನಟಿ ತಮ್ಮ ಸಿನಿಮಾಗಳು, ಸಿನಿಮಾಗಳಿಂದ ಬ್ರೇಕ್ ಪಡೆದಾಗ ತಮ್ಮ ಖಾಸಗಿ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ.. ನಟಿ ಪುಷ್ಪ (Pushpa The Rise) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದೇ ತಡ ನ್ಯಾಷನಲ್ ಲೆವೆಲ್ ನಲ್ಲಿ ಸುದ್ದಿಯಾದವರು. ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆಗೆ ನಟಿ ಹಾಕಿದ್ದ ಹೆಜ್ಜೆಗಳು ಸಿನಿಮಾದ ಹೈಲೈಟ್ ಆಗಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಪುಷ್ಪ ಸಿನಿಮಾವನ್ನು ಊ ಅಂಟಾವಾ ಮಾವ ಹಾಡಿಲ್ಲದೇ ಊಹೆ ಮಾಡಿಕೊಳ್ಳುವುದು ಸಹಾ ಸಾಧ್ಯವಿಲ್ಲ. ಆದರೆ ಈಗ ಈ ಹಾಡನ್ನು ಮಾಡುವುದಕ್ಕಾಗಿ ಸಮಂತಾಗೆ ಎದುರಾದ ಸಮಸ್ಯೆ ಕುರಿತಾದ ವಿಷಯವೊಂದು ವೈರಲ್ ಆಗಿದೆ. ಹೌದು, ಸಮಂತಾ ಈ ಹಾಡಿಗೆ ಒಪ್ಪಿಗೆ ನೀಡುವುದಕ್ಕೆ ಸಂಪೂರ್ಣವಾದ ಒಪ್ಪಿಗೆ ಇರಲಿಲ್ಲವಂತೆ. ಏಕೆಂದರೆ ನಟಿ ಆಗ ತಾನೇ ನಾಗಚೈತನ್ಯರಿಂದ ವಿಚ್ಚೇದನ ಪಡೆದಿದ್ದರು.
![](https://news9kannada.com/wp-content/uploads/2024/06/images-2024-06-07T103303.489-jpeg.webp)
ವಿಚ್ಚೇದನದ ನೋವಿನಲ್ಲಿದ್ದ ನಟಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಆಫರ್ ಬಂದಿದ್ದು ಊಹೆಗೆ ಮೀರಿದ ವಿಷಯವಾಗಿತ್ತು. ಸಮಂತಾ ಅವರ ಮನೆಯಲ್ಲಿ ಮತ್ತು ಅವರ ಆಪ್ತರು ಆ ಹಾಡನ್ನು ಮಾಡುವುದು ಬೇಡವೇ ಬೇಡ ಎನ್ನುವ ಸಲಹೆಯನ್ನು ನೀಡಿದ್ದರಂತೆ. ಆದರೆ ಸಮಂತಾ ಎಲ್ಲರನ್ನೂ ಎದುರಿಸಿ ಅದೇ ಸರಿಯಾದ ಸಮಯ ಎಂದು ತನ್ನನ್ನ ತಾನು ಹೊಸ ಅವತಾರದಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದರು.
ಪುಷ್ಪ ಸಿನಿಮಾದಲ್ಲಿ ನಾಯಕಿಗಿಂತ ಹೆಚ್ಚು ಕ್ರೇಜ್ ಸಮಂತಾ ಒಂದು ಹಾಡಿನಿಂದ ಬಾಚಿಕೊಂಡಿದ್ದರು. ಬಹಳಷ್ಟು ದಿನಗಳ ಕಾಲ ಊ ಅಂಟಾವಾ ಸಾಂಗ್ ಟ್ರೆಂಡಿಂಗ್ ನಲ್ಲಿ ಇತ್ತು. ಸಮಂತಾ ಅವರ ವೃತ್ತಿ ಜೀವನದಲ್ಲಿ ಪುಷ್ಪ ಸಿನಿಮಾ ಹಾಡು ನಟಿಯ ಜನಪ್ರಿಯತೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡಿತ್ತು. ಈ ಹಾಡು ಮಾಡಲು ನಿರ್ದೇಶಕ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಸಮಂತಾರನ್ನು ಒಪ್ಪಿಸಿದ್ದರು ಎನ್ನಲಾಗಿದೆ.