OTT ವಿನ್ನರ್ಸ್ ಮಾಡಿಕೊಂಡಿದ್ದ ಡೀಲ್: ಸತ್ಯ ಬಾಯ್ಬಿಟ್ಟ ಗುರೂಜಿ, ಬಿಗ್ ಬಾಸ್ ಮನೆಯಲ್ಲಿ ಸಂಚಲನ

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯ ವಾತಾವರಣ ಖಂಡಿತ ಈಗ ಮೊದಲಿನ ಹಾಗಿಲ್ಲ. ಐದನೇ ವಾರದ ಅಂತ್ಯದ ವೇಳೆಗೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ರೋಚಕ ತಿರುವುಗಳು, ಕುತೂಹಲಕಾರಿ ಸಂಗತಿಗಳು ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಈಗ ಇವೆಲ್ಲವುಗಳ ನಡುವೆ ಓಟಿಟಿ ಬಿಗ್ ಬಾಸ್ ನಿಂದ ಟಿವಿ ಬಿಗ್ ಬಾಸ್ ಗೆ ಬಂದ ನಾಲ್ಕು ಜನ ಸ್ಪರ್ಧಿಗಳ ನಡುವೆ ನಡೆದಿತ್ತು ಎನ್ನಲಾದ ಒಂದು ಡೀಲ್ ನ ವಿಚಾರ ಹೊರ ಬಂದಿದ್ದು, ಇದನ್ನು ಕೇಳಿ ಬಿಗ್ ಬಾಸ್ ಮನೆಯಲ್ಲಿ ಇರುವ ಅನ್ಯ ಸದಸ್ಯರು ಮಾತ್ರವೇ ಅಲ್ಲದೇ ಕಾರ್ಯಕ್ರಮ ವೀಕ್ಷಿಸುತ್ತಿರುವ ಪ್ರೇಕ್ಷಕರು ಸಹಾ ಶಾ ಕ್ ಆಗಿದ್ದಾರೆ. ಇಂತಹುದೊಂದು ವಿಷಯ ಅಥವಾ ಡೀಲ್ ಒಂದಾಗಿದೆ ಎನ್ನುವುದನ್ನು ಯಾರೂ ಸಹಾ ಊಹೆ ಕೂಡಾ ಮಾಡಿರಲಿಲ್ಲ.

ಟಿವಿ ಬಿಗ್ ಬಾಸ್ ಗೆ ಓಟಿಟಿಯಿಂದ ಎಂಟ್ರಿ ನೀಡಿದವರು ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಅವರು. ಓಟಿಟಿಯಿಂದ ಬಂದ ಈ ನಾಲ್ವರೂ ಟಿವಿ ಬಿಗ್ ಬಾಸ್ ನ ಸ್ಟರ್ಧಿಗಳಿಗೆ ಖಡಕ್ ಸ್ಪರ್ಧೆಯನ್ನು ಸಹಾ ನೀಡುತ್ತಿದ್ದಾರೆ.‌ ಆದರೆ ಈಗ ಇವೆಲ್ಲವುಗಳ ನಡುವೆಯೇ ಈ ನಾಲ್ವರ ನಡುವೆ ಆಗಿದ್ದ ಡೀಲ್ ಬಗ್ಗೆ ಗುರೂಜಿ ಬಾಯಿ ಬಿಟ್ಟಿದ್ದು, ಇದನ್ನು ಕೇಳಿದ ಮನೆ ಮಂದಿ ಶಾ ಕ್ ಆಗಿದ್ದಾರೆ.‌ ಹಾಗಾದ್ರೆ ಇಷ್ಟಕ್ಕೂ ಆ ಡೀಲ್ ಏನು? ಗುರೂಜಿ ಅದನ್ನು ಇದ್ದಕ್ಕಿದ್ದ ಹಾಗೆ ರಿವೀಲ್ ಮಾಡಿದ್ದಾದ್ರು ಏಕೆ ? ಎನ್ನುವುದನ್ನು ತಿಳಿಯೋಣ ಬನ್ನಿ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಎಲ್ಲರ ಎದುರಲ್ಲೇ ಗುರೂಜಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದು ಗುರೂಜಿ ಅವರ ಬೇಸರ ಮತ್ತು ಕೋಪಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳುವ ಮೂಲಕ ಆರ್ಯವರ್ಧನ್ ಗುರೂಜಿ ಅವರು ಅನೇಕರ ಕೋಪಕ್ಕೆ ಗುರಿಯಾಗಿದ್ದರು. ಅಲ್ಲದೇ ಕಿಚ್ಚ ಸುದೀಪ್ ಅವರು ಸಹಾ ಗುರೂಜಿಗೆ ಕ್ಲಾಸ್ ತೆಗೆದುಕೊಂಡು, ಸ್ವಲ್ಪ ಖಾರವಾಗಿಯೇ ಅವರಿಗೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈಗ ಖುದ್ದು ಗುರೂಜಿ ಅವರೇ ಡೀಲ್ ಒಂದರ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಓಟಿಟಿ ಬಿಗ್ ಬಾಸ್ ಮುಗಿದ ಮೇಲೆ, ಅದರಿಂದ ಟಿವಿ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದ ನಾಲ್ಕು ಜನರನ್ನು ಸಹಾ ಒಂದು ರೆಸಾರ್ಟ್ ನಲ್ಲಿ ಇರಿಸಲಾಗಿತ್ತು. ರೆಸಾರ್ಟ್ ನಲ್ಲಿ ಇದ್ದ ರಾಕೇಶ್, ಸಾನ್ಯಾ, ಆರ್ಯವರ್ಧನ್ ಮತ್ತು ರೂಪೇಶ್ ಶೆಟ್ಟಿ ನಡುವೆ ಒಂದು ಡೀಲ್ ಆಗಿತ್ತು. ಡೀಲ್ ಏನೆಂದರೆ ಟಿವಿ ಬಿಗ್ ಬಾಸ್ ನಲ್ಲಿ ಯಾರು, ಯಾರನ್ನೂ ನಾಮಿನೇಟ್ ಮಾಡಬಾರದು ಮತ್ತು ಕಳಪೆ ನೀಡಬಾರದು ಎನ್ನುವುದು, ಆದರೆ ಸಾನ್ಯಾ ಈ ಮಾತಿಗೆ ತಪ್ಪಿದ್ದಾರೆ ಎಂದು ಗುರೂಜಿ ಬೇಸರ ವ್ಯಕ್ತಪಡಿಸುತ್ತಾ, ತಾವು ಮಾಡಿಕೊಂಡಿದ್ದ ಡೀಲ್ ಬಗ್ಗೆ ಬಾಯಿ ಬಿಟ್ಟಿದ್ದಾರೆ.

Leave a Comment