Naga chaitanya: ಗಟ್ಟಿ ನಿರ್ಧಾರ ಮಾಡಿ, ಕೆಲವರಿಗೆ ಮಾತ್ರವೇ ಆಹ್ವಾನ ಕೊಟ್ಟ ನಟ! ನಾಗಚೈತನ್ಯ ನಿರ್ಧಾರಕ್ಕೆ ಫ್ಯಾನ್ಸ್ ಖುಷಿ

Written by Soma Shekar

Published on:

---Join Our Channel---

Naga Chaitanya : ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುವ ಸ್ಟಾರ್ ಗಳಲ್ಲಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ (Samantha) ಕೂಡಾ ಇದ್ದಾರೆ. ಇವರು ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ದಕ್ಷಿಣ ಸಿನಿಮಾ ರಂಗದ ಕ್ಯೂಟ್ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದ್ದ ಈ ಜೋಡಿ ವಿಚ್ಚೇದನ ಪಡೆದಾಗ ಅದು ತೆಲುಗು ಸಿನಿಮಾ ಪ್ರೇಮಿಗಳಿಗೆ ದೊಡ್ಡ ಶಾ ಕ್ ಆಗಿತ್ತು. ಆರಂಭದಲ್ಲಿ ನಾಗಚೈತನ್ಯ ಮತ್ತು ಸಮಂತಾ ದೂರಾಗಲಿದ್ದಾರೆ ಎನ್ನುವ ಸುದ್ದಿಗಳು ಹೊರ ಬಂದಾಗ ಅನೇಕರು ಇದನ್ನು ಗಾಸಿಪ್ ಎಂದೇ ಟೀಕೆ ಮಾಡಿದ್ದರು. ಮಾದ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಅಭಿಮಾನಿಗಳು ಅಸಹನೆ, ಅಸಮಾಧಾನವನ್ನು ಹೊರ ಹಾಕಿದ್ದರು.

ಆದರೆ ದಿನಗಳು ಉರುಳಿದ ಹಾಗೆ ಗಾಸಿಪ್ ಎನ್ನುವಂತೆ ಹೇಳಲಾದ ಸುದ್ದಿಗಳೇ ನಿಜವಾದ ಸುದ್ದಿಗಳಾದವು. ಸಮಂತಾ ಮತ್ತು ನಾಗ ಚೈತನ್ಯ (Samantha Naga Chaitanya divorce) ಬೇರೆ ಬೇರೆಯಾದರು. ದಾಂಪತ್ಯ ಬಂಧನದಿಂದ ಬಿಡುಗಡೆ ಹೊಂದಿದ ನಂತರ ಇಬ್ಬರೂ ತಮ್ಮ ತಮ್ಮ ಹಾದಿಗಳಲ್ಲಿ ಮುಂದಡಿ ಇಟ್ಟರು. ಇಬ್ಬರೂ ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಸಕ್ರಿಯವಾದರು. ಸಮಂತಾ ಜನಪ್ರಿಯತೆ ಹೆಚ್ಚುವುದರ ಜೊತೆಗೆ ನಟಿಯನ್ನು ಆರೋಗ್ಯ ಸಮಸ್ಯೆ ಕೂಡಾ ಕಾಡಿತ್ತು. ಆದರೆ ಈ ಕುರಿತಾಗಿ ನಾಗಚೈತನ್ಯ ಎಲ್ಲೂ ಮಾತನಾಡಿದ್ದು ಕಾಣಲೇ ಇಲ್ಲ.

ಇನ್ನು ವಿಚ್ಚೇದನದ ನಂತರ ಇವರು ಎಲ್ಲೂ, ಯಾವುದೇ ಸಿನಿಮಾ ವಿಚಾರದಲ್ಲೂ ಕೂಡಾ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ನಟಿ ಸಮಂತಾ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ ಸುದ್ದಿಯೊಂದು ವರದಿಯಾಗಿತ್ತು. ಬಾಲಿವುಡ್ ನ ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿರುವ ಕಾರಣದಿಂದಾಗಿ ನಟಿಯು ಅಲ್ಲೂ ಒಂದು ಮನೆಯನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈಗ ಅದರ ಬೆನ್ನಲ್ಲೇ ನಾಗಚೈತನ್ಯ ಸಹಾ ಹೊಸ ಮನೆ ಖರೀದಿ ಮಾಡಿದ ವಿಷಯ ಚಕ್ಕರ್ ಹೊಡೆದಿದೆ.

ಸಮಂತಾ ಜೊತೆಗಿನ ವಿಚ್ಚೇದನದ ನಂತರ ಹೆಚ್ಚಾಗಿ ಹೊಟೇಲ್ ಗಳಲ್ಲೇ ತಂಗುತ್ತಿದ್ದ ನಟ ನಾಗಚೈತನ್ಯ ಇದೀಗ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ತಂದೆ ನಾಗಾರ್ಜುನ ಅವರ ಮನೆಯ ಹತ್ತಿರದಲ್ಲೇ ಹೊಸ ಮನೆಯನ್ನು ಖರೀದಿ ಮಾಡಿರುವ ನಾಗಚೈತನ್ಯ ಮನೆಯನ್ನು ತನ್ನ ಇಷ್ಟದಂತೆ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಯುಗಾದ ಹಬ್ಬದಂದು ಹೊಸ ಮನೆಯ ಗೃಹ ಪ್ರವೇಶವನ್ನು ಸಹಾ ಮಾಡಿದ್ದಾರೆ ನಾಗ ಚೈತನ್ಯ. ಸ್ವಿಮ್ಮಿಂಗ್ ಪೂಲ್, ಜಿಮ್ , ಥಿಯೇಟರ್, ಉದ್ಯಾನ ಎಲ್ಲಾ ಐಶಾರಾಮೀ ಸವಲತ್ತುಗಳು ಈ ಮನೆಯಲ್ಲಿದೆ.

ನಾಗ ಚೈತನ್ಯ ಹೊಸ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಿದ್ದರು. ನಾಗಚೈತನ್ಯ ನಟಿಸಿದ್ದ ಹಿಟ್ ಸಿನಿಮಾ ಪ್ರೇಮಂ ನ ನಿರ್ದೇಶಕ ಚಂದು ಮೊಂಡೇಟಿ (Chandru Mondeti) ಆ ಕೆಲವರಲ್ಲಿ ಒಬ್ಬರಾಗಿದ್ದು, ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಯುಗಾದಿ ದಿನದಂದು ಯುವಸಾಮ್ರಾಟ್ ನಾಗಚೈತನ್ಯ ಹೊಸ ಮನೆಗೆ ನಾನು ಮೊದಲ ಅತಿಥಿ ಎಂದು ಬರೆದುಕೊಂಡು ಪೋಸ್ಟ್ ಒಂದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳ ಮೆಚ್ಚುಗೆಗಳು ಹರಿದು ಬಂದಿದೆ.

Leave a Comment