Bhagyalakshmi: ಕನ್ನಡ ಕಿರುತೆರೆಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಸೀರಿಯಲ್ ಗಳಲ್ಲಿ ಭಾಗ್ಯಲಕ್ಷ್ಮಿ (Bhagyalakshmi) ಕೂಡಾ ಬಂದಾಗಿದೆ. ಪ್ರಸ್ತುತ ಕಥೆಯಲ್ಲಿ ತಾಂಡವ್ ಗೆ ಬುದ್ಧಿ ಕಲಿಸಲು ಅತ್ತೆ ಕುಸುಮ ಮತ್ತು ಸೊಸೆ ಭಾಗ್ಯ ಇಬ್ಬರೂ ನಿರ್ಧಾರವನ್ನು ಮಾಡಿದ್ದು, ಮಗನ ನೆರವಿಲ್ಲದೆ ಕುಸುಮ, ಗಂಡನ ಸಹಾಯವಿಲ್ಲದೆ ಭಾಗ್ಯ ಸ್ವಾವಲಂಬಿಗಳಾಗಿ ಬದುಕನ್ನ ಕಟ್ಟಿಕೊಳ್ಳಬೇಕೆಂಬ ಗಟ್ಟಿ ನಿರ್ಧಾರದಿಂದ ಕೆಲಸ ಹುಡುಕುವುದಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಕುಸುಮ ಮತ್ತು ಭಾಗ್ಯ ಒಬ್ಬರಿಗೊಬ್ಬರು ತಿಳಿಯದ ಹಾಗೆ ಬ್ರೋಕರ್ ಗೋಪಾಲಣ್ಣ ತಿಳಿಸಿದಂತಹ ಹೋಟೆಲ್ ಗೆ ಕೆಲಸಕ್ಕಾಗಿ ಹೋಗಿದ್ದಾರೆ.
ಆದರೆ ಭಾಗ್ಯ ಅಡ್ರೆಸ್ ತಪ್ಪಿ ಸ್ಟಾರ್ ಹೋಟೆಲ್ ಒಂದಕ್ಕೆ ಸಂದರ್ಶನಕ್ಕಾಗಿ ತಲುಪಿದ್ದಾಳೆ, ಅವಳಿಗೆ ಮನಸ್ಸಿನಲ್ಲಿ ಹೇಗೋ ಕೆಲಸ ಸಿಕ್ಕಿದರೆ ಸಾಕು ಅನ್ನೋ ಯೋಚನೆ ಮಾತ್ರ ಇದೆ.. ಇನ್ನೊಂದು ಕಡೆ ಹೋಟೆಲ್ ಒಂದಕ್ಕೆ ಬಂದ ಕುಸುಮ ಅವರನ್ನು ಬ್ರೋಕರ್ ಗೋಪಾಲಣ್ಣ ಮ್ಯಾನೇಜರ್ ಗೆ ಪರಿಚಯ ಮಾಡಿಕೊಡ್ತಾರೆ. ಆಗ ಮ್ಯಾನೇಜರ್ ನಾನೇನೋ ಕೆಲಸ ಕೊಡ್ತೀನಿ, ಆದ್ರೆ ಸ್ವಲ್ಪ ದಿನದ ನಂತ್ರ ಕೆಲಸದವರು ಹೇಳ್ದೆ ಕೇಳ್ದೆ ಹೊರಟು ಹೋಗ್ತಾರೆ ಅನ್ನೋ ಮಾತನ್ನು ಹೇಳಿದಾಗ, ಕುಸುಮ ಯಾರೋ ಕೆಲಸ ಬಿಟ್ಟು ಹೋದರೆ ನಾವು ಕೂಡಾ ಹಾಗೆ ಮಾಡ್ತೀವಿ ಅಂತ ಹೇಗೆ ಅನ್ಕೊಳ್ತೀರಾ ಅಂತ ಪ್ರಶ್ನೆಯನ್ನು ಮಾಡ್ತಾರೆ.
ಮ್ಯಾನೇಜರ್ ಕೆಲಸ ಬಿಟ್ಟು ಹೋದವನು ಬಹಳ ಚೆನ್ನಾಗಿ ಅಡುಗೆಯನ್ನು ಮಾಡುತ್ತಿದ್ದ, ಅವನು ಮಾಡೋ ಅಡುಗೆಯ ರುಚಿಗಾಗಿ ಬಹಳಷ್ಟು ಜನ ಬರ್ತಾ ಇದ್ರು, ಆದರೆ ಈಗ ವ್ಯಾಪಾರ ಕಡಿಮೆಯಾಗಿದೆ, ಜನರು ಕಡಿಮೆಯಾಗಿದ್ದಾರೆ ಅನ್ನೋ ಮಾತನ್ನು ಹೇಳಿದಾಗ, ಕುಸುಮ ನಾನು ಒಂದು ಸಲ ಒಪ್ಕೊಂಡ್ರೆ ಮಾಡಿದ ಕೆಲಸವನ್ನ ಪೂರ್ತಿ ಮಾಡಿದೆ ಬಿಡೋದೇ ಇಲ್ಲ ಅದೇನ್ ಅಡುಗೆ ಮಾಡಬೇಕು ಹೇಳಿ, ಅದೆಲ್ಲಾ ನನಗೆ ಜುಜುಬಿ ಅಂತ ಬಹಳ ಜೋರಾಗಿ ಹೇಳೋ ಮೂಲಕ ಗೋಪಾಲಣ್ಣ ಹಾಗೂ ಮ್ಯಾನೇಜರ್ ಇಬ್ಬರಿಗೂ ಶಾಕ್ ಕೊಡ್ತಾರೆ.
ನಂತರ ಅಡುಗೆ ಮನೆಗೆ ಹೋಗೋ ಕುಸುಮ ಅವರು ಬಹಳ ಬೇಗ ಒತ್ತು ಶ್ಯಾವಿಗೆ ಮತ್ತು ಮಾವಿನ ಸೀಕರಣೆ ಮಾಡಿ ಮ್ಯಾನೇಜರ್ ಗೆ ರುಚಿ ನೋಡೋದಕ್ಕೆ ಕೊಡ್ತಾರೆ.. ರುಚಿ ನೋಡಿದ ಮ್ಯಾನೇಜರ್ ಹಿಂದಿನ ಅಡುಗೆಯವರಿಗಿಂತ ಈಗ ಕುಸುಮಾ ಮಾಡಿರುವ ಅಡುಗೆನೇ ತುಂಬಾ ರುಚಿಯಾಗಿದೆ ಅನ್ನೋ ಹೊಗಳಿಕೆಯನ್ನು ನೀಡುತ್ತಾರೆ, ಅಲ್ಲಿಗೆ ಕುಸುಮ ಅವರಿಗೆ ಹೋಟೆಲ್ ನಲ್ಲಿ ಕೆಲಸ ಖಾತ್ರಿ ಆಗಿದ್ದು, ಅವರು ಇನ್ನು ಮುಂದೆ ಆ ಹೋಟೆಲ್ ನಮ್ದು ಅನ್ನೋತರ ಕೆಲಸ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ.
ಮತ್ತೊಂದು ಕಡೆ ಬೇರೊಬ್ಬ ಹುಡುಗಿಯ ವಿವರಗಳನ್ನ ಭಾಗ್ಯಾದು ಅಂತ ತಪ್ಪಾಗಿ ಭಾವಿಸಿ ಭಾಗ್ಯಳನ್ನ ಸಂದರ್ಶನ ಮಾಡೋದಕ್ಕೆ ಕರೀತಾರೆ. ಅಲ್ಲಿ ಬಹುತೇಕ ಇಂಗ್ಲಿಷ್ ನಲ್ಲಿ ಪ್ರಶ್ನೆಗಳನ್ನ ಕೇಳಿದಾಗ ಇಂಗ್ಲಿಷ್ ಸರಿಯಾಗಿ ಬಾರದ ಕಾರಣ ಎಲ್ಲದಕ್ಕೂ ಭಾಗ್ಯ ಎಸ್ ಮತ್ತು ನೋ ಗಳಲ್ಲಿ ಉತ್ತರವನ್ನು ನೀಡ್ತಾಳೆ.. ಇದನ್ನು ನೋಡಿ ಇಂಟರ್ವ್ಯೂ ಮಾಡುವವರಿಗೆ ಸಂದೇಹ ಉಂಟಾಗುತ್ತೆ ಅವರು ನಿಮ್ಮಲ್ಲಿ ಎಲ್ಲ ಗುಣಗಳಿದೆ, ಆದ್ರೂ ಕೆಲವೊಂದು ವಿಚಾರಗಳಲ್ಲಿ ನೀವು ಇನ್ನಷ್ಟು ಇಂಪ್ರೂ ಆಗಬೇಕು ಅನ್ನೋ ಸಲಹೆಯನ್ನ ಕೊಟ್ಟಿದ್ದಾರೆ.
ಆದ್ರೆ ಭಾಗ್ಯ ತನಗೆ ಕೆಲಸ ಸಿಗೋ ಹಾಗಿಲ್ಲ ಅಂತಅರ್ಥ ಮಾಡಿಕೊಂಡಿದ್ದಾಳೆ. ಅಲ್ಲಿ ತನಕ ಕೆಲಸ ಸಿಗೋದಿಲ್ಲ ಅನ್ನು ಬೇಸರ ಪಡೋವಾಗಲೇ, ಅಲ್ಲಿ ತನಗೆ ಕೆಲಸ ಸಿಕ್ಕಿದೆ ಅನ್ನೋದನ್ನ ಸಂದರ್ಶನ ಮಾಡಿದವರು ತಿಳಿಸಿದ ಮೇಲೆ ಭಾಗ್ಯ ಖುಷಿಯಾಗಿದ್ದಾಳೆ. ಕುಸುಮಾ ತನಗೆ ಕೆಲಸ ಸಿಕ್ಕಿದ್ದನ್ನ ಮನೇಲಿ ಹೇಳ್ತಾರಾ? ಭಾಗ್ಯಗೂ ಕೆಲಸ ಸಿಕ್ಕಾಗಿದೆ. ಇನ್ನಾದ್ರೂ ಭಾಗ್ಯ ಜೀವನ ಇನ್ಮುಂದೆ ಹೊಸ ದಿಕ್ಕಿನ ಕಡೆಗೆ ಸಾಗುತ್ತಾ ಕಾದು ನೋಡಬೇಕಾಗಿದೆ.
Actress Sithara: ದಕ್ಷಿಣ ಸಿನಿಮಾ ರಂಗದಲ್ಲಿ ಪ್ರಸ್ತುತ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟಿ ಸಿತಾರಾ (Actress Sithara)…
Lakshmi Nivasa Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಇತ್ತೀಚಿನ ದಿನಗಳಲ್ಲಿ ಜಯಂತ್…
Tirupati: ಬೇಸಿಗೆ ರಜೆ ಇನ್ನೇನು ಮುಗಿಯುವ ಹೊತ್ತಲ್ಲೇ ತಿರುಪತಿ (Tirupati) ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ತೆಲುಗು…
Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದಂತಹ ರೇವ್ ಪಾರ್ಟಿಯ…
Namratha Gowda: ಕಿರುತೆರೆಯ ನಟಿ, ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ (Nanratha Gowda) ಅವರು ಬಿಗ್ ಬಾಸ್ ಕನ್ನಡ…
Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ…
This website uses cookies.