Amruthadhaare: ಸೀತೆಯ ಐಡಿಯಾ ಬಳಸಿದ ಭೂಮಿಕಾ, ಗುರಿ ತಲುಪಿದ ಗೌತಮ್, ಶಕುಂತಲಾ ಪ್ಲಾನ್ ಫ್ಲಾಪ್

Written by Soma Shekar

Published on:

---Join Our Channel---

Amruthadhaare : ಅಮೃತಧಾರೆ (Amruthadhaare) ಭೂಮಿಕಾಗೆ ಐ ಲವ್ ಯೂ ಅಂತ ಹೇಳೋಕೆ ಪರದಾಡ್ತಾ ಇದ್ದ ಗೌತಮ್ ಕೊನೆಗೂ ಚಿಕ್ಕಮಗಳೂರಿನ ರಮ್ಯವಾದ ವಾತಾವರಣದಲ್ಲಿ ಭೂಮಿಕಾಗೆ ಐ ಲವ್ ಯೂ ಹೇಳೋಕೆ ಮುಂದಾಗಿದ್ದನು. ಗೌತಮ್ ಧೈರ್ಯ ಮಾಡಿ ಐ ಲವ್ ಯೂ ಹೇಳಿದ್ದಾನೆ. ಆದರೆ ಹೆಂಡತಿಯ ಕಡೆ ನೋಡದೆ ಮತ್ತೊಂದು ಕಡೆಗೆ ನೋಡುತ್ತಾ ತನ್ನ ಪ್ರೇಮ ನಿವೇದನೆ ಮಾಡೋವಾಗಲೇ ಭೂಮಿಕಾಳ ಅಪಹರಣ ಆಗೋಗಿದೆ. ಕೆಲವರು ಭೂಮಿಕಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ‌

ಆದರೆ ಅಪಹರಣದ ವೇಳೆಯಲ್ಲಿ ಭೂಮಿಕಾ (Bhumika) ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿದ್ದು, ರಾಮಾಯಣದಲ್ಲಿ ಸೀತಾ ಮಾತೆಯ ಅಪಹರಣದ ಸಂದರ್ಭದಲ್ಲಿ ಸೀತಾ ಮಾತೆಯು ಅನುಸರಿಸಿದ ಮಾರ್ಗವನ್ನೇ ತಾನು ಅನುಸರಿಸಿದ್ದಾಳೆ. ಗಂಡನಿಗೆ ತನ್ನ ಜಾಡನ್ನು ತಿಳಿಸಲು ಭೂಮಿಕಾ ತನ್ನ ಕಿವಿಯೋಲೆ ಮತ್ತು ಬಳೆಗಳನ್ನು ಎಸೆಯುತ್ತಾ ಸಾಗಿದ್ದು, ಅದು ಗೌತಮ್ ಕೈಗೆ ಸಿಕ್ಕಿದೆ.

ಇಂತಹುದೊಂದು ಖತರ್ನಾಕ್ ಪ್ಲಾನ್ ನ ಹಿಂದೆ ಇರೋದು ಗೌತಮ್ ನ (Gowtham) ಚಿಕ್ಕಮ್ಮ ಶಕುಂತಲಾ ದೇವಿ ಮತ್ತು ಮಗ ಜೈದೇವ್ ಅನ್ನೋದನ್ನ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಭೂಮಿಯ ವಿಚಾರವಾಗಿ ಎದ್ದ ಒಂದು ತಕರಾರಿನ ವಿಚಾರವಾಗಿ ಅದನ್ನು ಬಗೆಹರಿಸಲು ಗೌತಮ್ ಚಿಕ್ಕಮಗಳೂರಿನ ಕಡೆ ಬಂದಿದ್ದು, ಇದೇ ವೇಳೆ ಶಕುಂತಲಾ ಪ್ಲಾನ್ ಮಾಡಿ ಹನಿಮೂನ್ ನೆಪವೊಡ್ಡಿ ಭೂಮಿಕಾ ಕೂಡಾ ಜೊತೆಗೆ ಹೋಗೋ ತರ ಮಾಡಿದ್ದಾಳೆ.

ಎಪಿಸೋಡ್ ನಲ್ಲಿ ಭೂಮಿಕಾ ತನ್ನ ಜಾಡನ್ನು ಹುಡುಕೋದಕ್ಕೆ ಗಂಡನಿಗೆ ಸುಲಭ ಆಗ್ಲಿ ಅಂತ ಅನುಸರಿಸಿದ ಮಾರ್ಗವನ್ನ ನೋಡಿ ನೆಟ್ಟಿಗರು ಮತ್ತು ಪ್ರೇಕ್ಷಕರು ಮೆಚ್ಚುಗೆಗಳನ್ನು ನೀಡಿದ್ದಾರೆ. ಈಗ ಗೌತಮ್ ಭೂಮಿಕಾಳನ್ನ ಪತ್ತೆ ಹಚ್ಚೋದ್ರಲ್ಲಿ ಯಶಸ್ಸನ್ನ ಪಡ್ಕೊಂಡಿದ್ದಾನೆ. ಕುತಂತ್ರ ಹೆಣೆದವನ ಪತ್ತೆ ಹಚ್ಚಿರುವ ಗೌತಮ್ ಅವನ ಕಾಲಿಗೆ ಶೂಟ್ ಮಾಡಿ, ನೆಲದಡಿಯಲ್ಲಿ ಮುಚ್ಚಿಟ್ಟಿದ್ದ ಭೂಮಿಕಾಳನ್ನು ಸಕಾಲದಲ್ಲಿ ರಕ್ಷಿಸಿದ್ದು, ಶಕುಂತಲಾ ಪ್ಲಾನ್ ಫ್ಲಾಪ್ ಆಗಿದೆ.

Leave a Comment