ತ್ರಿಪುರ ಸುಂದರಿ ಸೀರಿಯಲ್ ಬಿಗ್ ಟ್ವಿಸ್ಟ್: ಹೊಸ ಹೀರೋ ಎಂಟ್ರಿ ಕಂಡು ಶಾಕ್ ಆದ ಪ್ರೇಕ್ಷಕರು!

Written by Soma Shekar

Published on:

---Join Our Channel---

Kiran Raj : ಕಲರ್ಸ್ ಕನ್ನಡ ವಾಹಿನಿ ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಗಳಲ್ಲಿ ಒಂದಾಗಿದೆ. ಅದ್ಭುತ ಕಾರ್ಯಕ್ರಮಗಳು, ಡೈಲಿ ಸೀರಿಯಲ್ ಗಳ ಮೂಲಕ ಈಗಾಗಲೇ ನಾಡಿನ‌ ಜನ ಮೆಚ್ಚಿದ ವಾಹಿನಿಯಾಗಿ ಹೆಸರನ್ನು ಪಡೆದಿರುವ ಈ ವಾಹಿನಿಯಲ್ಲಿ ಪ್ರಸಾರವಾಗುವ ಸೀರಿಯಲ್ ಗಳು ಕೂಡಾ ಈಗಾಗಲೇ ಜನ ಮೆಚ್ಚುಗೆಯನ್ನು ಪಡೆದುಕೊಂಡು, ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿವೆ. ಅಂತಹ ಧಾರಾವಾಹಿಗಳಲ್ಲಿ ಒಂದು ತ್ರಿಪುರ ಸುಂದರಿ (Tripura Sundari) ವಿಭಿನ್ನ ಕಥೆಯೊಂದಿಗೆ ಈ ಸೀರಿಯಲ್ ಜನರ ಮನಸ್ಸನ್ನು ರಂಜಿಸುತ್ತಿದೆ.

ಗಂಧರ್ವ ಲೋಕದ ಸಿಂಹಾಸನದ ಮೇಲೆ ಕುಳಿತಿರುವ ದುಷ್ಟ ಧನಂಜಯನಿಂದ, ಗಂಧರ್ವ ಲೋಕದ ವಾಸಿಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಆ ಸಿಂಹಾಸನಕ್ಕೆ ಗಂಧರ್ವ ಲೋಕದ ರಾಜಕುಮಾರನನ್ನು ಕರೆ ತಂದು ಕೂರಿಸುವವರೆಗೆ ಧನಂಜಯನ ಅಟ್ಟಹಾಸಕ್ಕೆ ಕೊನೆಯಿಲ್ಲ ಎನ್ನುವುದು ಕಥಾ ಹಂದರವಾಗಿದೆ.

ಮಯೂರ ಸಿಂಹಾಸನದ ಮೇಲೆ ಅಧಿಕಾರ ಇರುವುದು ಅಥರ್ವ ದೇವನಿಗೆ. ಆದರೆ ಅವರು ಧನಂಜಯನ ಸೆರೆಯಲ್ಲಿದ್ದಾರೆ. ಇನ್ನು ಗಂಧರ್ವ ಲೋಕದ ರಾಜಕುಮಾರ ಭೂಲೋಕದಲ್ಲಿ ಇದ್ದಾನೆ. ಅವನನ್ನು ಕರೆದುಕೊಂಡು ಹೋಗುವ ಸಲುವಾಗಿ ಆಮ್ರಪಾಲಿ ಭೂಮಿಗೆ ಬಂದಿದ್ದಾಳೆ.

ರಾಜಕುಮಾರನ ಹುಡುಕಾಟದಲ್ಲಿ ಆಮ್ರಪಾಲಿ (Amrapali) ತನ್ನ ಬಳಿಯಿದ್ದ ಪದಕವನ್ನು ಕಳೆದುಕೊಂಡಿದ್ದಾಳೆ. ಅದು ಇದ್ದಲ್ಲಿ ರಾಜಕುಮಾರ ಹತ್ತಿರನಾದಾಗ ಅದು ಹೊಳೆದು ಸೂಚನೆಯನ್ನು ನೀಡುತ್ತಿತ್ತು. ಆದರೆ ಈಗ ಅದಿಲ್ಲದೇ ಆಮ್ರಪಾಲಿ ಪರದಾಡುವಂತಾಗಿದೆ.

ತನ್ನ ಜೊತೆಗಿರುವ ಪ್ರದ್ಯುಮ್ನನೇ ರಾಜಕುಮಾರ ಎನ್ನುವುದು ಆಮ್ರಪಾಲಿಗೆ ತಿಳಿದಿಲ್ಲ. ತಾನು ತನ್ನ ಕಾರ್ಯ ಸಾಧನೆ ಮಾಡಲು, ಅವನಿಂದಲೇ ರಾಜಕುಮಾರನನ್ನು ಹುಡುಕಲು ಸಹಾಯವನ್ನು ಕೇಳುತ್ತಿದ್ದಾಳೆ.

ಈಗ ಇವೆಲ್ಲವುಗಳ ನಡುವೆ ಆಮ್ರಪಾಲಿ ಸೀರಿಯಲ್ ಗೆ ಕನ್ನಡತಿ ಸೀರಿಯಲ್ ನಾಯಕ ಹರ್ಷ ಎಂಟ್ರಿ ನೀಡಿದ್ದಾರೆ. ಹರ್ಷ ಅವರ ಎಂಟ್ರಿ ನೋಡಿ ಪ್ರೇಕ್ಷಕರು ಅಚ್ಚರಿ ಪಡುತ್ತಿದ್ದಾರೆ. ಇವರೇಕೆ ಇಲ್ಲಿಗೆ ಬಂದ್ರು ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡತಿ ಸೀರಿಯಲ್ ನಲ್ಲಿ ಹರ್ಷನ ಪಾತ್ರದ ಮೂಲಕ ಮನೆ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರು. ಕನ್ನಡತಿ(Kannadati) ಸೀರಿಯಲ್ ಮುಗಿದಾಗಿದೆ, ಆದರೆ ಅದನ್ನು ಇಷ್ಟಪಟ್ಟು ನೋಡುತ್ತಿದ್ದವರು ಇನ್ನೂ ಅದರ ಪಾತ್ರಗಳನ್ನು ಮರೆತಿಲ್ಲ.

ಈಗ ಹರ್ಷನ ಪಾತ್ರವು ತ್ರಿಪುರ ಸುಂದರಿ ಸೀರಿಯಲ್ ಗೆ ಎಂಟ್ರಿ ನೀಡಿದ್ದು, ಬಹುಶಃ ಇದು ಅತಿಥಿ ಪಾತ್ರ ಇರಬಹುದು ಎನ್ನಲಾಗುತ್ತಿದೆ. ಆಮ್ರಪಾಲಿಗೆ ಸಹಾಯ ಮಾಡುವ ಪಾತ್ರವಾಗಿ ಹರ್ಷನ ಪಾತ್ರ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.‌

Leave a Comment