Puttakkana Makkalu ಡಿಸಿ ಸ್ನೇಹ ತಲೇಲಿ ಬುದ್ಧಿ ಇಲ್ವಾ? ನೆಟ್ಟಿಗರು ಹೀಗೆ ಸ್ನೇಹ ಮೇಲೆ ಸಿಟ್ಟಾಗಿದ್ದಾದ್ರು ಯಾಕೆ

Written by Soma Shekar

Published on:

---Join Our Channel---

Puttakkana Makkalu : ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ಪ್ರಸಾರದ ಸಮಯ ಬದಲಾಗುವವರೆಗೂ ನಂಬರ್ ಒನ್ ಸ್ಥಾನದಲ್ಲಿ ಅಬ್ಬರಿಸುತ್ತಿದ್ದ ಸೀರಿಯಲ್ ಆಗಿತ್ತು. ಈಗ ಟಾಪ್ ಐದರಲ್ಲಿ ಇದೆಯಾದರೂ ನಂಬರ್ ಒನ್ ಸ್ಥಾನಕ್ಕೆ ಬರಲು ಕಳೆದ ಕೆಲವು ವಾರಗಳಿಂದಲೂ ಹರ ಸಾಹಸ ಮಾಡುತ್ತಿದೆ. ಇವೆಲ್ಲವುಗಳ ನಡುವೆ ಸೀರಿಯಲ್ ನಲ್ಲಿ ಡಿಸಿ ಆಗಿರೋ ಪುಟ್ಟಕ್ಕನ ಮಗಳು ಸ್ನೇಹಾಗೆ ಬುದ್ಧಿ ಇಲ್ವಾ ಅಂತ ನೆಟ್ಟಿಗರು ಪ್ರಶ್ನೆಯನ್ನ ಮಾಡ್ತಿದ್ದಾರೆ.

ಮೇಷ್ಟ್ರ ಭೂಮಿ ವಿಚಾರದಲ್ಲಿ ಪಾಪ ಮೇಷ್ಡ್ರು ಬಂಗಾರಮ್ಮನ ರೂಪದಲ್ಲಿರೋ ಸಿಂಗಾರಮ್ಮ ಕೊಟ್ಟ ಹಿಂಸೆ ಬಗ್ಗೆ ತಿಳಿಸಿದ್ದಾರೆ. ಆದ್ರೆ ಸ್ನೇಹ (Sneha) ಅದನ್ನ ನೇರವಾಗಿ ಅತ್ತೆಯ ಹತ್ರ ಮಾತಾಡೋದನ್ನ ಪ್ರೊಮೊದಲ್ಲಿ ನೋಡಬಹುದಾಗಿದೆ. ಈಗ ಅದರ ಬೆನ್ನಲ್ಲೇ ಹೊಸ ಪ್ರೊಮೊದಲ್ಲೂ ಅಂತದ್ದೇ ಇನ್ನೊಂದು ಸನ್ನಿವೇಶ ತೋರಿಸಲಾಗಿದೆ.

ಸಹನಾಗೆ ಪರಿಚಯ ಇರೋ ಪೋಲಿಸ್ ಪೇದೆ ಬಂದು ಸ್ನೇಹಾಗೆ ಸಿಂಗಾರಮ್ಮನ ಬಗ್ಗೆ ಎಲ್ಲಾ ತಿಳಿಸಿ ನಿಮ್ಮ ಮನೇಲಿ ಇರೋದ ಸಿಂಗಾರಮ್ಮ ಅಂತ ಸತ್ಯ ಹೇಳಿದ್ದಾರೆ. ಇದಾದ ಮೇಲೆ ಮನೆಗೆ ಬಂದ ಸ್ನೇಹ ತನ್ನ ಅತ್ತೆಯ ಜಾಗದಲ್ಲಿರೋ ಸಿಂಗಾರಮ್ಮನಿಗೆ ಆವಾಜ್ ಹಾಕಿ ಬಂಗಾರಮ್ಮ ಎಲ್ಲಿ ಅಂತ ಪ್ರಶ್ನೆ ಮಾಡಿದ್ದಾಳೆ.

ಇದನ್ನ ನೋಡಿ ನೆಟ್ಟಿಗರು ಡಿಸಿ ಆಗಿರೋ ಸ್ನೇಹಾಗೆ ಸ್ವಲ್ಪ ಕೂಡಾ ಬುದ್ಧಿ ಇಲ್ವಾ? ಮೊದಲು ಮನೇಲಿ ಇರೋದು ಸಿಂಗಾರಮ್ಮ ಅಂತ ಸಾಕ್ಷಿಗಳನ್ನು ಸಂಗ್ರಹಿಸಿ ಆಮೇಲೆ ಮಾತಾಡೋದು ಬಿಟ್ಟು ಹೀಗೆ ನೇರವಾಗಿ ಬಂದು ಕೇಳಿದ್ರೆ ಪ್ರಯೋಜನ ಏನು? ಸಿಂಗಾರಮ್ಮ ಮೊದಲೇ ಖತರ್ನಾಕ್, ಈಗ ಸಿಂಗಾರಮ್ಮ ಹೊಸ ಪ್ಲಾನ್ ಮಾಡೋಕೆ ಸ್ನೇಹಾನೇ ಅವಕಾಶ ಕೊಟ್ಟ ಹಾಗಿದೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ.‌

ಕೋಟಿ ಕೋಟಿ ಬೆಲೆಯ ಬಂಗಾರ ಧರಿಸೋ Gold Suresh ಬಿಗ್ ಬಾಸ್ ಆಟಕ್ಕೆ ಪಡೀತಿರೋ ಸಂಭಾವನೆ ಇಷ್ಟೊಂದಾ? ಶಾಕಿಂಗ್

Leave a Comment