ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತರ ಹತ್ತನೇ ವಾರದ ಆಟ ಆರಂಭವಾಗಿದೆ. ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಜೋಡಿಯಾಗಿ ಕಂಡಿದ್ದು ಎರಡು ಜೋಡಿಗಳು. ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಜೋಡಿ ಮತ್ತು ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಜೋಡಿ. ಸಾನ್ಯಾ ಅಯ್ಯರ್ ಎಲಿಮಿನೇಟ್ ಆದ ಮೇಲೆ ರೂಪೇಶ್ ಒಂಟಿಯಾದ್ರು, ಒಂದಷ್ಟು ದಿನ ಬೇಸರದಲ್ಲಿದ್ದ ಅವರು ಅನಂತರ ಸಾಮಾನ್ಯ ಸ್ಥಿತಿಗೆ ಬಂದರು. ಇನ್ನು ಈಗ ಮನೆಯಲ್ಲಿ ಉಳಿದಿರುವ ಒಂದು ಜೋಡಿ ಎಂದರೆ ಅದು ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಜೋಡಿ. ಇವರಿಬ್ಬರ ನಡುವಿನ ಸ್ನೇಹ ಮತ್ತು ಆತ್ಮೀಯತೆ ಈಗಾಗಲೇ ಸಾಕಷ್ಟು ಸಂದರ್ಭಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಬಹಳ ಆತ್ಮೀಯವಾಗಿದ್ದ ಇವರ ನಡುವೆ ಈಗ ಭಿನ್ನಾಭಿಪ್ರಾಯವೊಂದು ಮೂಡಿದೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಮತ್ತು ರಾಕಿ ನಡುವೆ ಮಾತಿನ ಚಕಮಕಿ ನಡೆದಿದೆ. ರಾಕೇಶ್ ಅವರು ಕಿಚನ್ ನಲ್ಲಿ ಇದ್ದವರನ್ನು ಟೀ ಎಲ್ಲರಿಗೂ ಮಾಡೋದಾ, ಅವರವರೇ ಮಾಡ್ಕೊಳ್ಳೋದಾ ಎಂದು ಕೇಳಿದ್ದಾರೆ. ಅದಕ್ಕೆ ಅಲ್ಲೇ ಸ್ವಲ್ಪ ದೂರದಲ್ಲಿ ನೆಲದ ಮೇಲೆ ಕುಳಿತಿದ್ದ ಅಮೂಲ್ಯ ಅವರು ಹಾಲಿಗೆ ನೀರು ಹಾಕಿದರೆ ಆಗಲ್ಲ, ನನಗೆ ಒಂದು ಹಾಲಿನ ಪಾಕೆಟ್ ಕೊಟ್ಬಿಡಿ ಎಂದು ಕೇಳಿದ್ದಾರೆ. ಆದರೆ ಕಿಚನ್ ನಲ್ಲಿ ಇದ್ದವರು ರಾಕೇಶ್ ಅವರಿಗೆ ಉತ್ತರ ಕೊಡುತ್ತಿದ್ದ ಕಾರಣ, ರಾಕೇಶ್ ಅಮೂಲ್ಯ ಅವರ ಮಾತಿಗೆ ಗಮನ ನೀಡಲಿಲ್ಲ. ಇದರಿಂದ ಬೇಜಾರಾದ ಅಮೂಲ್ಯ ಅಲ್ಲಿಂದ ಎದ್ದು ಹೋಗಿದ್ದಾರೆ.
ನಂತರ ಈ ವಿಷಯವಾಗಿ ರಾಕೇಶ್ ಮತ್ತು ಅಮೂಲ್ಯ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಅಮೂಲ್ಯ ಅಲ್ಲಿ ನೀವು ನನಗೆ ರೆಸ್ಪಾಂಡ್ ಮಾಡಲಿಲ್ಲ ಅದಕ್ಕೆ ಬೇಜಾರಾಯ್ತು ಅಂದಾಗ ರಾಕೇಶ್ ಉತ್ತರ ನೀಡುತ್ತಾ ನೀವು ನನ್ನ ಗಮನಕ್ಕೆ ಬರಲಿಲ್ಲ ಅಂದರು, ಅದಕ್ಕೆ ಅಮೂಲ್ಯ ನಾನು ನಿಮ್ಮ ಗಮನಕ್ಕೆ ಬರಲಿಲ್ಲ ಅನ್ನೋದು ನನಗೆ ಹಿಂಸೆ ಅನಿಸ್ತು ಎಂದಿದ್ದಾರೆ. ಆಗ ರಾಕೇಶ್ ನೀವು ದೂರ ಇದ್ದುದ್ದರಿಂದ ನನ್ನ ಗಮನಕ್ಕೆ ಬರ್ಲಿಲ್ಲ. ನೀವು ಸ್ವಲ್ಪ ಮುಂದೆ ಬಂದಿದ್ರೆ ನಿಮ್ಮ ಇಗೋ ಕಡಿಮೆ ಆಗ್ತಾ ಇರ್ಲಿಲ್ಲ ಎಂದು ರಾಕೇಶ್ ಅಮೂಲ್ಯ ಅವರ ವರ್ತನೆಯನ್ನು ಟೀಕೆ ಮಾಡಿದ್ದಾರೆ.
ಇದರಿಂದ ಗರಂ ಆದ ಅಮೂಲ್ಯ ನನ್ನ ಧಿಂಕಿಂಗ್ ಕೆಪಾಸಿಟಿ ನಿಮ್ಮಷ್ಟಿಲ್ಲ ಎಂದಾಗ ರಾಕೇಶ್ ಅಮೂಲ್ಯಾಗೆ ಮೆತ್ತಗೆ ಮಾತಾಡು ಎಂದಿದ್ದಾರೆ. ಅಮೂಲ್ಯ ಸಹಾ ನಾನು ಕಿರುಚ್ತಾ ಇಲ್ಲ ಎಂದು ಉತ್ತರ ನೀಡಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತಿಗೆ ಬೆಳೆದಿರುವುದನ್ನು ಪ್ರೋಮೋದಲ್ಲಿ ನೋಡಬಹುದಾಗಿದ್ದು, ಈ ಜಗಳ ಇಷ್ಟಕ್ಕೇ ಮುಗಿಯುವುದೋ ಅಥವಾ ಮುಂದುವರೆಯುವುದೋ ಎನ್ನುವದನ್ನು ವೀಕ್ಷಕರು ಕಾದು ನೋಡಬೇಕಾಗಿದೆ. ಅಮೂಲ್ಯ ಮತ್ತು ರಾಕೇಶ್ ನಡುವಿನ ಈ ಮಾತಿನ ಚಕಮಕಿ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.