ಸಾನ್ಯಾ ಅಯ್ಯರ್ ಮೇಲೆ ದೇವಿ ಆವಾಹನೆ: ಶಾಕಿಂಗ್ ಸತ್ಯಗಳನ್ನ ಹಂಚಿಕೊಂಡ ನಟಿ ಹೇಳಿದಾದ್ರು ಏನು?

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತಕ್ಕೆ, ಕನ್ನಡದ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ನಿಂದ ಎಂಟ್ರಿ ಕೊಟ್ಟವರು ಸಾನ್ಯಾ ಅಯ್ಯರ್. ರೂಪೇಶ್ ಶೆಟ್ಟಿ ಜೊತೆಗಿನ ಸ್ನೇಹದಿಂದ ಸಿಕ್ಕಾಪಟ್ಟೆ ಸುದ್ದಿಯಾದ ಸಾನ್ಯಾ ಮನೆಯಲ್ಲಿ ಟಾಸ್ಕ್, ಮನರಂಜನೆ ಎಲ್ಲರದಲ್ಲೂ ಸೈ ಎನಿಸಿಕೊಂಡು, ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಬಿಗ್ ಬಾಸ್ ಆರನೇ ವಾರಾಂತ್ಯದಲ್ಲಿ ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ‌ ಬಂದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಸಾನ್ಯಾ ಅವರು ಮಾದ್ಯಮಗಳಿಂದ ಕೊಂಚ ಕಾಲ ದೂರ ಉಳಿದಿದ್ದರು. ಈಗ ಅವರು ಮಾದ್ಯಮಗಳ ಮುಂದೆ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈಗ ಸಾನ್ಯಾ ಅವರ ವಿಚಾರವಾಗಿ ಹೊಸದೊಂದು ಸುದ್ದಿಯಾಗಿದೆ. ಸಾನ್ಯಾ ಅವರ ಮೈಮೇಲೆ ದೇವಿ ಬರುತ್ತಾಳೆ ಎನ್ನುವ ಸುದ್ದಿಯೊಂದು ಈಗ ಹರಿದಾಡಿದೆ. ಈ ಹಿಂದೆ ಸಾನ್ಯಾ ಅವರು ಒಂದು ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಆಗ ಅವರು ದೇವಿ ಡ್ಯಾನ್ಸ್ ಮಾಡುವಾಗ ದೇವಿ ಅವರ ಮೈಮೇಲೆ ಬಂದಿದ್ದಳಂತೆ. ಹೌದು, ಸಾನ್ಯಾ ಅಯ್ಯರ್ ದೇವಿಯ ಡ್ಯಾನ್ಸ್ ಮಾಡುವಾಗ ಅವರ ಮೇಲೆ ದೇವಿ ಆವಾಹನೆ ಆಗಿದ್ದಂತೆ. ಅಲ್ಲದೇ ಸ್ವತಃ ಸಾನ್ಯ ಅವರೇ ದೇವಿ ನೀನು ಬರಲೇಬೇಕು ಎಂದು ಕೇಳಿಕೊಂಡಿದ್ದರಂತೆ. ದೇವರು ನಮಗೆ ಸ್ನೇಹಿತರಂತೆ ಆದ ಕಾರಣ ನಾನು ದೇವಿಯನ್ನು ಅವಳು ಎನ್ನುತ್ತೇನೆ ಎಂದಿದ್ದಾರೆ ಸಾನ್ಯಾ.

ಅಂದು ದೇವಿ ಡ್ಯಾನ್ಸ್ ಮಾಡುವಾಗ ಸಾನ್ಯಾ, ನಾನು ನಿನ್ನ ಪಾತ್ರ ಮಾಡುತ್ತಿದ್ದೇನೆ, ನೀನು ಬರದೇ ಹೇಗೆ ಹೋಗ್ತೀಯಾ ಎಂದು ಕೇಳಿಕೊಂಡು, ಅವರು ದೇವಿಯ ಕುರಿತಾಗಿ ಜಪವನ್ನು ಸಹಾ ಮಾಡಿದ್ದರಂತೆ. ಆ ದಿನ ಮೈಮೇಲೆ ದುರ್ಗಾ ದೇವಿ ಆವಾಹನೆ ಆಗಿತ್ತಂತೆ. ಡ್ಯಾನ್ಸ್ ಮಾಡುವ ವೇಳೆ ನನ್ನಲ್ಲಿ ಒಂದು ಬದಲಾವಣೆ ಆಗಿತ್ತು. ನಾನು ಅತ್ತಿದ್ದೆ, ನನ್ನ ಶಕ್ತಿ ದುಪ್ಪಟ್ಟಾಗಿತ್ತು. ನಾನು ನನ್ನ ನಿಯಂತ್ರಣದಲ್ಲಿ ಇರಲಿಲ್ಲ ಎನ್ನುವ ಮಾತನ್ನು ಸಾನ್ಯಾ ಹೇಳಿಕೊಂಡಿದ್ದಾರೆ. ಸಾನ್ಯಾ ಅವರ ಕುಟುಂಬವು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ದೇವರ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಸಾನ್ಯಾ ಅವರು ಮಾದ್ಯಮಗಳ ಮುಂದೆ ಬರದೇ ಇದ್ದಾಗ ಬಹುಶಃ ಅವರು ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಬಹುದು ಎನ್ನುವ ಅನುಮಾನಗಳು ಹುಟ್ಟುಕೊಂಡಿದ್ದವು. ಆದರೆ ಆ ಸಮಯದಲ್ಲಿ ಸಾನ್ಯಾ ಮತ್ತು ಅವರ ಕುಟುಂಬದವರು ಅಸ್ಸಾಂ ನ ನೀಲಾಚಲ ಬೆಟ್ಟದಲ್ಲಿ ಇರುವಂತಹ ಸುಪ್ರಸಿದ್ಧ ದೇವಿಯ ಮಂದಿರವಾಗಿರುವ ಮಾ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿಯನ್ನು ನೀಡಿದ್ದರು. ಇನ್ನು ಇತ್ತೀಚಿಗೆ ಸಾನ್ಯಾ ತಮಗೆ ತಮ್ಮ ಕೆರಿಯರ್ ಈಗ ಮುಖ್ಯ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment