ಕಿರಿಕ್ ಮಾಡಿದ ಹುಡುಗರಿಗೆ ಬೆಂಡೆತ್ತಿ ಠಾಣೆ ತಲುಪಿದ ಖಡಕ್ ನಟಿ ವರಲಕ್ಷ್ಮಿ ಶರತ್ ಕುಮಾರ್!

Written by Soma Shekar

Updated on:

---Join Our Channel---

Kannada News :ಸೆಲೆಬ್ರಿಟಿಗಳಿಗೂ ಸಹಾ ಅನೇಕ ಸಂದರ್ಭಗಳಲ್ಲಿ ಕಿರಿಕಿರಿಯನ್ನು ಉಂಟು ಮಾಡುವ, ಅಸಹನೀಯ ಎನಿಸುವ ಸಂದರ್ಭಗಳು ಎದುರಾಗುತ್ತವೆ. ಅವರು ಸಹಾ ಕಿ ರು ಕು ಳವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ ಎನ್ನುವುದು ವಾಸ್ತವ. ಸೆಲೆಬ್ರಿಟಿಗಳ ಕುರಿತಾದ ಇಂತಹ ವಿಚಾರಗಳು ಬಹಳ ಬೇಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಡುತ್ತದೆ. ಅದರಲ್ಲೂ ಕೆಲವೊಮ್ಮೆ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಅನುಚಿತ ವರ್ತನೆಯಿಂದಲೂ ಸಹಾ ಬೇಸತ್ತ ಘಟನೆಗಳ ಕುರಿತಾಗಿ ನಾವು ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ.

ಕೆಲವು ಸೆಲೆಬ್ರಿಟಿಗಳು ಅಭಿಮಾನಿಗಳ ಇಂತಹ ವರ್ತನೆಯನ್ನು ನಿರ್ಲಕ್ಷ್ಯ ಮಾಡಿದರೆ ಇನ್ನೂ ಕೆಲವರು ಅದನ್ನು ಧೈರ್ಯವಾಗಿ ಎದುರಿಸುತ್ತಾರೆ, ಅಂತಹವರನ್ನು ವಿ ರೋ ಧಿಸುತ್ತಾರೆ. ಹೀಗೆ ಧೈರ್ಯ ಮತ್ತು ದಿಟ್ಟತನದಿಂದ ರಿಯಲ್ ಲೈಫ್ ಎಲ್ಲೂ ಸದ್ದು ಮಾಡಿರುವ ನಟಿ ವರಲಕ್ಷ್ಮಿ ಶರತ್ ಕುಮಾರ್ (Valalakshmi Sharat Kumar).

ಇವರು ದಕ್ಷಿಣ ಸಿನಿಮಾ ರಂಗದ ಖ್ಯಾತ ನಟ ಶರತ್ ಕುಮಾರ್(Sharath Kumar) ಅವರ ಮಗಳು. ತಮಿಳು, ತೆಲುಗು ಸಿನಿಮಾಗಳಲ್ಲಿ ಈಗಾಗಲೇ ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ವರಲಕ್ಷ್ಮಿ ಅವರು ಕನ್ನಡದ ಸಿನಿ ಪ್ರೇಮಿಗಳಿಗೂ ಸಹಾ ಚಿರಪರಿಚಿತ.

ವರಲಕ್ಷ್ಮಿ ಶರತ್ ಕುಮಾರ್ ಅವರು ಕನ್ನಡದಲ್ಲಿ ರಾಜಕುಮಾರ, ಜೇಮ್ಸ್, ಸೀತಾರಾಮ ಕಲ್ಯಾಣ, ಮೈನಾ ಸಿನಿಮಾಗಳಲ್ಲಿ ನಟಿಸಿ ಇಲ್ಲಿನವರಿಗೆ ಚಿರ ಪರಿಚಿತ ಎನಿಸಿಕೊಂಡಿದ್ದಾರೆ. ಕನ್ನಡ ಸಿನಿ ಪ್ರೇಮಿಗಳ ಮನಸ್ಸನ್ನು ಸಹಾ ಗೆದ್ದು, ಜನರ ಅಭಿಮಾನ ತನ್ನದಾಗಿಸಿಕೊಂಡಿದ್ದಾರೆ.

ತಮ್ಮ ತಂದೆಯ ಹಾದಿಯಲ್ಲೇ ನಡೆದಿರುವ ವರಲಕ್ಷ್ಮಿ ಅವರು ವೈವಿದ್ಯಮಯ ಪಾತ್ರಗಳಿಗೆ, ಪವರ್ ಫುಲ್ ವಿಲನ್ ಪಾತ್ರಗಳಿಗೆ ಜೀವ ತುಂಬಿ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಕೆಲವು ಪಾತ್ರಗಳಿಗೆ ತಮಿಳು, ತೆಲುಗಿನಲ್ಲಿ ಕೆಲವು ನಿರ್ದೇಶಕರ ಮೊದಲ ಆಯ್ಕೆ ವರಲಕ್ಷ್ಮಿ ಅವರೇ ಆಗಿದ್ದಾರೆ ಎನ್ನುವುದು ಸತ್ಯ.

ನಟಿ ತೆರೆಯ ಮೇಲೆ ಮಾತ್ರವೇ ಅಲ್ಲ, ತಮ್ಮ ರಿಯಲ್ ಲೈಫ್ ನಲ್ಲೂ ಧೈರ್ಯವಂತೆ. ನಟಿ ವರಲಕ್ಷ್ಮಿ ಅವರ ತಂದೆ ಶರತ್ ಕುಮಾರ್ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಗಳ ಕುರಿತಾಗಿ, ಅವರ ಧೈರ್ಯದ ಕುರಿತಾಗಿ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ.

ಒಂದು ಸಲ ಶರತ್ ಕುಮಾರ್ ಅವರಿಗೆ ಪೋಲಿಸ್ ಠಾಣೆಯಿಂದ ಕರೆ ಬಂದಿತಂತೆ. ಬೇಗ ಠಾಣೆಗೆ ಬನ್ನಿ ನಿಮ್ಮ ಮಗಳು ಠಾಣೆಯಲ್ಲಿದ್ದಾರೆಂದು ಹೇಳಿದಾಗ ನಟ ಏನಾಯಿತೋ ಎಂದು ಗಾಬರಿಯಾಗಿ ಬಹಳ ಆತುರಾತುರವಾಗಿ ಠಾಣೆಯನ್ನು ತಲುಪಿದರಂತೆ.

ಠಾಣೆಗೆ ಹೋದ ಶರತ್ ಕುಮಾರ್ ಅವರಿಗೆ ತಮ್ಮ ಮಗಳು ಇಬ್ಬರು ಹುಡುಗರಿಗೆ ಬುದ್ಧಿ ಕಲಿಸಿದ ವಿಚಾರ ತಿಳಿದಿದೆ. ವರಲಕ್ಷ್ಮಿ ಅವರು ಕಾರು ಚಾಲನೆ ಮಾಡುವಾಗ ಬೈಕ್ ನಲ್ಲಿ ಬಂದ ಯುವಕರು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದರಂತೆ.

ಈ ವೇಳೆ ಜಗಳ ನಡೆದಿದ್ದು, ವರಲಕ್ಷ್ಮಿ ಅವರು ಇಬ್ಬರೂ ಹುಡುಗರಿಗೂ ಒಂಟಿಯಾಗಿಯೇ ಹೊಡೆದಿದ್ದರಂತೆ. ಅಲ್ಲದೇ ವರಲಕ್ಷ್ಮಿ ಅವರ ಕಾರ್ಯಕ್ಕೆ ಅಲ್ಲಿದ್ದ ಜನರಿದ್ದ ಸಹಾ ಮೆಚ್ಚುಗೆ ವ್ಯಕ್ತವಾಗಿತ್ತು ಎಂದು ಶರತ್ ಕುಮಾರ್ ಹೇಳಿದ್ದಾರೆ.

ತಮಿಳು ಸಿನಿಮಾ ರಂಗದ ಮೂಲಕ ಚಿತ್ರ ಜಗತ್ತಿನ ಪಯಣವನ್ನು ಆರಂಭಿಸಿದ ವರಲಕ್ಷ್ಮಿ ಅವರು ಇಂದು ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು ಮಿಂಚುತ್ತಿದ್ದಾರೆ.

Leave a Comment