ಕನ್ನಡ ಚಿತ್ರರಂಗದ ಕನಸುಗಾರ ಎಂದೇ ಹೆಸರಾದ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಕುರಿತಾಗಿ ಒಂದು ಸುದ್ದಿ ಇತ್ತೀಚಿಗೆ ದೊಡ್ಡ ಸದ್ದು ಮಾಡಿತ್ತು. ನಟ ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿ ತಮ್ಮ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ಹೋಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಅಲ್ಲದೇ ಈ ವಿಚಾರವಾಗಿ ರವಿಚಂದ್ರನ್ (Ravichandran) ಅವರ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅಭಿಮಾನಿಗಳು ಬಹುಶಃ ಈ ವಿಚಾರ ನಿಜವೇ ಇರಬಹುದು ಎಂದು ಬೇಸರಪಟ್ಟುಕೊಂಡಿದ್ದರು. ಆದರೆ ಅನಂತರ ಈ ವಿಚಾರದಲ್ಲಿ ಯಾವುದೇ ಹುರುಳಿಲ್ಲ, ಇದೊಂದು ಗಾಸಿಪ್ ಮಾತ್ರವೇ ಎನ್ನುವುದು ಸಹಾ ಗೊತ್ತಾಗಿತ್ತು.
ಈಗ ಇವೆಲ್ಲವುಗಳ ಬೆನ್ನಲ್ಲೇ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ (Manoranjan) ಅವರು ಈ ವಿಚಾರದ ಬಗ್ಗೆ ಇನ್ನಷ್ಟು ಸ್ಪಷ್ಟನೆ ಯನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ, ನಮಗೆ ಮನೆ ಮಾರೋ ಪರಿಸ್ಥಿತಿ ಇನ್ನೂ ಬಂದಿಲ್ಲ, ಮುಂದೆ ಬರೋದು ಇಲ್ಲ. ನಮ್ಮ ತಂದೆ ಸೂಪರ್ ಸ್ಟಾರ್ ಅವರು ಯಾವಾಗಲೂ ಸಹಾ ಸೂಪರ್ರೇ. ಸಾಮಾಜಿಕ ಮಾದ್ಯಮಗಳು ಈಗ ಬಹಳ ಪ್ರಭಾವಶಾಲಿಯಾಗಿದ್ದು, ಯಾವುದೇ ಸಣ್ಣ ವಿಚಾರವೇ ಆಗಿರಲಿ ಅದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಇಲ್ಲೂ ಸಹಾ ಅದೇ ಆಗಿದೆ ಎಂದಿದ್ದಾರೆ.
ಈ ಮಾತುಗಳನ್ನು ಹೇಳುವ ಮೂಲಕ ಮನೋರಂಜನ್ (Manoranjan) ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮನೆ ಮಾರಿದ್ದಾರೆ, ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ಕಾರಣದಿಂದಲೇ ಬಾಡಿಗೆ ಮನೆಗೆ ಬಂದಿದ್ದಾರೆ ಎಂದು ಏನೆಲ್ಲಾ ಸುದ್ದಿಗಳು ಹರಡಿದ್ದವೋ ಅವೆಲ್ಲವುಗಳಿಗೂ ಸಹಾ ತೆರೆಯನ್ನು ಎಳೆದಿದ್ದಾರೆ. ಮನೋರಂಜನ್ ಅವರ ಮಾತು ಕೇಳಿದ ಮೇಲೆ ಕ್ರೇಜಿಸ್ಟಾರ್ (crazy star) ಅವರ ಅಭಿಮಾನಿಗಳಿಗೂ ಸಹಾ ಮನಸ್ಸಿನಲ್ಲಿ ಮೂಡಿದ್ದ ಅನುಮಾನ ಮತ್ತು ಬೇಸರ ಕೊನೆಯಾಗಿದೆ. ಹರಡಿದ್ದ ಗಾಸಿಪ್ ಗೆ ಈಗ ಸ್ಪಷ್ಟನೆ ದೊರೆತಂತೆ ಆಗಿದೆ.