ರಾಜಸ್ಥಾನದ ಕರೌಲಿಯಲ್ಲಿ ನಡೆದಂತಹ ಹಿಂ ಸಾ ಚಾರದ ಘಟನೆಯ ಸುದ್ದಿಯೊಂದು ಕೆಲವೇ ದಿನಗಳ ಹಿಂದೆ ದೇಶ ವ್ಯಾಪಿಯಾಗಿ ದೊಡ್ಡ ಸುದ್ದಿಯಾಗಿತ್ತು. ಈ ವೇಳೆ ಈ ಸುದ್ದಿಗಳ ನಡುವೆಯೆ ಆ ಸಂದರ್ಭದಲ್ಲಿ, ಹಿಂ ಸಾ ಚಾ ರ ನಡೆದಂತಹ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಪೋಲಿಸ್ ಕಾನ್ಸ್ಟೇಬಲ್ ಒಬ್ಬರು ಮೆರೆದಂತಹ ಧೈರ್ಯ ಹಾಗೂ ಸಾಹಸದ ಘಟನೆಯೊಂದು ವರದಿಯಾಗಿ, ಕಾನ್ಸ್ಟೇಬಲ್ ನೇತ್ರೇಶ್ ಶರ್ಮಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ದೊಡ್ಡ ಸದ್ದು ಮಾಡಿದ್ದಲ್ಲದೇ, ದೇಶದೆಲ್ಲೆಡೆಯಿಂದ ಮೆಚ್ಚುಗೆಗಳು ಸಹಾ ಹರಿದು ಬಂದಿದ್ದವು.
ರಾಜಸ್ಥಾನದ ಕರೌಲಿಯಲ್ಲಿ ಹಿಂದೂ ನೂತನ ಸಂವತ್ಸರದ ಸಂಭ್ರಮದ ವೇಳೆ ಕೋ ಮು ಗ ಲ ಭೆಯು ಭುಗಿಲೆದ್ದ ಕಾರಣ ಅದು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಈ ವೇಳೆಯಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಾಕಲಾಗಿತ್ತು. ಜನರು ಬೆಂಕಿಯಲ್ಲಿ ಸಿಲುಕಿ ಪ್ರಾಣ ರಕ್ಷಣೆಗೆ ಪರದಾಡುತ್ತಿದ್ದರು. ಆಗಲೇ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯರು ಹಾಗೂ ಮಗುವೊಂದನ್ನು ರಕ್ಷಿಸಲು ಮುಂದಾಗಿದ್ದ ನೇತ್ರೇಶ್ ಶರ್ಮಾ ಅವರು ಬೆಂಕಿಯ ನಡುವೆಯೇ ಅವರನ್ನು ಕಾಪಾಡಿ, ಮಗುವನ್ನು ಎತ್ತಿಕೊಂಡು ಬರುವಾಗ ಕ್ಯಾಮೆರಾಗಳು ಅವರ ಈ ಸಾಹಸವನ್ನು ಸೆರೆ ಹಿಡಿದಿದ್ದವು.
ಹೀಗೆ ವೈರಲ್ ಆದ ಫೋಟೋವನ್ನು ನೋಡಿ ಅಸಂಖ್ಯಾತ ಜನರು ಮೆಚ್ಚುಗೆ ಗಳನ್ನು ಹರಿಸುವಾಗಲೇ ನೆಟ್ಟಿಗರೊಬ್ಬರು ಆಧುನಿಕ ತಂತ್ರಜ್ಞಾನದ ಕಲೆಯ ಜಾದೂಗಾರ ಕರಣ್ ಆಚಾರ್ಯ ಅವರಿಗೆ ಈ ಫೋಟೋವನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ, ಕರಣ್ ಸರ್, ಈ ಕಾನ್ಸ್ಟೇಬಲ್ ಅವರಿಗೆ ಹೊಗಳಿಕೆ ನೀಡಲೇಬೇಕು, ದಯವಿಟ್ಟು ಈ ಫೋಟೋವನ್ನು ರಕ್ಷಕ ಹನುಮಾನ್ ರೂಪದಲ್ಲಿ ಚಿತ್ರಿಸಿ ಎನ್ನುವ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ನೆಟ್ಟಿಗರೊಬ್ಬರು ಮಾಡಿದ ಮನವಿಗೆ ಸ್ಪಂದಿಸಿದ ಕರಣ್ ಆಚಾರ್ಯ ಅವರು ಸಹಾ ಮನವಿಗೆ ತಕ್ಕ ಹಾಗೆ ಬಹಳ ಅಂದವಾದ ಚಿತ್ರವನ್ನು ರಚನೆ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಕಾನ್ಸ್ಟೇಬಲ್ ನೇತ್ರೇಶ್ ಅವರನ್ನು ಹನುಮಾನ್ ರೂಪಕ್ಕೆ ಪರಿವರ್ತಿಸಿ ಅದ್ಭುತವಾದ ಒಂದು ಕಲಾಕೃತಿಯನ್ನು ರಚಿಸಿದ್ದು, ಕರಣ್ ಆಚಾರ್ಯ ಅವರ ಈ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಕರಣ್ ಆಚಾರ್ಯ ಅವರನ್ನು ಎಂದಿನಂತೆ ನಿಮ್ಮ ಕಲೆ ಅದ್ಭುತ ಎಂದು ಹೊಗಳಿದ್ದಾರೆ.