ಮೆಕ್ಕಾ ಯಾತ್ರೆಗೆ ಹಾರಿದರಾ ಇಳಯರಾಜ ಪುತ್ರ ಯುವನ್ ಶಂಕರ್? ವೈರಲ್ ಆಗ್ತಿದೆ ಅವರ ಹೊಸ ಫೋಟೋ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರ , ತಮಿಳು ಸಿನಿಮಾಗಳ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ಮೆಕ್ಕಾ ಯಾತ್ರೆಗೆ ತೆರಳಿದ್ದಾರೆನ್ನುವ ಸುದ್ದಿಯಾಗಿದೆ. ಅವರು ಮೆಕ್ಕಾ ಯಾತ್ರೆಗೆ ಹೊರಟಿರುವ ಯಾತ್ರಿಕರ ಉಡುಪಿನಲ್ಲಿ ವಿಮಾನದಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌. ಆದರೆ ಈ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿಯನ್ನು ಯುವಾನ್ ಶಂಕರ್ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿಲ್ಲ. ಆದ್ದರಿಂದಲೇ ವೈರಲ್ ಆಗಿರುವ ಫೋಟೋ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯುವಾನ್ ಶಂಕರ್ ಅವರು ತಾವು ಇಸ್ಲಾಂ ಗೆ ಮತಾಂತರಗೊಂಡ ವಿಚಾರವನ್ನು 2014 ರಲ್ಲಿ ಬಹಿರಂಗ ಪಡಿಸಿದ್ದರು.

ಯುವಾನ್ ತಾನು ಇಸ್ಲಾಂ ಗೆ ಮತಾಂತರಗೊಂಡ ವಿಚಾರವನ್ನು ಹೊರಗಿಟ್ಟಾಗ ಅವರ ತಂದೆ ಸಂಗೀತ ನಿರ್ದೇಶಕ ಮತ್ತು ಅವರ ಅಭಿಮಾನಿಗಳಿಗೆ ಅದು ಅಚ್ಚರಿ ಯನ್ನು ಮೂಡಿಸಿತ್ತು. ಇನ್ನು ಸಂದರ್ಶನಗಳ ವೇಳೆಯಲ್ಲಿ ಸಹಾ ಯುವಾನ್ ಖುರಾನ್ ಓದುವುದರಿಂದ ಅದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಎಂದು ಹೇಳಿಕೊಂಡಿದ್ದರು. ಇದಲ್ಲದೇ ಒಮ್ಮೆ ಯುವಾನ್ ಅವರ ಪತ್ನಿ ಸಫ್ರೂನ್ ನಿಸಾರ್ ಅವರು ಇನ್ಸ್ಟಾಗ್ರಾಂ ನಲ್ಲಿ ಪ್ರಶ್ನೋತ್ತರ ಅವಧಿಯನ್ನು ನಡೆಸಿದ್ದರು. ಆಗ ಅವರನ್ನು ಅನೇಕರು ಯುವಾನ್ ಇಸ್ಲಾಂ ಗೆ ಮತಾಂತರಗೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದರು.

ಈ ವೇಳೆ ಆಕೆ ಯುವಾನ್ ಇಸ್ಲಾಂ ಗೆ ಮತಾಂತರಗೊಳ್ಳಲು ಕಾರಣವಾದ ಘಟನೆಯ ಬಗ್ಗೆ ತಿಳಿಸಿದ್ದರು. ಅವರು ಪೋಸ್ಟ್ ಮಾಡಿದ ವೀಡಿಯೋದಲ್ಲಿ, ಯುವಾನ್ ಏಕೆ ಕುರಾನ್ ಓದಲು ಆರಂಭಿಸಿದರು ಎನ್ನುವುದನ್ನು ಸಹಾ ವಿವರಿಸಿದ್ದರು. ಯುವಾನ್ ಅವರು ತಮ್ಮ ಜೀವನದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ತನ್ನ ಜೀವನದ ತಿರುವಿನ ಬಗ್ಗೆ ಅನೇಕ ಜನರು ಕೇಳಿದ್ದಾರೆ. ಆದರೆ ಜೀವನವೊಂದು ಸುದೀರ್ಘ ಪ್ರಯಾಣ ಆಗಿರುವುದರಿಂದ ಯಾವುದೇ ಒಂದು ಸಂದರ್ಭದ ಬಗ್ಗೆ ಹೇಳಲಾಗುವುದಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದರು.

ಯುವಾನ್ ತಾನು ತಾಯಿ ಜೀವಂತವಾಗಿದ್ದಾಗ ಅವರ ಜೊತೆಗೆ ಜಗತ್ತು ಕೊನೆಗೊಳ್ಳಲಿದೆಯೇ ಎನ್ನುವುದನ್ನು ಚರ್ಚಿಸುತ್ತಿದ್ದೆ. ಅಲ್ಲದೇ 2012 ರಲ್ಲಿ ಅಪೋಕ್ಯಾಲಿಪ್ಸ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ತಾನು ಕುರಾನ್ ಓದಲು ಪ್ರಾರಂಭಿಸಿದೆ ಎನ್ನುವ ಮಾತನ್ನು ಸಹಾ ಹೇಳಿದ್ದರು. ಯುವಾನ್ ತಮ್ಮ ಹದಿನಾರನೇ ವಯಸ್ಸಿನಲ್ಲಿ ತಮಿಳಿನ ಅರವಿಂದನ್ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಸಿನಿ ರಂಗಕ್ಕೆ ಅಡಿಯಿಟ್ಟರು. ಈವರೆಗೆ ಅವರು ನೂರಕ್ಕಿಂತಲೂ ಅಧಿಕ ಸಿನಿಮಾಗಳಲ್ಲಿ ಕೆಲಸವನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ.

Leave a Comment