ಕನ್ನಡದಲ್ಲಿ ನಾಯಕಿಯಾಗಲು ಹೊರಟಿದ್ದ ತೆಲುಗಿನ ಗಾಯಕಿ ಮಂಗ್ಲಿ ಕನಸಿಗೆ ಬಿತ್ತಾ ಕೊಡಲಿ ಪೆಟ್ಟು?

Written by Soma Shekar

Published on:

---Join Our Channel---

ತೆಲುಗು ಸಿನಿಮಾಗಳಲ್ಲಿ ಹಾಡುಗಳನ್ನು ಹಾಡುತ್ತಾ ದೊಡ್ಡಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿರುವ ಗಾಯಕಿ ಮಂಗ್ಲಿ(Singer Mangli) ಕನ್ನಡ ಸಿನಿಮಾಗಳಲ್ಲೂ ಹಾಡುಗಳನ್ನು ಹಾಡಿ ಈಗಾಗಲೇ ಕರ್ನಾಟಕದಲ್ಲಿ ಕೂಡಾ‌ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಗಾಯಕಿಯಾಗಿರುವ ಮಂಗ್ಲಿ ಕನ್ನಡ ಸಿನಿಮಾವೊಂದರ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಬೇಕಾಗಿತ್ತು. ಆದರೆ ಈಗ ನಾಯಕಿಯಾಗುವ ಗಾಯಕಿಯ ಕನಸಿಗೆ ಅಡೆತಡೆಗಳು ಎದುರಾದಂತೆ ಕಾಣುತ್ತಿವೆ. ಹೌದು, ನಟ ನಿರ್ದೇಶಕ ನಾಗಶೇಖರ್ ನಾಯಕನಾಗಿ, ನಟಿಸುವ ಪಾದರಾಯ(Padaraya) ಚಿತ್ರಕ್ಕೆ ಮಂಗ್ಲಿ ಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.

ಈ ವಿಷಯವನ್ನು ಚಿತ್ರತಂಡ ಮಾತ್ರವೇ ಅಲ್ಲದೇ ಗಾಯಕಿ ಮಂಗ್ಲಿಯೂ(Mangli Heroin) ಹೇಳಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಬೆಳವಣಿಗೆಗಳ ಕಾರಣದಿಂದ ಮಂಗ್ಲಿ ನಟನೆಯ ಮೊದಲ ಸಿನಿಮಾ ನಿಂತು ಹೋಗಿದೆ. ನಿರ್ದೇಶಕ ಡಿಜೆ ಚಕ್ರವರ್ತಿ ನಾಗಶೇಖರ್(Naga Shekhar) ಅವರ ಮೇಲೆ ಸಾಕಷ್ಟು ಆ ರೋ ಪ ಗಳನ್ನು ಮಾಡಿದ್ದು, ಅವರ ಜೊತೆ ತಾನು ಕೆಲಸ ಮಾಡುವುದಿಲ್ಲ ಎಂದು ಘೋಷಣೆಯನ್ನು ಮಾಡಿದ್ದಾರೆ. ಅಲ್ಲದೇ ಮಾಧ್ಯಮ ಒಂದಕ್ಕೆ ಅವರು ತಾನು ಪಾದರಾಯ ಸಿನಿಮಾವನ್ನು ಬೇರೆಯವರ ಜೊತೆ ಮಾಡುವುದಾಗಿ ಹೇಳಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ: ರಾತ್ರಿ ಹೀರೋಗಳ ರೂಮ್ ಗೆ: ಬಾಲಿವುಡ್ ಮೇಲೆ ಭುಗಿಲೆದ್ದ ಕಂಗನಾ ಕೋಪ, ತಲೆಗಳು ಉರುಳಲಿವೆ ಎಂದ ನಟಿ

ಈಗ ಪಾದರಾಯ ಸಿನಿಮಾವನ್ನು ನಾಗಶೇಖರ್ ಜೊತೆಯಲ್ಲಿ ಮಾಡುವುದಿಲ್ಲ ಎಂದು ಹೇಳಿದ ನಂತರ ಸಿನಿಮಾದ ನಾಯಕಿ ಮಂಗ್ಲಿ ಕುರಿತಾಗಿ ಯಾವುದೇ ನಿರ್ಧಾರವನ್ನು ಇನ್ನು ತೆಗೆದುಕೊಂಡಿಲ್ಲ ಎನ್ನಲಾಗಿದ್ದು, ಚಿತ್ರದ ನಿರ್ಮಾಪಕರು ಬದಲಾಗಲಿದ್ದು ಈ ಸಿನಿಮಾಕ್ಕೆ ನಾಯಕ ಯಾರಾಗಲಿದ್ದಾರೆ ಎನ್ನುವ ವಿಷಯದ ಮೇಲೆ ನಾಯಕಿ ಯಾರು ಎನ್ನುವುದು ನಿರ್ಧಾರವಾಗಲಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ಪಾದರಾಯ ಚಿತ್ರದ ನಿರ್ಮಾಪಕರು ಮತ್ತು ನಾಯಕ ಬದಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಂಗ್ಲಿ ಈ ಸಿನಿಮಾದಲ್ಲಿ ಇರುತ್ತಾರೋ? ಇಲ್ಲವೋ? ಎನ್ನುವುದನ್ನು ಸದ್ಯಕ್ಕಂತೂ ಹೇಳಲು ಸಾಧ್ಯವಿಲ್ಲ.

ತೆಲುಗಿನಲ್ಲಿ ಗಾಯಕಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಮಂಗ್ಲಿ, ಕನ್ನಡದಲ್ಲಿ ಸೂಪರ್ ಹಿಟ್ ಹಾಡುಗಳಿಗೆ ದನಿಯನ್ನು ನೀಡಿದರು. ಕನ್ನಡ ಸಿನಿಮಾ ರಂಗದಲ್ಲಿ ನಾಯಕಿಯಾಗಿ ಚಿತ್ರೋದ್ಯಮ ಕ್ಕೆ ಅಡಿ ಇಡುವ ವಿಷಯ ಅವರಿಗೆ ಬಹಳ ಖುಷಿಯನ್ನು ನೀಡಿತ್ತು. ಆದರೆ ಈಗ ಕೆಲವೇ ದಿನಗಳ ಹಿಂದೆಯಷ್ಟೇ ಚಕ್ರವರ್ತಿ ಚಂದ್ರಚೂಡ್(Chakravarti Chandrachud) ಈ ಸಿನಿಮಾದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರವನ್ನು ಬರೆದುಕೊಂಡು ನಾಗಶೇಖರ್ ಮೇಲೆ ಒಂದಷ್ಟು ಆ ರೋ ಪ ಗಳನ್ನು ಮಾಡಿದ್ದು, ಸಿನಿಮಾ ನಿಲ್ಲುವುದಿಲ್ಲ ಆದರೆ ಬೇರೆ ನಿರ್ಮಾಪಕರೊಡನೆ ಮಾಡುತ್ತೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Leave a Comment