ಅಂದಿನ ಸ್ಟಾರ್ ನಟಿಗೆ ಇದೇನಾಯ್ತು? ಭಾನುಪ್ರಿಯ ಕಣ್ಣೀರ ಕಥೆ ಕೇಳಿ ಭಾವುಕರಾದ ಅಭಿಮಾನಿಗಳು

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ(South Cinema) ತೊಂಬತ್ತರ ದಶಕದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ ನಟಿಯರ ಹೆಸರು ಬಂದಾಗ ಅಲ್ಲಿ ನಟಿ ಭಾನುಪ್ರಿಯ(Bhanu Priya) ಹೆಸರು ಇದ್ದೇ ಇರುತ್ತದೆ. ನಟಿ ಭಾನುಪ್ರಿಯ ಒಬ್ಬ ಅದ್ಭುತ ಕಲಾವಿದೆಯಾಗಿ, ಡ್ಯಾನ್ಸರ್ ಆಗಿ ದೊಡ್ಡ ಹೆಸರನ್ನು ಮಾಡಿದ್ದರು. ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್(Vishanu Vardhan), ರವಿಚಂದ್ರನ್ ರಂತಹ(Ravi Chandran) ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು ಕನ್ನಡ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದವರು ಭಾನುಪ್ರಿಯ. ತೆಲುಗು, ತಮಿಳಿನಲ್ಲಿ ನಟಿ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ ಭಾನುಪ್ರಿಯ ಅವರು.

ಭಾನುಪ್ರಿಯ(Bhanu Priya Actress) ದಕ್ಷಿಣದ ಸಿನಿಮಾಗಳು ಮಾತ್ರವೇ ಅಲ್ಲದೇ ಹಿಂದಿಯಲ್ಲಿ ಸಹಾ ನಟಿಸಿ ಪಂಚಭಾಷಾ ತಾರೆಯಾಗಿ ಮಿಂಚಿದವರು. ಈ ನಟಿಯನ್ನು ಸಿನಿ ಪ್ರೇಮಿಗಳು ಎಂದೂ ಮರೆಯಲಾರರು. ತೆಲುಗಿನಲ್ಲಿ ನಟಿ ಮೆಗಾಸ್ಟಾರ್ ಚಿರಂಜೀವಿ(Mega star Chiranjeevi) ಮತ್ತು ನಟ‌ ವೆಂಕಟೇಶ್(Venkatesh) ಅವರ ಜೊತೆ ನಟಿಸಿರುವ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇಂತಹ ನಟಿಯ ಜೀವನದ ಕುರಿತಾಗಿ ಈಗ ಹೊಸ ವಿಚಾರ ಹೊರಗೆ ಬಂದಿದ್ದು, ಈ ವಿಷಯವನ್ನು ತಿಳಿದ ನಟಿಯ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರ ಪಡುತ್ತಿದ್ದಾರೆ.

ಭಾನುಪ್ರಿಯ(Bhanu Priya heroin) ನಾಯಕಿಯಾಗಿ ಹೆಸರು ಮಾಡಿದ ನಂತರ, ಪೋಷಕ ಪಾತ್ರಗಳಲ್ಲಿ ಸಹಾ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಅಷ್ಟೆಲ್ಲಾ ಬೇಡಿಕೆಯಿದ್ದ, ಪವರ್ ಫುಲ್ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟಿಯು ಇತ್ತೀಚಿನ ವರ್ಷಗಳಲ್ಲಿ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಟಿಗೆ ಅವಕಾಶಗಳು ದಕ್ಕುತ್ತಿಲ್ಲವೇ? ಅವರೇಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ? ಎನ್ನುವ ಅನುಮಾನಗಳು ಅವರ ಅಭಿಮಾನಿಗಳನ್ನು ಸಹಾ ಕಾಡುತ್ತಿತ್ತು.

ಈಗ ಎಲ್ಲಾ ಅನುಮಾನಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಈ ವಿಚಾರ ಸುದ್ದಿಯಾಗಿ ಎಲ್ಲರಿಗೂ ಶಾ ಕ್ ನೀಡಿದೆ. ಹೌದು, ಹೊಸ ಸುದ್ದಿಗಳ ಪ್ರಕಾರ ನಟಿ ಭಾನುಪ್ರಿಯ ಅವರು ನೆನಪಿನ ಶಕ್ತಿ ಕಡಿಮೆಯಾಗುತ್ತಿರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಮರೆವಿನ ಕಾರಣದಿಂದಾಗಿ ಸಿನಿಮಾಗಳಲ್ಲಿ ಡೈಲಾಗ್ ಹೇಳುವುದಕ್ಕೂ ಆಗುತ್ತಿಲ್ಲ ಎಂದು ನಟಿ ತಮ್ಮ ಅಸಹಾಯಕತೆ ಬಗ್ಗೆ ತೆಲುಗು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಟಿ ಭಾನುಪ್ರಿಯ ಅವರ ಪತಿ ಆದರ್ಶ್ ಕೌಶಲ್ ಅವರು ಹೃ ದ ಯಾ ಘಾ ತದಿಂದ ನಿಧನರಾದ ಮೇಲೆ ನಟಿಯು ನೋ ವು ಮತ್ತು ಖಿ ನ್ನ ತೆಯಿಂದ ಬಳಲುತ್ತಿದ್ದು, ಅದರಿಂದಲೇ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ತನ್ನ ಡ್ಯಾನ್ಸ್ ಮೂಲಕವೇ ಹೆಸರಾಗಿದ್ದ ನಟಿಯು ಇಂದು ತನಗೆ ಆ ಡ್ಯಾನ್ಸ್ ಸ್ಟೆಪ್ ಗಳನ್ನು ಕೂಡಾ ಮರೆತಿದ್ದೇನೆ ಎಂದಿದ್ದು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.

Leave a Comment