ತೆಲುಗು ಚಿತ್ರರಂಗದಲ್ಲಿ ನಟಿ ಕೃತಿ ಶೆಟ್ಟಿಗೆ ಇರುವ ಕ್ರೇಜ್ ಏನು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೃತಿ ಶೆಟ್ಟಿ ಟಾಲಿವುಡ್ ಸಿನಿ ಅಭಿಮಾನಿಗಳಿಗೆ ಬೇಬಮ್ಮ ಎಂದೇ ಪ್ರೀತಿ ಪಾತ್ರರಾಗಿದ್ದಾರೆ. ಹೌದು, ಕೃತಿ ತಮ್ಮ ಮೊದಲ ಉಪ್ಪೆನ ಮೂಲಕವೇ ಸ್ಟಾರ್ ಹೀರೋಯಿನ್ ಆದರು. ಸಾಗರದ ಅಲೆಯಂತೆ ಬಂದು ತೆಲುಗು ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದಾರೆ ಕೃತಿ ಶೆಟ್ಟಿ. ಉಪ್ಪೆನಾ ಸಿನಿಮಾದ ನಂತರ ಕೃತಿ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಕೃತಿ ಈಗಾಗಲೇ ನಾನಿ ಜೊತೆ ಶ್ಯಾಮ್ ಸಿಂಗ್ ರಾಯ್ ಮತ್ತು ನಾಗಚೈತನ್ಯ ಜೊತೆಗೆ ಬಂಗಾರರಾಜು ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಅವರು ದಿ ವಾರಿಯರ್ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ಕೃತಿ ಟಾಲಿವುಡ್ ಮಾತ್ರವಲ್ಲ, ಕಾಲಿವುಡ್ ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್ ನಲ್ಲೂ ಸಹಾ ಬೇಡಿಕೆ ಹೆಚ್ಚಿಸಿಕೊಂಡಿರುವ ಕೃತಿಯನ್ನು ಸ್ಟಾರ್ ನಟರು ಸಹಾ ಕೃತಿಯನ್ನು ತಮ್ಮ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಮಾಡಿಕೊಳ್ಳುವ ಬೇಡಿಕೆಯನ್ನು ಇಟ್ಟಿದ್ದಾರೆನ್ನಲಾಗಿದೆ. ಈಗ ಕೃತಿ ಶೆಟ್ಟಿ ಮೇಲಿನ ಕ್ರೇಜ್ ನಿಂದಾಗಿ ತಮಿಳಿನ ಸ್ಟಾರ್ ನಟನ ಮಗ ಕೃತಿಗೆ ಬಂಪರ್ ಆಫರ್ ಅನ್ನು ನೀಡಿದ್ದಾನೆ ಎನ್ನುವ ಸುದ್ದಿಯೊಂದು ಹರಿದಾಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ.
ಸ್ಟಾರ್ ನಟನ ಪುತ್ರ, ಸ್ವತಃ ನಟ ಸಹಾ ಆಗಿರುವ ಆತ ಕೃತಿ ಶೆಟ್ಟಿಗೆ ತನ್ನ ಜನ್ಮದಿನದ ಪಾರ್ಟಿಗೆ ಬರುವಂತೆ ಬೇಡಿಕೆ ಇಟ್ಟಿದ್ದಾನೆ. ಅಷ್ಟೇ ಅಲ್ಲದೇ ನಟಿಗೆ ದೊಡ್ಡ ಮಟ್ಟದ ಹಣವನ್ನು ಸಹಾ ಆಫರ್ ನೀಡಿದ್ದಾನೆ. ಆದರೆ ನಟಿ ಕೃತಿ ಶೆಟ್ಟಿ ಆತನೊಡನೆ ಸುಮ್ಮನೆ ಸಮಸ್ಯೆ ಏಕೆ, ಅಲ್ಲದೇ ಆತನು ಹದ್ದು ಮೀರುತ್ತಿದ್ದಾನೆ ಎಂದು ಅರ್ಥ ಮಾಡಿಕೊಂಡ ಕೃತಿ ಶೆಟ್ಟಿ ಆತ ನೀಡಿದ ಆಫರ್ ಗೆ ನೋ ಎಂದಿದ್ದಾರೆ. ಸ್ಟಾರ್ ನಟ ಮಗನ ಕಾಲ್ ಕಟ್ ಮಾಡಿದ್ದಾರೆ ಕೃತಿ ಶೆಟ್ಟಿ. ಸ್ಟಾರ್ ನಟನ ಮಗನಾಗಿ ಇಂತಹ ವರ್ತನೆ ತೋರಿದ್ದಕ್ಕೆ ಕೃತಿ ಶೆಟ್ಟಿ ಶಾ ಕ್ ಆಗಿದ್ದಾರೆ ಎನ್ನಲಾಗಿದೆ.
ಸ್ಟಾರ್ ನಟನ ಮಗನಾಗಿ, ಸಾಕಷ್ಟು ಕ್ರೇಜ್ ಇರುವ ಯುವ ನಟನಾಗಿ ಇಂತಹ ವರ್ತನೆ ಸರಿಯಲ್ಲ ಅಂದು ಕೊಂಡಿದ್ದಾರೆ ಕೃತಿ. ಆದರೆ ಯುವ ನಟ ಕೊಟ್ಟ ಆಫರ್ ಗಳಿಗೆ ಒಪ್ಪಿಕೊಳ್ಳದೇ, ತನ್ನತನವನ್ನು ತಾನು ಕಾಪಾಡಿಕೊಳ್ಳುವ ಉದ್ದೇಶದಿಂದ, ತನ್ನ ವ್ಯಕ್ತಿತ್ವವನ್ನು ಕಾಪಾಡಿಕೊಂಡ ವಿಚಾರ ತಿಳಿದು ಅಭಿಮಾನಿಗಳು ನಟಿಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ವಿಚಾರವನ್ನು ನಟಿ ಇತ್ತೀಚಿಗೆ ತಮ್ಮ ವಾರಿಯರ್ ಸಿನಿಮಾ ಪ್ರಚಾರದ ವೇಳೆ ಕೃತಿ ಹೇಳಿಕೊಂಡಿದ್ದಾರೆ. ವಿಷಯ ತಿಳಿದು ಈಗ ನೆಟ್ಟಿಗರು ಸಹಾ ಕೃತಿ ಶೆಟ್ಟಿ ಯನ್ನು ಹಾಡಿ ಹೊಗಳಿದ್ದಾರೆ.