ಸೀಸನ್ ನ ಕೊನೆಯ ಕಳಪೆ ಪಟ್ಟ ರಾಕಿಗೆ: ರಾಕೇಶ್ ಕಳಪೆ ಆಗಿದಾದ್ರು ಹೇಗೆ? ಶಾಕಿಂಗ್ ಕಾರಣ ಕೊಟ್ಟ ಮನೆ ಮಂದಿ

Written by Soma Shekar

Published on:

---Join Our Channel---

ಬಿಗ್ ಬಾಸ್ (Big Boss Kannada) ಮನೆಯ ಆಟ 95 ಯಶಸ್ವಿ ದಿನಗಳನ್ನು ಪೂರ್ತಿ ಮಾಡಿ ಇದೀಗ ಗ್ರ್ಯಾಂಡ್ ಫಿನಾಲೆಯ ಕಡೆಗೆ ಗ್ರ್ಯಾಂಡ್ ಎಂಟ್ರಿ ನೀಡಲು ಸಜ್ಜಾಗಿದೆ. ರೋಚಕ ತಿರುವುಗಳೊಂದಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುವ ಬಿಗ್ ಬಾಸ್(Big Boss) ಮನೆಯ ಆಟ ಈಗ ಮತ್ತಷ್ಟು ರೋಚಕ ಮತ್ತು ಕುತೂಹಲಭರಿತವಾಗಿದೆ. ಇನ್ನು ವಾರದ ಅಂತ್ಯಕ್ಕೆ ಬಿಗ್ ಬಾಸ್ ಮನೆ ಅಡಿಯಿಟ್ಟ ಕೂಡಲೇ ನಡೆಯುವ ಪ್ರಮುಖ ಪ್ರಕ್ರಿಯೆ ಎಂದರೆ ಅದು ಮನೆಯ ಉತ್ತಮ ಮತ್ತು ಕಳಪೆ ಸದಸ್ಯನ ಆಯ್ಕೆ. ವಾರದ ಕೊನೆಗೆ ಯಾರು ಕಳಪೆ ಪಟ್ಟ ಪಡೆದು ಜೈಲು ಸೇರುತ್ತಾರೆ ಎನ್ನುವುದನ್ನು ನೋಡುವ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಅದರಲ್ಲೂ ಈಗ ಇದು ಈ ಸೀಸನ್ ನ ಕೊನೆಯ ಅತ್ಯುತ್ತಮ ಮತ್ತು ಕಳಪೆ ಸದಸ್ಯರ ಆಯ್ಕೆಯಾಗಿದೆ.

ಬಿಗ್ ಬಾಸ್(Big Boss) ಮನೆಯ ಹದಿಮೂರನೇ ವಾರದ ಆಟದಲ್ಲಿ ಬಿಗ್ ಬಾಸ್ ಸರಣಿ ಟಾಸ್ಕ್ ಗಳನ್ನು ನೀಡಿದ್ದರು. ಇಲ್ಲಿ ಟಾಸ್ಕ್ ಗಳನ್ನು ಸ್ಪರ್ಧಿಗಳು ಎಷ್ಟು ಬೇಗ ಮುಗಿಸುತ್ತಾರೆ ಎನ್ನುವ ಆಧಾರದಲ್ಲಿ ಅಂಕಗಳನ್ನು ನೀಡಲಾಗಿತ್ತು. ಟಾಸ್ಕ್ ಗಳಲ್ಲಿ ಆರ್ಯವರ್ಧನ್ ಗುರೂಜಿ(Aryavardhan Guruji) ಅವರು ನೀಡಿದ ಪ್ರದರ್ಶನಕ್ಕೆ ಅವರಿಗೆ ಬೆಸ್ಟ್ ಫರ್ಫಾರ್ಮೆನ್ಸ್ ಮೆಡಲ್ ನೀಡಲಾಗಿದೆ. ಇನ್ನು ಒಂದು ಆಟವನ್ನು ಪೂರ್ತಿ ಮಾಡದೇ ಗಿವ್ ಅಪ್ ಮಾಡಿದ ರಾಕೇಶ್ ಅಡಿಗ(Rakesh Adiga) ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಕಳಪೆ ಪಟ್ಟ ಪಡೆದ ರಾಕೇಶ್ ಜೈಲಿಗೆ ತೆರಳಿದ್ದಾರೆ.

ಇದನ್ನೂ ಓದಿ : ಡಬಲ್ ಎಲಿಮಿನೇಷನ್ ಶಾಕ್? ಮನೇಲಿ ಉಳಿಯೋದು ಯಾರು? ಹೊರಗೆ ಹೋಗೋದು ಯಾರು?

ಹೌದು, ಟಾಸ್ಕ್ ಒಂದರಲ್ಲಿ ರಾಕೇಶ್ ಅಡಿಗ (Rakesh Adiga) ಗಿವ್ ಅಪ್ ಮಾಡಿದ್ದರು. ಇದರ ಆಧಾರವಾಗಿಯೇ ಬಿಗ್ ಬಾಸ್ ಮನೆ ಮಂದಿ ರಾಕೇಶ್ ಆಡಿಗ ಅವರಿಗೆ ಕಳಪೆ ಪಟ್ಟವನ್ನು ನೀಡಿದ್ದಾರೆ. ಟಾಸ್ಕ್ ಬಹಳ ಚೆನ್ನಾಗಿ ಮಾಡಿದ ಗುರೂಜಿ ಪರವಾಗಿ ಅಮೂಲ್ಯ ಗೌಡ, ಅರುಣ್ ಸಾಗರ್, ದಿವ್ಯ ಉರುಡುಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ ವೋಟು ಮಾಡಿದರು. ಹೀಗೆ ಮನೆ ಮಂದಿಯ ವೋಟು ಪಡೆದ ಗುರೂಜಿ ಅತ್ಯತ್ತಮ ಆಟಗಾರನಾಗಿ ಈ ವಾರ ಮನೆಯಲ್ಲಿ ಮಿಂಚಿದ್ದಾರೆ.

ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್ ನಡೆಯಲಿದೆ ಎನ್ನಲಾಗುತ್ತಿದ್ದು, ಮನೆಯಿಂದ ಇಬ್ಬರು ಪ್ರಬಲ ಆಟಗಾರರು ಹೊರಬೀಳುವ ಸಾಧ್ಯತೆಗಳು ಇದೆ. ನವೀನರು ಮತ್ತು ಪ್ರವೀಣರು ಎನ್ನುವ ಹೊಸ ಕಾನ್ಸೆಪ್ಟ್ ನಲ್ಲಿ ಆರಂಭವಾದ ಈ ಬಾರಿಯ ಸೀಸನ್ ಅಂದರೆ ಬಿಗ್ ಬಾಸ್ ಸೀಸನ್(Big Boss Kannada) ಒಂಬತ್ತು ಕೊನೆಯ ಹಂತವನ್ನು ಬಂದು ತಲುಪಿದ್ದು, ಮನೆಯಲ್ಲಿ ಎಂಟು ಜನ ಸದಸ್ಯರು ಇರುವ ಕಾರಣ ಈ ವಾರ ಡಬಲ್ ಎಲಿಮಿನೇಷನ್ ಪಕ್ಕಾ ಎನ್ನಲಾಗುತ್ತಿದೆ.

Leave a Comment